ಸ್ಯಾಂಡಲ್ವುಡ್ ಸೇರಿ ಬಾಲಿವುಡ್ನಲ್ಲಿಯೂ ಡ್ರಗ್ಸ್ ಮಾಫಿಯಾ ಸದ್ದು ಜೋರಾಗಿರುವ ಸಂದರ್ಭ ಸಿಟಿ ಬಸ್ ಮಾಲೀಕರೊಬ್ಬರು ವಿನೂತನ ಐಡಿಯಾ ಮೂಲಕ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ದಿಲ್ ರಾಜ್ ಆಳ್ವ ಎಂಬವರು ಒಡೆತನದ ಶ್ರೀ ಗಣೇಶ್ ಪ್ರಸಾದ್ ಎಂಬ ಬಸ್ಸಿನಲ್ಲಿ ಡ್ರಗ್ಸ್ ಜಾಗೃತಿ ಮೂಡಿಸಲಾಗುತ್ತಿದೆ.
ಬಸ್ನ ಎರಡೂ ಬದಿಯಲ್ಲಿಅತ್ಯಾಕರ್ಷಕ ಬಣ್ಣದಿಂದ ಚಿತ್ರ ಬರೆದು, ಜಾಗೃತಿ ವಾಕ್ಯಗಳನ್ನು ಬರೆಯಲಾಗಿದೆ.
ಸಿನಿಮಾ ನಟಿ, ಬಸ್ ಹೆಸರು ಮತ್ತಿನ್ನೇನೋ ಬರೆಯೋ ಬದಲು ಸಮಾಜಮುಖಿ, ಜನಜಾಗೃತಿ ವಿಚಾರವನ್ನು ಪ್ರಸ್ತುತ ಪಡಿಸಿದ ನಡೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.
ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ಬದುಕು ಹಿಂದಿರುಗಲ್ಲ, ಡ್ರಗ್ಸ್ ಅಂದರೆ ಸಮಾಧಿ ಹೀಗೆ ಬರೆಯಲಾಗಿದೆ
Suvarna News