ಅಡುಗೆ ಮನೆಯ ಈ ವಸ್ತುಗಳನ್ನು ಬಳಸಿ ಸುಲಭವಾಗಿ ಎಲ್ಲಾ ದೋಷಗಳನ್ನು ನಿವಾರಿಸಿ

Published : Sep 16, 2022, 03:54 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತೆ . ಜಾತಕದ ಪ್ರಕಾರ, ಅದರ ಶುಭ ಮತ್ತು ಅಶುಭ ಫಲಿತಾಂಶಗಳನ್ನು ಪ್ರತಿಯೊಬ್ಬ ವ್ಯಕ್ತಿಯು ಭರಿಸಬೇಕಾಗುತ್ತೆ. ಜಾತಕದಲ್ಲಿ ಗ್ರಹಗಳ ಸ್ಥಾನವು ಉತ್ತಮವಾಗಿದ್ದರೆ, ವ್ಯಕ್ತಿಯು ಅದೃಷ್ಟದ ಬೆಂಬಲ ಪಡೆಯುತ್ತಾನೆ. ಅಲ್ಲದೇ ಅವನು ಯಾವುದೇ ಅಡೆತಡೆಯಿಲ್ಲದೆ ಯಶಸ್ಸನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ಗ್ರಹಗಳು ದುರ್ಬಲವಾಗಿರುವಾಗ, ಜೀವನದಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳು ಬರುತ್ತವೆ.  ಹಾಗಿದ್ರೆ ಗ್ರಹ ದೋಷಗಳ್ಹಾಗಿದ್ರೆ ಗ್ರಹ ದೋಷಗಳನ್ನು ನಿವಾರಿಸೋದು ಹೇಗೆ ನೋಡೋಣ.

PREV
17
ಅಡುಗೆ ಮನೆಯ ಈ ವಸ್ತುಗಳನ್ನು ಬಳಸಿ ಸುಲಭವಾಗಿ ಎಲ್ಲಾ ದೋಷಗಳನ್ನು ನಿವಾರಿಸಿ

ಗ್ರಹಗಳ ಅಶುಭ ಪರಿಣಾಮವನ್ನು ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ರೀತಿಯ ಪರಿಹಾರಗಳನ್ನು ಹೇಳಲಾಗಿದೆ. ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳನ್ನು ಗ್ರಹಗಳನ್ನು ಅನುಕೂಲಕರವಾಗಿಸಲು ಸಹ ಬಳಸಲಾಗುತ್ತೆ. ಗ್ರಹಗಳ ದೋಷಗಳ(Graha dosh) ಕೆಟ್ಟ ಪರಿಣಾಮಗಳಿಂದ ಮುಕ್ತಿ ಪಡೆಯಬಹುದಾದ ವಿಷಯಗಳು ಯಾವುವು ಎಂದು ತಿಳಿಯೋಣ.

27

ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಸೂರ್ಯನು ಪ್ರಬಲನಾಗಿದ್ದರೆ, ಆಗ ವ್ಯಕ್ತಿಯು ಸಾಕಷ್ಟು ಪ್ರಗತಿ ಹೊಂದುತ್ತಾನೆ, ಆದರೆ ಸೂರ್ಯನು ದುರ್ಬಲನಾಗಿದ್ದರೆ ಗೌರವ ಕಡಿಮೆಯಾಗುತ್ತದೆ. ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು, ಶುದ್ಧ ತುಪ್ಪ(Ghee), ಕೇಸರಿ ಮತ್ತು ಗೋಧಿಯಿಂದ ಮಾಡಿದ ವಸ್ತುಗಳನ್ನು ದಾನ ಮಾಡೋದು ಶುಭಕರ.

37

ಜಾತಕದಲ್ಲಿ ಚಂದ್ರನ ಸ್ಥಾನವು ದುರ್ಬಲವಾಗಿದ್ದರೆ, ವ್ಯಕ್ತಿಯು ಮಾನಸಿಕವಾಗಿ ವಿಚಲಿತನಾಗುತ್ತಾನೆ. ಚಂದ್ರನನ್ನು ಬಲಪಡಿಸಲು ನೀರನ್ನು ಅರ್ಪಿಸಿ. ನೀರು, ಹಾಲು ಮತ್ತು ಅಕ್ಕಿಯಂತಹ (Rice)ಬಿಳಿ ಮತ್ತು ತಂಪಾದ ವಸ್ತುಗಳನ್ನು ದಾನ ಮಾಡೋದರಿಂದ ಚಂದ್ರನನ್ನು ಬಲಪಡಿಸಬಹುದು.

47

ಜಾತಕದಲ್ಲಿ ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ಅದನ್ನು ಬಲಪಡಿಸಲು ಹನುಮಂತನಿಗೆ(Hanuman) ಗೋಧಿ ಹಿಟ್ಟಿನಿಂದ ಸಿಹಿ ತಯಾರಿಸಿ ಅರ್ಪಿಸಬೇಕು. ಇದರೊಂದಿಗೆ, ಕೆಂಪು ಹಣ್ಣು ಮತ್ತು ತರಕಾರಿಗಳನ್ನು ದಾನ ಮಾಡೋದರಿಂದ ಮಂಗಳ ಗ್ರಹವನ್ನು ಬಲಪಡಿಸಬಹುದು.
 

57

ಗುರುವಿನ ಅಶುಭ ಪರಿಣಾಮಗಳನ್ನು ತಪ್ಪಿಸಲು, ಅರಿಶಿನ, ಕೇಸರಿ ಮತ್ತು ಬಾಳೆಹಣ್ಣಿನಂತಹ(Banana) ಹಳದಿ ವಸ್ತುಗಳನ್ನು ದಾನ ಮಾಡಬೇಕು. ಇದು ಗುರು ಗ್ರಹವನ್ನು ಬಲಪಡಿಸುತ್ತೆ ಮತ್ತು ಅದರ ಶುಭ ಫಲಿತಾಂಶಗಳನ್ನು ಪಡೆಯಬಹುದು ಎಂದು ನಂಬಲಾಗಿದೆ.

67

ಶುಕ್ರ ಗ್ರಹವನ್ನು ಬಲಪಡಿಸಲು ಅಕ್ಕಿ ಮತ್ತು ಹಾಲನ್ನು ದಾನ ಮಾಡೋದು ಶುಭಕರ. ಇದಲ್ಲದೆ, ಮಖಾನಾ(Makhana) ಮತ್ತು ಅಕ್ಕಿಯಿಂದ ಮಾಡಿದ ಪಾಯಸ ಸೇವಿಸೋದು ಸಹ ಶುಭಕರವಾಗಿದೆ. ಇದನ್ನು ತಪ್ಪದೆ‌‌ ಮಾಡಿದರೆ ಸಮಸ್ಯೆಗಳು ನಿವಾರಣೆಯಾಗುತ್ತವೆ.
 

77

ಜಾತಕದಲ್ಲಿ ಶನಿ ದುರ್ಬಲನಾಗಿದ್ದರೆ, ಆಗ ವ್ಯಕ್ತಿಯು ಪದೇ ಪದೇ ವಿಫಲನಾಗುತ್ತಾನೆ ಮತ್ತು ಅವನು ಯಾವಾಗಲೂ ತೊಂದರೆಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು, ಸಾಸಿವೆ ಎಣ್ಣೆ(Mustard oil), ಕಲೋಂಜಿ ಮತ್ತು ಕಪ್ಪು ಎಳ್ಳು ಬೀಜಗಳನ್ನು ಬಳಸೋದು ಮತ್ತು ದಾನ ಮಾಡೋದು ಪ್ರಯೋಜನಕಾರಿ. ಅದೇ ಸಮಯದಲ್ಲಿ, ರಾಹು-ಕೇತುವಿನ ಅಶುಭ ಪರಿಣಾಮಗಳನ್ನು ತಪ್ಪಿಸಲು, ನೀರಿನಲ್ಲಿ ನೆನೆಸಿರುವ ಬಾರ್ಲಿ ಪರಿಹಾರವನ್ನು ಒದಗಿಸುತ್ತೆ ಎಂದು ನಂಬಲಾಗಿದೆ.

Read more Photos on
click me!

Recommended Stories