ಆಗ ಜಯದೇವ್, “ಎಡಗಾಲಲ್ಲಿ ಒದ್ದು ಮೂಲೆಗೆ ಕಸದ ಥರ ಬೀಸಾಕಿದ್ರೂ ಕೂಡ ನಿನ್ನ ಕೊಬ್ಬು ಕರಗಲಿಲ್ಲ. ನಿನ್ನ ಸಂಸಾರವನ್ನು ನೆಟ್ಟಗೆ ಮಾಡಿಕೊಂಡು, ಆಮೇಲೆ ಬೇರೆಯವರ ಸಂಸಾರದ ಕಡೆಗೆ ಬೆರಳು ತೋರಿಸು. ಉರಿಸೋದು, ಉರಿಸಿ ಮಜಾ ತಗೊಳೋದು ನಿಮಗಿಂತ ಹತ್ತರಷ್ಟು ಮಾಡಬಲ್ಲೆ. ಕನ್ನಡಿಯಲ್ಲಿನ ನಿನ್ನ ಮುಖ ನೋಡಿಕೋ, ಗತಿಗೆಟ್ಟವನು ನಿನ್ನ ಮದುವೆ ಆಗಬೇಕು ಅಷ್ಟೇ. ಕೆಫೆಯಲ್ಲಿ ಕಾಲ್, ಮೆಸೇಜ್, ಪ್ರಫೋಸಲ್ಸ್, ಅಬ್ಬಬ್ಬಾ..ಏನ್ ನಾಟಕ ಮಾಡ್ತೀರಿ. ಬಣ್ಣ ಹಚ್ಚಿಕೊಳ್ಳದೆ ಏನ್ ನಾಟಕ ಮಾಡ್ತೀರಿ?” ಎಂದು ನಿಂದಿಸಿದ್ದಾನೆ.