ಗುರೂಜಿ ಕಮಲಾಕರ್‌ ಭಟ್‌ ಜೊತೆ ಮಹಿಳೆಯ ಚಕ್ಕಂದ; ತಂದೆಗೆ ಮೆಸೇಜ್‌ ಕಳಿಸಿದ್ದ ಮಗಳು, ಮುಂದಾಗಿದ್ದು ಅನಾಹುತ!

Published : Feb 03, 2026, 04:43 PM IST

ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣದ ಹಿಂದೆ ಶಿವಮೊಗ್ಗದ ಗುರೂಜಿ ಕಮಲಾಕರ ಭಟ್ ಮತ್ತು ವಿವಾಹಿತೆ ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಕಥೆಯಿದೆ. ಈ ರಹಸ್ಯವನ್ನು ಮಗಳು ತನ್ನ ತಂದೆಗೆ ಸಂದೇಶದ ಮೂಲಕ ತಿಳಿಸಿದ್ದರಿಂದ, ನಂತರ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

PREV
15

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಮತ್ತು ಕೊಲೆ ಪ್ರಕರಣದ ಹಿಂದೆ ಶಿವಮೊಗ್ಗದ ಕಮಲಾಕರ ಭಟ್ ಗುರೂಜಿ ಹಾಗೂ ವಿವಾಹಿತ ಮಹಿಳೆ ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಕಥೆ ಈಗ ಜಗಜ್ಜಾಹೀರಾಗಿದೆ. 20 ವರ್ಷಗಳ ಸುದೀರ್ಘ ದಾಂಪತ್ಯವನ್ನು ಬದಿಗಿಟ್ಟು ಗುರೂಜಿ ಜೊತೆ ಪತ್ನಿ ನಡೆಸುತ್ತಿದ್ದ ಸಂಸಾರವನ್ನು ಮಗಳೇ ತಂದೆಗೆ ರಹಸ್ಯವಾಗಿ ತಿಳಿಸಿದ್ದರಿಂದ ಈ ಮಹಾಸ್ಫೋಟ ಸಂಭವಿಸಿದೆ.

25

ಸುಚಿತ್ರಾ ಕಳೆದ ಆರು ತಿಂಗಳ ಹಿಂದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಗಂಡ ಮಹೇಶ್‌ಗೆ ತಿಳಿಸದೆ ನಾಪತ್ತೆಯಾಗಿದ್ದಳು. ಅವಳು ಶಿವಮೊಗ್ಗದಲ್ಲಿ ಕಮಲಾಕರ ಭಟ್ ಗುರೂಜಿ ಜೊತೆ ವಾಸವಿರುವುದು ಯಾರಿಗೂ ತಿಳಿದಿರಲಿಲ್ಲ. ಆದರೆ, ಸುಚಿತ್ರಾ ಮಗಳು ರಹಸ್ಯವಾಗಿ ತಂದೆಗೆ ಮೆಸೇಜ್ ಕಳುಹಿಸಿ ಸತ್ಯ ಬಿಚ್ಚಿಟ್ಟಿದ್ದಳು.

35

"ಅಪ್ಪ, ನಾನು ಮತ್ತು ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ಅಮ್ಮ ಮತ್ತು ಗುರೂಜಿ ಬೇರೆ ರೂಮಿನಲ್ಲಿ ಇರುತ್ತಾರೆ. ಅಮ್ಮ ನನಗೆ ತುಂಬಾ ಹಿಂಸೆ ನೀಡುತ್ತಿದ್ದಾಳೆ, ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು, ಇಲ್ಲದಿದ್ದರೆ ನಾನು ಸಾಯುತ್ತೇನೆ," ಎಂದು ಮಗಳು ಬೇಸರದಿಂದ ತನ್ನ ತಂದೆ ಮಹೇಶ್‌ಗೆ ಸಂದೇಶ ಕಳಿಸಿದ್ದಳು.

45

ಈ ನಡುವೆ, ಸುಚಿತ್ರಾ ಮತ್ತು ಗುರೂಜಿ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳು ಲಭ್ಯವಾಗಿವೆ. ಸುಚಿತ್ರಾಳ ಹೆಗಲ ಮೇಲೆ ಕೈಹಾಕಿ ಗುರೂಜಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಹಾಗೂ "ನನ್ನ ಕುಟುಂಬ" ಎಂದು ಗುರೂಜಿ ಶೀರ್ಷಿಕೆ ನೀಡಿರುವ ಫೋಟೋಗಳು ಇಬ್ಬರ ನಡುವಿನ ಸಂಬಂಧಕ್ಕೆ ಪುಷ್ಟಿ ನೀಡುವಂತಿದೆ.

55

ಮಗಳು ತಂದೆಯ ಬಳಿ ಬಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಆಕ್ರೋಶಗೊಂಡ ಸುಚಿತ್ರಾ ಮತ್ತು ಆಕೆಯ ತಂದೆ, ಇತರ ನಾಲ್ವರೊಂದಿಗೆ ರಾತ್ರಿ ವೇಳೆ ಮಹೇಶ್ ಮನೆಗೆ ನುಗ್ಗಿದ್ದಾರೆ. ಚಾಕು ಹಿಡಿದು ನಡೆಸಿದ ಈ ದಾಳಿಯಲ್ಲಿ ಮಹೇಶ್ ಅವರ ತಮ್ಮ ವಸಂತ್ ನಾಯ್ಕ್ ಮತ್ತು ನೆರೆಯ ಕುಮಾರ್ ಅವರಿಗೆ ತೀವ್ರವಾಗಿ ಇರಿಯಲಾಗಿದೆ. ಈ ರಕ್ತಸಿಕ್ತ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದು, ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

Read more Photos on
click me!

Recommended Stories