ಮಧುಮೇಹ ಸೇರಿ, ಈ ಎಲ್ಲಾ ರೋಗಗಳಿಗೂ ಅದ್ಭುತ ಔಷಧಿ ಕೊತ್ತಂಬರಿ ಸೊಪ್ಪು

First Published Jun 18, 2021, 5:46 PM IST

ಯಾವುದೇ ಖಾದ್ಯದ ವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದು ಆಹಾರದ ರುಚಿ ಹೆಚ್ಚಿಸುವುದಲ್ಲದೆ ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ತಿಳಿದಿದೆಯೇ? ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಲ್ಲಿ ಇದು ಸಹಾಯಕವಾಗಿದೆ.
 

ಕೊತ್ತಂಬರಿ ಸೊಪ್ಪಿನಲ್ಲಿ ಕಂಡುಬರುವ ಅಂಶಗಳುಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ಪೊಟ್ಯಾಷಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಷಿಯಮ್ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
undefined
ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳುಹೊಟ್ಟೆಯ ಸಮಸ್ಯೆಗೆ ಮದ್ದುಆಯುರ್ವೇದದ ಪ್ರಕಾರ, ಮಲಬದ್ಧತೆಯಿಂದ ಬಳಲುತ್ತಿದ್ದರೆ ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸಿ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಾಯಕವಾಗಿದೆ. ಹಾಗೆ ಸೇವಿಸಲು ಸಾಧ್ಯವಿಲ್ಲದಿದ್ದರೆ ಮಜ್ಜಿಗೆ ಬೆರೆಸಿದ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ ನಿವಾರಣೆ ಮಾಡಬಹುದು.
undefined
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಸಿರು ಕೊತ್ತಂಬರಿ ಸಹಾಯಕ. ಇದರಲ್ಲಿ ಕಂಡುಬರುವ ಅಂಶಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೊತ್ತಂಬರಿ ಸೊಪ್ಪಲ್ಲದೇ ಕೊತ್ತಂಬರಿ ಬೀಜಗಳೂ ಕೊಬ್ಬು ಕರಗಿಸಲು ಸಹಕಾರಿ.
undefined
ಮಧುಮೇಹಿಗಳಿಗೆ ಮದ್ದುಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೂ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಸಿರು ಕೊತ್ತಂಬರಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಬಹುದು.
undefined
ರಕ್ತದಲ್ಲಿನ ಸಕ್ಕರೆ ಮಟ್ಟಕೊತ್ತಂಬರಿ ಬೀಜಗಳು, ಸಾರ ಮತ್ತು ಎಣ್ಣೆಗಳು ಎಲ್ಲವೂ ರಕ್ತದಲ್ಲಿನ ಸಕ್ಕರೆಕಡಿಮೆ ಮಾಡುತ್ತದೆ. ವಾಸ್ತವವಾಗಿ, ಕಡಿಮೆ ರಕ್ತ ಸಕ್ಕರೆ ಹೊಂದಿರುವ ಅಥವಾ ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುವ ಜನರು ಕೊತ್ತಂಬರಿ ಸೇವಿಸುವಾಗ ಎಚ್ಚರದಿಂದಿರಬೇಕು. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ.
undefined
ಕಣ್ಣುಗಳಿಗೆ ಪ್ರಯೋಜನಕಾರಿಹಸಿರು ಕೊತ್ತಂಬರಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ವಿಟಮಿನ್ ಎ ಕಣ್ಣುಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ಸೇವಿಸುವ ಮೂಲಕ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಹುದು.
undefined
ರಕ್ತದೊತ್ತಡ ನಿವಾರಣೆಕೊತ್ತಂಬರಿ ಸಾರವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ದೇಹವು ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಫ್ಲಶ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು
undefined
ಹೃದ್ರೋಗದ ಅಪಾಯ ಕಡಿಮೆಕೆಲವು ಪ್ರಾಣಿ ಮತ್ತು ಪ್ರನಾಳ ಅಧ್ಯಯನಗಳು ಕೊತ್ತಂಬರಿಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳಂತಹ ಹೃದ್ರೋಗ ಅಪಾಯದ ಅಂಶಗಳನ್ನು ಕಡಿಮೆ ಮಾಡಬಹುದು ಎಂದು ಸೂಚಿಸುತ್ತವೆ.
undefined
ಮೆದುಳಿನ ಅರೋಗ್ಯಪಾರ್ಕಿನ್ಸನ್, ಅಲ್ಝೈಮರ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಅನೇಕ ಮೆದುಳಿನ ಕಾಯಿಲೆಗಳು ಉರಿಯೂತಕ್ಕೆ ಸಂಬಂಧಿಸಿವೆ. ಕೊತ್ತಂಬರಿಯ ಉರಿಯೂತ ನಿವಾರಕ ಗುಣಗಳು ಈ ರೋಗಗಳ ವಿರುದ್ಧ ರಕ್ಷಿಸಬಹುದು. ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.
undefined
ಇನ್ಫೆಕ್ಷನ್ ವಿರುದ್ಧ ಹೋರಾಟಕೊತ್ತಂಬರಿಆಂಟಿಮೈಕ್ರೊಬಿಯಲ್ ಸಂಯುಕ್ತಗಳನ್ನು ಹೊಂದಿರುತ್ತದೆ, ಅದು ಕೆಲವು ಸೋಂಕುಗಳು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿಯಲ್ಲಿರುವ ಡೊಡೆಸೆನಲ್ ಎಂಬ ಸಂಯುಕ್ತವು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಬಹುದು, ಇದು ಮಾರಣಾಂತಿಕ ಆಹಾರ ವಿಷಕ್ಕೆ ಕಾರಣವಾಗಬಹುದು.
undefined
click me!