ಅದು 1 ನವೆಂಬರ್ 1979ರ ಘಟನೆ. ಅದು ಇದ್ದಕ್ಕಿದ್ದಂತೆ ರಾತ್ರಿ ಶ್ರೀನಿವಾಸ ಸ್ವಾಮಿಯ ದೇವಸ್ಥಾನದಲ್ಲಿನ ಘಂಟೆಗಳು ಮೊಳಗಲು ಆರಂಭಿಸಿದವು. ತಿರುಮಲದಲ್ಲಿ ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಗ್ಗೆಯೇ ತೆರೆಯಲಾಗುತ್ತದೆ. ಇದು ಇಲ್ಲಿಯ ನಿಯಮ. ಆ ರಾತ್ರಿ ದೇವಾಲಯದೊಳಗೆ ಬಾರಿಸಲು ಶುರುವಾದ ಘಂಟೆ ಸದ್ದು, ತುಂಬಾ ದೂರದವರೆಗೆ ಕೇಳಿಸಿತು ಎಂದು ಭಕ್ತಾದಿಗಳು ಹೇಳುತ್ತಾರೆ. ಬಾಗಿಲು ಹಾಕಿದ್ದರಿಂದ ದೇವಾಸ್ಥಾನದೊಳಗೆ ಯಾರಿಗೂ ಪ್ರವೇಶವಿರಲಿಲ್ಲ