ಸ್ಯಾಂಡಲ್‌ವುಡ್‌ನಲ್ಲಿ 'ಅಂದರ್‌ ಬಹರ್' ಆಡಿ 'ರಾಜ ರಾಜೇಂದ್ರ'ನಾದ ನಟ ಶ್ರೀ ಹರಿ!

First Published Aug 15, 2020, 4:46 PM IST

ಸಾಫ್ಟ್‌ವೇರ್‌  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟ ಶ್ರೀ ಹರಿ ಅಭಿನಯ ತರಂಗ ರಂಗಶಾಲೆ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು.  ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿರುವ ಹರಿ ರಿಯಲ್‌ ಲೈಫ್‌ ಪರಿಚಯ ಇಲ್ಲಿದೆ....

ಶ್ರೀ ಹರಿ ರಾಯಪ್ಪ ಮೂಲತಃ ಬೆಂಗಳೂರಿನವರು.
undefined
ಎಂಸಿಎ ಪದವೀಧರರು.
undefined
ಕೆಲವು ವರ್ಷಗಳ ಕಾಲ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡಿ, ನಟನೆಗೆ ಕಾಲಿಟ್ಟರು.
undefined
'ಅಭಿನಯ ತರಂಗ' ಎಂದ ರಂಗಶಾಲೆ ಮೂಲಕ ನಟನೆಯನ್ನು ಕರಾತಲಮಲಕ ಮಾಡಿಕೊಂಡಿದ್ದಾರೆ.
undefined
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಬಂಧನ' ಇವರ ಮೊದಲ ಧಾರಾವಾಹಿ.
undefined
ಹಿಂದೆ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ಪಿ.ಶೇಷಾದ್ರಿ ನಿರ್ದೇಶನದ ಮೌನರಾಗ ವೃತ್ತಿ ಜೀವನದಲ್ಲಿ ಬಹಳ ದೊಡ್ಡ ತಿರುವು ನೀಡಿತ್ತು.
undefined
'ಒರಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
undefined
ಕಿಚ್ಚ ಹುಚ್ಚ, ಭೀಮಾತೀರದಲ್ಲಿ, ಅಂದರ್ ಬಹರ್, ಶಿವ, ನಲಿಯೋಣ ಬಾ, ಬಹದ್ದೂರ್, ಸಂತು ಸ್ಟ್ರೈಟ್ ಫಾರ್ವರ್ಡ್, ರಾಜ ರಾಜೇಂದ್ರ, ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಾ, ಕಲಾಸೇವೆ ಮಾಡುತ್ತಿದ್ದಾರೆ.
undefined
ಇನ್ನೂ ಅನೇಕ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕೆಂಬ ಆಶಯವಿದೆ ಇವರಿಗೆ.
undefined
ಅದಕ್ಕಾಗಿ ನಿತ್ಯ ಯೋಗಾಭ್ಯಾಸ ಮಾಡಿ, ಉತ್ತಮ ಶರೀರ ಹಾಗೂ ಒಳ್ಳೆಯ ಶಾರೀರಕ್ಕಾಗಿ ಸಂಗೀತಾಭ್ಯಾಸವನ್ನೂ ಮಾಡುತ್ತಿದ್ದಾರೆ.
undefined
ಇನ್ನೂ ಒಳ್ಳೊಳ್ಳೆ ಪಾತ್ರಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಶ್ರೀ ಹರಿ. ಅವರಿಗೆ ಶುಭವಾಗಲಿ.
undefined
click me!