ಈ ಮಿಶ್ರಣವನ್ನ ಸೋಸಿ ಸ್ಪ್ರೇ ಬಾಟಲಿಗೆ ಹಾಕಿ. ಜಿರಳೆ, ಬಲಿಗಳು ಜಾಸ್ತಿ ಕಾಣಿಸಿಕೊಳ್ಳೋ ಜಾಗದಲ್ಲಿ, ಅದರಲ್ಲೂ ಅಡುಗೆ ಮನೆ, ಬಾತ್ರೂಮ್ ಮೂಲೆಗಳಲ್ಲಿ, ಕಪ್ಬೋರ್ಡ್ ಹಿಂದೆ ಈ ದ್ರಾವಣ ಸ್ಪ್ರೇ ಮಾಡಿ. ರಾತ್ರಿ ವೇಳೆ ಸ್ಪ್ರೇ ಮಾಡಿದ್ರೆ ಒಳ್ಳೆಯ ರಿಸಲ್ಟ್ ಸಿಗುತ್ತೆ.
ಗಮನಿಸಿ..
ಮಕ್ಕಳು ಅಥವಾ ಸಾಕುಪ್ರಾಣಿಗಳಿಗೆ ಈ ದ್ರಾವಣ ತಾಗದಂತೆ ಎಚ್ಚರ ವಹಿಸಿ. ಇದು ನೈಸರ್ಗಿಕ ಪದಾರ್ಥಗಳಿಂದ ತಯಾರಾಗಿದ್ರೂ, ಇದರ ಘಾಟು ವಾಸನೆಯಿಂದ ತೊಂದರೆ ಆಗಬಹುದು. ಪ್ರತಿ ವಾರ ಒಮ್ಮೆ ಈ ಉಪಾಯ ಬಳಸಿದ್ರೆ, ಜಿರಳೆ, ಬಲಿಗಳು ಮತ್ತೆ ಬರೋದು ಕಡಿಮೆ ಆಗುತ್ತೆ. ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡೋದು ಮುಖ್ಯ.
ಕೊನೆಯದಾಗಿ:
ಈ ನೈಸರ್ಗಿಕ ಮನೆಮದ್ದಿನಿಂದ ನಿಮ್ಮ ಮನೆಯನ್ನ ಜಿರಳೆ, ಬಲಿಗಳಿಂದ ಮುಕ್ತವಾಗಿಡಬಹುದು. ಇದು ಕೆಮಿಕಲ್ ಇಲ್ಲದೆ, ಆರೋಗ್ಯಕ್ಕೆ ಹಾನಿ ಮಾಡದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಹಸಿಮೆಣಸಿನಕಾಯಿ, ಬೆಳ್ಳುಳ್ಳಿಯ ಘಾಟು ಗುಣಗಳು ಅವುಗಳನ್ನ ದೂರವಿಡುತ್ತವೆ. ಈ ಮನೆಮದ್ದನ್ನ ಟ್ರೈ ಮಾಡಿ ನೋಡಿ. ಖಂಡಿತ ಒಳ್ಳೆಯ ರಿಸಲ್ಟ್ ಸಿಗುತ್ತೆ.