ಈರುಳ್ಳಿ ಭೂಮಿಯೊಳಗೆ ಬೆಳೆಯುವಾಗ, ಮಣ್ಣಿನಲ್ಲಿರುವ ಸಲ್ಫರ್ (sulphur) ಅಂಶವನ್ನು ಹೀರಿಕೊಂಡು ತನ್ನ ಜೀವಕೋಶಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಾವು ಈರುಳ್ಳಿಯನ್ನು ಕತ್ತರಿಸಿದಾಗ, ಆ ಜೀವಕೋಶಗಳು ಒಡೆದು, ಅದರಿಂದ ಎಂಜೈಮ್ಗಳು ಮತ್ತು ಸಲ್ಫರ್ ಸಂಯುಕ್ತಗಳು (sulphur compounds) ಹೊರಬರುತ್ತವೆ. ಇವೆರಡೂ ಸೇರಿ ರಾಸಾಯನಿಕ ಕ್ರಿಯೆ ನಡೆದು, 'ಸಿನ್-ಪ್ರೊಪನೆಥಿಯಲ್ ಎಸ್-ಆಕ್ಸೈಡ್' (syn-propanethial S-oxide) ಎಂಬ ಅನಿಲ ಉತ್ಪತ್ತಿಯಾಗುತ್ತದೆ.
ಈ ಅನಿಲ ಗಾಳಿಯಲ್ಲಿ ಹರಡಿ ನಮ್ಮ ಕಣ್ಣುಗಳನ್ನು ತಲುಪುತ್ತದೆ. ನಮ್ಮ ಕಣ್ಣುಗಳಲ್ಲಿರುವ ತೇವಾಂಶದೊಂದಿಗೆ ಈ ಅನಿಲ ಸೇರಿದಾಗ, ಅದು ಸೌಮ್ಯವಾದ ಸಲ್ಫ್ಯೂರಿಕ್ ಆಮ್ಲವಾಗಿ ಬದಲಾಗುತ್ತದೆ. ಈ ಆಮ್ಲವು ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡಿ, ಕಣ್ಣೀರಿನ ಗ್ರಂಥಿಗಳನ್ನು ಪ್ರಚೋದಿಸುತ್ತದೆ. ಇದೇ ಕಾರಣಕ್ಕೆ ಕಣ್ಣಿನಿಂದ ನೀರು ಸುರಿಯುತ್ತದೆ.
ಈ ಸಮಸ್ಯೆಯಿಂದ ಪಾರಾಗಲು ಕೆಲವು ಸುಲಭ ಉಪಾಯಗಳಿವೆ. ಇವುಗಳನ್ನು ಅನುಸರಿಸಿದರೆ, ಇನ್ನು ಮುಂದೆ ಈರುಳ್ಳಿ ಕತ್ತರಿಸುವಾಗ ಅಳಬೇಕಾಗಿಲ್ಲ!