ಕೊರೋನಾ ವಾರಿಯರ್ಸ್‌ಗೆ ಅಗತ್ಯ ವಸ್ತು ನೀಡಿ ಮಾನವೀಯತೆ ಮೆರೆದ ನಟ ಶ್ರೀಮುರಳಿ!

First Published May 10, 2021, 11:20 AM IST

ಕೊರೋನಾ ಸಂಕಷ್ಟದ ಸಮಯದಲ್ಲಿ ಜೀವವನ್ನು ಲೆಕ್ಕಿಸದೇ ಕೆಲಸ ಮಾಡುತ್ತಿರುವ ವೈದ್ಯಕೀಯ  ಸಿಬ್ಬಂದಿಗೆ ಹಾಗೂ ಫ್ರಂಟ್ ಲೈನ್‌ ಕೆಲಸಗಾರರ ಸಹಾಯಕ್ಕೆ ನಟ ಶ್ರೀಮುರಳಿ ಮುಂದಾಗಿದ್ದಾರೆ. 
 

ಸ್ಯಾಂಡಲ್‌ವುಡ್‌ ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ರಂಟ್‌ ಲೈನ್‌ ವರ್ಕರ್ಸ್‌ ಸಹಾಯಕ್ಕೆ ಮುಂದಾಗಿದ್ದಾರೆ.
undefined
ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಆಹಾರ ವಿತರಿಸುತ್ತಿದ್ದಾರೆ.
undefined
ಸುಮಾರು 5 ಸರಕಾರಿ ಆಸ್ಪತ್ರೆಗೆ ಈ ವ್ಯವಸ್ಥೆ ಒದಗಿಸಿದ್ದಾರೆ 'ಭರಾಟೆ' ಹುಡುಗ.
undefined
ಕೆ.ಸಿ ಜನರಲ್ ಆಸ್ಪತ್ರೆ, ಇಎಸ್‌‌ಐ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ವೈದ್ಯರಿಗೆ, ನರ್ಸ್‌ ಹಾಗೂ ಇನ್ನಿತರೆ ಸಿಬ್ಬಂದಿಗೆ ದಿನವೂ ಊಟದ ವ್ಯವಸ್ಥೆ ಕೂಡ ಮಾಡಿಸಿದ್ದಾರೆ.
undefined
ಶ್ರೀಮುರಳಿ ಮಾನವೀಯ ಗುಣವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚಿ, ಕೊಂಡಾಡಿದ್ದಾರೆ.
undefined
ಪ್ರತಿಯೊಬ್ಬ ಫ್ರಂಟ್ ಲೈನ್‌ ಕೆಲಸಗಾರರಿಗೂ ಈ ಸೇವೆ ತಲುಪ ಬೇಕೆಂದು ಶ್ರೀಮುರಳಿ ಬೆನ್ನೆಲುಬಾಗಿ ಅಭಿಮಾನಿಗಳು ಸಹಾಯಕ್ಕೆ ಮುಂದಾಗಿದ್ದಾರೆ.
undefined
click me!