Chanakya Niti: ಕೆಲವೊಮ್ಮೆ ವ್ಯಕ್ತಿಗೆ ಇನ್ನೊಬ್ಬರ ಸಹಾಯ ಬೇಕಾಗುತ್ತದೆ. ಆಗ ಕೆಲವರು ಬೆಂಬಲ ನೀಡುತ್ತಾರೆ. ಮತ್ತೆ ಕೆಲವರು ಬೆಂಬಲ ನೀಡುವುದಿಲ್ಲ. ಆ ಸಂದರ್ಭದಲ್ಲಿ ಅವರನ್ನು ತಮ್ಮ ಕಡೆಗೆ ಹೇಗೆ ತಿರುಗಿಸಬೇಕು?, ಆ ಜನರನ್ನು ಯಾವ ವಿಷಯ ಆಕರ್ಷಿಸುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು.
ಜಗತ್ತಿನಲ್ಲಿ ಹಲವಾರು ರೀತಿಯ ಜನರಿದ್ದಾರೆ. ಅವರ ಪ್ರವೃತ್ತಿಗಳು ಸಹ ವಿಭಿನ್ನವಾಗಿವೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜನರ ಸೈಕಾಲಜಿಯನ್ನ ಬಹಳ ವಿವರವಾಗಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಯಾರನ್ನಾದರೂ ತಮ್ಮ ಕಡೆಗೆ ಹೇಗೆ ತಿರುಗಿಸಬೇಕು ಎಂಬುದನ್ನು ಸಹ ಅವರು ವಿವರಿಸಿದ್ದಾರೆ. ಕೆಲವೊಮ್ಮೆ ವ್ಯಕ್ತಿಗೆ ಇನ್ನೊಬ್ಬರ ಸಹಾಯ ಬೇಕಾಗುತ್ತದೆ. ಆಗ ಕೆಲವರು ಬೆಂಬಲ ನೀಡುತ್ತಾರೆ. ಮತ್ತೆ ಕೆಲವರು ಬೆಂಬಲ ನೀಡುವುದಿಲ್ಲ. ಆ ಸಂದರ್ಭದಲ್ಲಿ ಅವರನ್ನು ತಮ್ಮ ಕಡೆಗೆ ಹೇಗೆ ತಿರುಗಿಸಬೇಕು?, ಆ ಜನರನ್ನು ಯಾವ ವಿಷಯ ಆಕರ್ಷಿಸುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಒಂದು ವೇಳೆ ನೀವು ಅದನ್ನು ಅರ್ಥಮಾಡಿಕೊಂಡರೆ ಯಾರನ್ನಾದರೂ ಸುಲಭವಾಗಿ ನಿಯಂತ್ರಿಸಬಹುದು. ಇಂದು ಅಂತಹ ಜನರ ಬಗ್ಗೆ ತಿಳಿದುಕೊಳ್ಳೋಣ..
25
ದುರಾಸೆ
ದುರಾಸೆಯ ಜನರು ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ದುರಾಸೆಯ ವ್ಯಕ್ತಿಯ ದೌರ್ಬಲ್ಯವೆಂದರೆ ಹಣ. ಅಂತಹ ವ್ಯಕ್ತಿಯ ಮುಂದೆ ನೀವು ಹಣಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಮಾಡಬೇಕು. ನೀವು ಹಾಗೆ ಮಾಡಿದರೆ ಏನು ಹೇಳಿದರೂ ಅವರು ಕೇಳುತ್ತಾರೆ.
35
ಕೋಪ
ತುಂಬಾ ಕೋಪಗೊಂಡ ಜನರ ಮುಂದೆ ನೀವು ಕೂಡ ಕೋಪಗೊಂಡರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ನೀವು ಹಾಗೆ ಮಾಡಿದರೆ ಅವರು ನಿಮ್ಮ ಶತ್ರುಗಳಾಗುತ್ತಾರೆ. ತಾಳ್ಮೆ ಇರುವ ವ್ಯಕ್ತಿ ಮಾತ್ರ ಕೋಪಗೊಂಡ ವ್ಯಕ್ತಿಯನ್ನು ನಿಯಂತ್ರಿಸಬಹುದು. ಇನ್ನೊಬ್ಬ ವ್ಯಕ್ತಿ ಕೋಪಗೊಂಡಾಗ ನೀವು ಶಾಂತವಾಗಿರಬೇಕು. ಅವರ ಕೋಪ ಕಡಿಮೆಯಾದ ನಂತರ ನೀವು ಶಾಂತವಾಗಿ ನಿಮ್ಮ ಅಭಿಪ್ರಾಯವನ್ನು ವಿವರಿಸಬೇಕು. ಆಗ ಅವರು ನಿಮ್ಮ ಮಾತನ್ನು ಕೇಳುತ್ತಾರೆ.
ಕೆಲವರು ಹೊಗಳಿಕೆಯನ್ನು ಇಷ್ಟಪಡುತ್ತಾರೆ. ಅವರು ಯಾವಾಗಲೂ ಇನ್ನೊಬ್ಬರು ಹೊಗಳಬೇಕೆಂದು ಬಯಸುತ್ತಾರೆ. ಅಂತಹ ಜನರು ಹೊಗಳಿಕೆಯನ್ನು ಕೇಳಿದ ನಂತರ ಹೆಚ್ಚು ಶ್ರೇಷ್ಠರೆಂದು ಭಾವಿಸುತ್ತಾರೆ. ಅಂತಹ ಸಮಯದಲ್ಲಿ ಅವರಿಗೆ ಹೊಗಳಿದರೆ ಏನು ಹೇಳಿದರೂ ಕೇಳುತ್ತಾರೆ. ಇದು ಪ್ರಸ್ತುತ ಕಾಲದಲ್ಲಿ ನಡೆಯುತ್ತಿದೆ.
55
ಬುದ್ಧಿವಂತ ಜನರು
ಜಗತ್ತಿನ ಅತ್ಯಂತ ಕಠಿಣ ವಿಷಯವೆಂದರೆ ಬುದ್ಧಿವಂತರನ್ನು ನಿಯಂತ್ರಿಸುವುದು. ಬುದ್ಧಿವಂತ ಜನರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ತಿಳುವಳಿಕೆ ಇರುತ್ತದೆ. ಯಾರು ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಯಾರು ಅಲ್ಲ ಎಂಬುದನ್ನು ಅವರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಸತ್ಯದ ಮೂಲಕ ಮಾತ್ರ ಅವರನ್ನು ನಿಯಂತ್ರಿಸಬಹುದು. ಅವರು ಸತ್ಯವನ್ನು ಹೇಳುವವರನ್ನು ಮಾತ್ರ ನಂಬುತ್ತಾರೆ.