ಅಶ್ವಗಂಧದಿಂದ, ಬ್ರಾಹ್ಮಿವರೆಗೂ... ಆಯುರ್ವೇದ ಗಿಡಮೂಲಿಕೆಗಳ ಪ್ರಯೋಜನವೇ ಅದ್ಭುತ

First Published Jun 20, 2021, 1:05 PM IST

ಹಲವು ಗಿಡಮೂಲಿಕೆಗಳಲ್ಲಿ ಇಂದು ಅತಿ ಹೆಚ್ಚಿನ ಗಿಡಮೂಲಿಕೆಗಳು ಜನರ ದಿನ ಬಳಕೆಯ ಸಾಮಗ್ರಿಗಳಾಗಿ ಬದಲಾಗಿವೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗಿಡಮೂಲಿಕೆಗಳು ಜನರ ನಿರೀಕ್ಷೆಯಲ್ಲಿ ಇನ್ನೂ ಇವೆ. ಹೀಗಿರಬೇಕಾದರೆ ಜಗತ್ತಿನ ಇಂದಿನ ಆರೋಗ್ಯ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ನೋಡಿದರೆ, ಮನುಷ್ಯ ಯಾವುದನ್ನು ಸಹ ನಿರ್ಲಕ್ಷಿಸುವಂತಿಲ್ಲ. 

ಈ ಲೇಖನದಲ್ಲಿ ವಿವಿಧ ಬಗೆಯ ಗಿಡಮೂಲಿಕೆಗಳಿಂದ ನಮ್ಮ ಆರೋಗ್ಯಕ್ಕೆ ಸಿಗುವಂತಹ ಲಾಭಗಳನ್ನು ತಿಳಿದುಕೊಳ್ಳೋಣ.ನಾವೇಕೆ ಅಶ್ವಗಂಧ ಸೇವಿಸಬೇಕು?ಆಯುರ್ವೇದ ಗಿಡಮೂಲಿಕೆ ಪದಾರ್ಥಗಳಲ್ಲಿ ಅಶ್ವಗಂಧ ಬಹಳಷ್ಟು ಪ್ರಸಿದ್ಧಿ ಪಡೆದ ಗಿಡಮೂಲಿಕೆ. ಏಕೆಂದರೆ ಮನುಷ್ಯನ ಕಾಯಿಲೆಗಳನ್ನು ಗುಣಪಡಿಸುವ ಇದರ ವ್ಯಾಪ್ತಿ ತುಂಬಾ ವಿಸ್ತಾರವಾಗಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ವೃದ್ಧಿಸಿ,ಆರೋಗ್ಯಕರವಾದ ರೋಗ - ನಿರೋಧಕ ಶಕ್ತಿಯನ್ನು ದೇಹಕ್ಕೆ ಒದಗಿಸಿ ಕೊಡುತ್ತದೆ.
undefined
ಅಪಘಾತವಾದ ಸಂದರ್ಭದಲ್ಲಿ ಅಥವಾ ಸಣ್ಣ - ಪುಟ್ಟ ಗಾಯಗಳು ಉಂಟಾದಾಗ ದೇಹದಿಂದ ಹೆಚ್ಚಿನ ಪ್ರಮಾಣದ ರಕ್ತ ನಷ್ಟವಾದರೂ ಕೆಂಪು ರಕ್ತ ಕಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಮಾಡಿ, ದೇಹದಲ್ಲಿ ರಕ್ತದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
undefined
ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಸಾಮಾನ್ಯವಾಗಿ ಅಶ್ವಗಂಧದಿಂದ ನಿರೀಕ್ಷಿಸಬಹುದು.ಶೀತ, ಜ್ವರ ಮತ್ತು ಕೆಮ್ಮಿನಿಂದ ಮುಕ್ತಿ ಕೊಡುತ್ತದೆ.ಮೈ ಕೈ ನೋವು ದೂರ ಮಾಡುತ್ತದೆಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆನೆನಪಿನ ಶಕ್ತಿ ಹೆಚ್ಚಾಗುತ್ತದೆನೈಸರ್ಗಿಕವಾಗಿ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ
undefined
ಅರಿಶಿನನಮ್ಮ ಭಾರತೀಯ ಅಡುಗೆ ಸಂಸ್ಕೃತಿಯಲ್ಲಿ ಪ್ರತಿ ದಿನವೂ ಆಹಾರ ತಯಾರಿಯಲ್ಲಿ ಬಳಕೆಯಾಗುವ ಒಂದು ಮಸಾಲೆ ಪದಾರ್ಥ ಎಂದರೆ ಅದು ಅರಿಶಿನ. ಅಪಾರಆರೋಗ್ಯ ಪ್ರಯೋಜನಗಳನ್ನು ಒಳಗೊಂಡ ಅರಿಶಿನ ತನ್ನಲ್ಲಿ 'Curcumin' ಎಂಬ ಔಷಧೀಯ ಅಂಶವನ್ನು ಆಂಟಿ - ಆಕ್ಸಿಡೆಂಟ್ ರೂಪದಲ್ಲಿ ಒಳಗೊಂಡಿದೆ. ಅರಿಶಿನದಲ್ಲಿ anti - inflammatory ಗುಣ - ಲಕ್ಷಣಗಳು ಸಾಕಷ್ಟಿವೆ.ದೇಹದಲ್ಲಿ ರಕ್ತ ಸಂಚಾರವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಹೃದಯದ ಕಾಯಿಲೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.
undefined
ಅರಿಶಿನದ ಇನ್ನಷ್ಟು ಪ್ರಯೋಜನಗಳನ್ನು ನೋಡುವುದಾದರೆ,ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆಅಲ್ಜೀಮರ್ ಕಾಯಿಲೆಯಿಂದ ರಕ್ಷಣೆ ಕೊಡುತ್ತದೆಹೃದಯಘಾತ ಸಮಸ್ಯೆಯಿಂದ ಕಾಪಾಡುತ್ತದೆಮಂಡಿ ನೋವಿನಿಂದ ಮುಕ್ತಿ ಕೊಡುತ್ತದೆ.ಕ್ಯಾನ್ಸರ್ ಸಮಸ್ಯೆಯಿಂದ ಪಾರು ಮಾಡುತ್ತದೆ.ಮಧುಮೇಹಿ ರೋಗಿಗಳಿಗೆ ತುಂಬಾ ಸಹಕಾರಿ.ನಿದ್ರೆ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ.
undefined
ಏಲಕ್ಕಿಶುಭ ಸಂದರ್ಭಗಳಲ್ಲಿ ತಯಾರು ಮಾಡುವ ಸಿಹಿಭಕ್ಷ - ಭೋಜನಗಳಲ್ಲಿ ಏಲಕ್ಕಿ ಬಳಕೆಯಾಗುತ್ತದೆ. ಆದರೆ ಇದರ ಉಪಯೋಗ ಕೇವಲ ಅಷ್ಟಕ್ಕೇ ಮಾತ್ರ ಸೀಮಿತವಾಗಿರುವುದಿಲ್ಲ. ಆರೋಗ್ಯದ ವಿಚಾರ ಬಂದಾಗ ಏಲಕ್ಕಿ ಉತ್ತಮ ಆಯ್ಕೆ. ಏಲಕ್ಕಿಯಲ್ಲಿ ಮೆಗ್ನೀಷಿಯಂ, ಪೊಟಾಷಿಯಂ, ಫಾಸ್ಫರಸ್ ಮತ್ತು ಕ್ಯಾಲ್ಸಿಯಂ ಸಾಕಷ್ಟು ಕಂಡು ಬರುತ್ತವೆ. ಅಪಾರ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಜೊತೆಗೆ ಜೀರ್ಣ ಶಕ್ತಿಯನ್ನು ಮತ್ತು ಮೆಟಬಾಲಿಸಂ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿ ಏಲಕ್ಕಿ ನಿರ್ವಹಣೆ ಮಾಡುತ್ತದೆ.
undefined
ಏಲಕ್ಕಿಯಲ್ಲಿ ಮನುಷ್ಯನ ಬೊಜ್ಜಿನ ಸಮಸ್ಯೆಮತ್ತು ಉರಿಯೂತವನ್ನು ಕಡಿಮೆ ಮಾಡುವ ಗುಣ - ಲಕ್ಷಣಗಳಿವೆ. ಏಲಕ್ಕಿಯಲ್ಲಿ ಆಂಟಿ - ಬ್ಯಾಕ್ಟೀರಿಯಲ್ ಮತ್ತು ಆಂಟಿ - ಫಂಗಲ್ ಗುಣ - ಲಕ್ಷಣಗಳು ಹೆಚ್ಚಿವೆ.ಮೊಡವೆಗಳ ಕಲೆಹೋಗಲಾಡಿಸುವಲ್ಲಿ, ಪುರುಷರ ಲೈಂಗಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ದೇಹದಲ್ಲಿ ರಕ್ತ ಸಂಚಾರವನ್ನು ಅತ್ಯುತ್ತಮವಾಗಿ ನಿರ್ವಹಿಸಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಏಲಕ್ಕಿ ಅತ್ಯುತ್ತಮವಾಗಿ ಕೆಲಸ ಮಾಡಲಿದೆ.
undefined
ಜೀರಿಗೆಅಡುಗೆ ತಯಾರಿಯ ಒಗ್ಗರಣೆ ಸಾಮಗ್ರಿಯಾಗಿ ಬಳಸುವ ಜೀರಿಗೆಯೂ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ಇದರಲ್ಲಿ ಆಂಟಿ - ಆಕ್ಸಿಡೆಂಟ್ ಗುಣ - ಲಕ್ಷಣಗಳು ಸಾಕಷ್ಟಿವೆ.ಹಾಗಾಗಿ ಚರ್ಮಕ್ಕೆ ಬಹಳಷ್ಟು ಉಪಯುಕ್ತವಾದ ಪ್ರಭಾವ ಬೀರುತ್ತದೆ. ಸೌಂದರ್ಯವನ್ನು ಹೆಚ್ಚಿಸುವಲ್ಲಿಯೂಜೀರಿಗೆ ತುಂಬಾ ಪ್ರಯೋಜನಕಾರಿ.
undefined
ಕ್ಯಾನ್ಸರ್ ಸಮಸ್ಯೆಯ ರೀತಿ ಮಾರಕ ಆರೋಗ್ಯ ಸಮಸ್ಯೆಗಳಿಗೆ ವಿರುದ್ಧವಾಗಿ ದೇಹದಲ್ಲಿ ಜೀರಿಗೆ ಕೆಲಸ ಮಾಡುತ್ತದೆ. ಕರುಳಿನ ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸುವಜೊತೆಗೆ ಮೆದುಳಿನ ಕಾರ್ಯ - ಚಟುವಟಿಕೆಯನ್ನು ಹೆಚ್ಚಿಸಿ,ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಜೀರಿಗೆಯಿಂದ ಅನೇಕ ಲಾಭಗಳಿವೆ. ಹಾಗಾಗಿ ಜೀರಿಗೆ ಬಳಸದೆ ಇರುವವರು ಕೂಡ ಇನ್ನು ಮುಂದೆ ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಯಾವುದಾದರೊಂದು ರೂಪದಲ್ಲಿ ಜೀರಿಗೆ ಬಳಸಿ. ಅದರ ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.
undefined
ಬೇವು'ನಾಲಿಗೆ ಮೇಲಿಟ್ಟರೆ ತುಂಬಾ ಕಹಿ ' ಎಂಬ ಕಾರಣಕ್ಕೆ ತುಂಬಾ ಜನರು ಬೇವಿನಿಂದ ದೂರಉಳಿಯುತ್ತಾರೆ. ಕೇವಲ ಇದರ ಪ್ರಯೋಜನಗಳನ್ನು ಅರ್ಥ ಮಾಡಿಕೊಂಡವರು ಮಾತ್ರ ಆಗಾಗ ಬೇವಿನ ಉತ್ಪನ್ನಗಳನ್ನು ಬಳಸುತ್ತಾರೆ. ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ಪ್ರತಿ ದಿನವೂ ಖಾಲಿ ಹೊಟ್ಟೆಯಲ್ಲಿ ಒಂದೆರಡು ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳಿಂದ ದೂರವುಳಿಯಬಹುದು.
undefined
ಯಾವುದಾದರೂ ವಿಷಕಾರಿ ಜಂತು ಕಚ್ಚಿದ ಸಂದರ್ಭದಲ್ಲಿ ಹಸಿ ಬೇವಿನ ಎಲೆಗಳ ಪೇಸ್ಟ್ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ. ವಾರಕ್ಕೆ ಒಮ್ಮೆಯಾದರೂ ಸಹ ಬೇವಿನ ರಸ ಮಿಶ್ರಣ ಮಾಡಿದ ನೀರಿನಿಂದ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ ದೇಹ ಸ್ವಚ್ಛವಾಗುವುದು ಮಾತ್ರವಲ್ಲದೆ ಚರ್ಮದ ಸೋಂಕುಗಳಿಂದ ಮುಕ್ತವಾಗುತ್ತದೆ.
undefined
ಶಂಕಪುಷ್ಪನಮ್ಮ ಮೆದುಳಿನ ಭಾಗದಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್ ಎಂದರೆ ಅದು ' ಕಾರ್ಟಿಸಾಲ್ ' . ಯಾವಾಗ ಹೊರಗಿನ ಪರಿಸ್ಥಿತಿಯಿಂದ ನಮ್ಮ ಮನಸ್ಸಿಗೆ ಬೇಸರ ಉಂಟಾಗುತ್ತದೆ ಅಂತಹ ಸಂದರ್ಭದಲ್ಲಿ ಮೆದುಳಿನ ಭಾಗದಿಂದ ಕಾರ್ಟಿಸಾಲ್ ಹೆಚ್ಚು ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಮತ್ತು ಮಾನಸಿಕ ಆತಂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಧ್ಯಾನ ಮಾಡಿ ಹೇಗೆ ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳುತ್ತೇವೆ. ಅದೇ ರೀತಿ ಶಂಕಪುಷ್ಪಿ ಸೇವನೆಯಿಂದ ನರಮಂಡಲವನ್ನು ಶಾಂತವಾಗಿಸಿಕೊಳ್ಳಬಹುದು. ನಿದ್ರಾಹೀನತೆ ಸಮಸ್ಯೆಯಿಂದ ದೂರವಾಗಲು ಸಹ ಶಂಕಪುಷ್ಪಿಯನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು.
undefined
ಶಂಕಪುಷ್ಪಿಯ ಇನ್ನಿತರ ಆರೋಗ್ಯ ಪ್ರಯೋಜನರಕ್ತ ವಾಂತಿ ಮಾಡಿಕೊಳ್ಳುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ.ಎಪಿಲೆಪ್ಸಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರಿ.ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಮಧುಮೇಹಿಗಳಿಗೆ ತುಂಬಾ ಉಪಕಾರಿ.ಅಸ್ತಮಾ, ಶೀತ, ಕೆಮ್ಮು, ಜ್ವರ ಇತ್ಯಾದಿ ರೋಗ - ಲಕ್ಷಣಗಳಿಗೆ ರಾಮಬಾಣ.ಪೈಲ್ಸ್ ಮತ್ತು ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
undefined
ಬ್ರಾಹ್ಮಿಅತ್ಯಧಿಕ ಆಂಟಿ - ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡ ಗಿಡಮೂಲಿಕೆ ಎಂದರೆ ಅದು ಬ್ರಾಹ್ಮಿ. ಆರೋಗ್ಯಕರವಾದ ಜೀವನ ಶೈಲಿಯಲ್ಲಿ ಬ್ರಾಹ್ಮಿ ಗಿಡಮೂಲಿಕೆಗೆ ಮಹತ್ತರವಾದ ಪಾತ್ರವಿದೆ. ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಿಯಂತ್ರಿಸುತ್ತದೆ.ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಇದರಿಂದ ಪರಿಹಾರ ಕಾಣುತ್ತವೆ. ಚಿಕ್ಕ ವಯಸ್ಸಿನಿಂದ ಬ್ರಾಹ್ಮಿ ಸೇವಿಸಿದರೆ ನಂತರದ ದಿನಗಳಲ್ಲಿ ಸದೃಢದೈಹಿಕ ಆರೋಗ್ಯ ನಮ್ಮದಾಗುತ್ತದೆ.
undefined
ಮುಳೆತಿಪಾನ್ ಬೀಡಾ ಇತ್ಯಾದಿಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಬಳಕೆಯಾಗುವ ಮುಳೆತಿ ಅತಿ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಈಗ ಮಳೆಗಾಲದ ಸಂದರ್ಭದಲ್ಲಿ ಎದುರಾಗುತ್ತಿರುವ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಗೆ ಇದು ರಾಮಬಾಣ. ಹಲವು ದೊಡ್ಡ ದೊಡ್ಡ ಕಾಯಿಲೆಗಳಿಗೆ ಕೂಡ ಇದರಲ್ಲಿರುವ ಔಷಧೀಯ ಪ್ರಯೋಜನಗಳು ಅತ್ಯಂತ ಸುಲಭವಾಗಿ ಅತ್ಯುತ್ತಮ ಪ್ರಭಾವಗಳನ್ನು ಒದಗಿಸಿ, ಆರೋಗ್ಯವನ್ನು ರಕ್ಷಿಸುತ್ತದೆ.ಕ್ಯಾಲ್ಸಿಯಂ, ಪ್ರೋಟೀನ್ ಅಂಶ ಮತ್ತು ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ಕೊಬ್ಬಿನಂಶದ ಪ್ರಮಾಣವೂ ಇದರಲ್ಲಿದೆ. ಆಂಟಿ - ಆಕ್ಸಿಡೆಂಟ್ ರೂಪದಲ್ಲಿ ಮತ್ತು ಆಂಟಿಬಯೋಟಿಕ್ ಆಗಿ ಮುಳೆತಿ ಕೆಲಸ ಮಾಡಲಿದೆ.
undefined
click me!