ಬೆಟ್ಟ ಹತ್ತಿ, ದರ್ಶನ ಮಾಡಿ, ಆ ಕಲ್ಲಿನ ಮೇಲೆ ಮಲಗೋದೇ ನೆಮ್ಮದಿ; ಜೇನುಕಲ್ಲು ಸಿದ್ದೇಶ್ವರದಲ್ಲಿ ಧನಂಜಯ!

ನಟ ಧನಂಜಯ ಮದುವೆಯಾದ ಬಳಿಕ ಪತ್ನಿ ಧನ್ಯತಾ ಜೊತೆಗೆ ಹಾಸನದ ಪ್ರಸಿದ್ಧ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಧನಂಜಯ ನಿರ್ಮಾಣದ ʼವಿದ್ಯಾಪತಿʼ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹೀಗಾಗಿ ಈ ದಂಪತಿ ದೇವರ ಆಶೀರ್ವಾದ ಪಡೆಯಲು ಹೋಗಿದೆ. 

daali dhananjaya wife dhanyatha visit Shri Jenukallu Siddeshwara Swamy Gudi Betta

ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆಯಾದ ಧನಂಜಯ ಅವರು ಆಮೇಲೆ ಪತ್ನಿ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಹಾಸನದ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. 

daali dhananjaya wife dhanyatha visit Shri Jenukallu Siddeshwara Swamy Gudi Betta

"ಬೆಟ್ಟ ಹತ್ತಿ ದರ್ಶನ ಮಾಡಿ, ಕಾಯಿ ಬಾಳೆ ಹಣ್ಣು ತಿಂದು, ಆ ಕಲ್ಲಿನ ಮೇಲೆ ಮಲ್ಕೊಳ್ಳೊದೆ ಒಂದು ನೆಮ್ಮದಿ. ಈ ಥರ ನಿದ್ದೆ ಮಾಡೋದರಲ್ಲಿ ಸಖತ್ ನೆಮ್ಮದಿ ಸಿಗುತ್ತೆ, ಅದು ದೇವಸ್ಥಾನದಲ್ಲಿ ಮಾತ್ರ, ಅದ್ರಲ್ಲೂ ಕಲ್ಲಿನ ಮೇಲೆ" ಎಂದು ಧನಜಂಯ ಅವರ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. 


ʼಡಾಲಿ ಪಿಕ್ಚರ್ಸ್ʼ‌ ಅಡಿಯಲ್ಲಿ ʼವಿದ್ಯಾಪತಿʼ ಸಿನಿಮಾ ನಿರ್ಮಾಣ ಆಗಿದೆ. ಏಪ್ರಿಲ್‌ 10ರಂದು ಈ ಸಿನಿಮಾ ರಿಲೀಸ್‌ ಆಗಲಿದೆ. ಇನ್ನು ಡಾ ನಾಗಭೂಷಣ್‌, ಮಲೈಕಾ ವಸುಪಾಲ್‌ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
 

ಹಾಸನದ ಅರಸಿಕೆರೆ ತಾಲೂಕಿನ ಯಾದಪುರದಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನವಿದೆ. ಅರಸಿಕೆರೆಯಿಂದ 8 ಕಿಮೀಟರ್ ದೂರದಲ್ಲಿ ಈ ದೇಗುಲ ಇದೆ. ಬೆಟ್ಟದ ಮೇಲೆ ಈ ದೇವಸ್ಥಾನವಿದೆ. ಶಿವನಿಗೆ ಸಮರ್ಪಿತವಾದ ದೇಗುಲವಿದು. 
 

1101 ಮೆಟ್ಟಿಲು ಇದ್ದು ಬೆಟ್ಟ ಹತ್ತಬಹುದು. ಉತ್ತರ ಹಾಗೂ ದಕ್ಷಿಣವಾಗಿ ಎರಡೂ ಕಡೆಯಿಂದ ಈ ಬೆಟ್ಟ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿ ಪಾದ ಕೂಡ ಇದೆ. ಈ ಬೆಟ್ಟದ ತುದಿಯಲ್ಲೋಂದು ಗೋಪುರ, ಪಕ್ಕದಲ್ಲಿಯೇ ಗಂಗಮ್ಮ ಕೊಳ, ಬೆಟ್ಟದ ಕೆಳಗೆ ಬಸವಣ್ಣನ ದೇಗುಲವೂ ಇದೆ.

ಬೆಟ್ಟದಲ್ಲಿ ಶ್ರೀಗಳ ಸನ್ನಿಧಾನದ ಪಕ್ಕದಲ್ಲಿ ಯಾವಾಗಲೂ ಜೇನುಗೂಡು ಕಟ್ಟುತ್ತದೆ. ಹೀಗಾಗಿ ಇದನ್ನು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಅಂತ ಕರೆಯುತ್ತಾರೆ. ಈ ಜೇನುಗೂಡಿನಲ್ಲಿ ಜೇನುನೊಣಗಳ ರೂಪದಲ್ಲಿ ದೇವತೆಗಳು ವಾಸವಿರುತ್ತವೆ ಎಂದು ನಂಬಲಾಗುತ್ತದೆ. ಇನ್ನು ಜೇನುಕಲ್ಲು ಸಿದ್ದೇಶ್ವರರನ್ನು ಸಿದ್ದೇಶ್ವರ, ಅಜ್ಜಯ್ಯಾ ಎಂದೂ ಕರೆಯುತ್ತಾರೆ. 

Latest Videos

vuukle one pixel image
click me!