ಮಂಡ್ಯದ ಗಂಡು
ಮಂಡ್ಯದ ಚೇತನ್ಅವರು, 17 ವರ್ಷದ ಹಿಂದೆ ಬಣ್ಣದ ಲೋಕದ ಕನಸನ್ನು ಹೊತ್ತು ಬೆಂಗಳೂರಿಗೆ ಬಂದವರು. 'ನನಗೆ ಚಿಕ್ಕಂದಿನಿಂದಲೂ ಹೀರೋ ಆಗಬೇಕು ಅಂತ ಆಸೆ ಇತ್ತು. ಆದರೆ ಇದನ್ನು ನಂಬಿ ತುಂಬಾ ಹಣ ಕಳೆದುಕೊಂಡೆ. ತುಂಬಾ ಮಂದಿ ಮೋಸ ಮಾಡಿದ್ರು. ದೇವಿ ಸಿನಿಮಾಕ್ಕೆ ಕಥೆ ಬರೆದು ಇಟ್ಟುಕೊಂಡ್ರೂ ನನ್ನಿಂದ ಹಣ ಪಡೆದು ಎಲ್ಲಾ ಮೋಸ ಮಾಡಿಬಿಟ್ಟರು. ನಾವು ರೈತರು, ರೈತರಾಗಿಯೇ ಉಳಿದುಕೊಳ್ಳೋಣ ಅಂತ ಊರಿಗೆ ಹೊರಟಿದ್ದೆ' ಎಂದು ಭಾವುಕರಾಗಿ ಮಾತನ್ನಾಡಿದ್ದಾರೆ ಚೇತನ್.
ಮೋಸಗಳ ಸರಣಿಯಲ್ಲಿ ಸಿಕ್ಕಿಬಿದ್ದಿದ್ದೆ!
'ಒಂದೂವರೆ ವರ್ಷದ ಹಿಂದೆ ಒಬ್ಬ ನಿರ್ದೇಶಕ ಬಂದು, ಸ್ಟೋರಿ ಚೆನ್ನಾಗಿದೆ. ದುಡ್ಡು ಹಾಕಲು ಹೇಳಿದ್ರು. ನಾವು ಹಳ್ಳಿ ಜನ ಮುಗ್ದರು, ಸರಿ ಆಯ್ತು ಅಂತ ದುಡ್ಡು ಹಾಕಿದೆ. ಆದರೆ ಅವರು ನಾಪತ್ತೆಯಾದರು. ಡೈರೆಕ್ಟರ್ ಎಲ್ಲಿ ಅಂತ ಕೇಳಿದ್ರೆ ಡೈರೆಕ್ಟರ್ ಎಲ್ಲಿಯೂ ಕಾಣಿಸಲಿಲ್ಲ. ಕೊನೆಗೆ ಸಿನಿಮಾ ಮಾಡೋಕಾಗಲ್ಲ ಅಂದ್ರು. ತುಂಬಾ ನೋವಾಯ್ತು. ಆ ಸಮಯದಲ್ಲಿಯೇ ಒಬ್ಬರ ಮೇಲೊಬ್ಬರು ಬಂದು ಮೋಸ ಮಾಡುತ್ತಲೇ ಹೋದರು' ಎಂದಿದ್ದಾರೆ ರೈತ ನಾಯಕ ಚೇತನ್.