ಕೂದಲಿಗೂ ಸೋಂಕು ನಿವಾರಣೆಗೆ ಹೆನ್ನಾದ ಉಪಯೋಗ ಹಲವು

First Published Feb 25, 2021, 3:30 PM IST

ಹೆನ್ನಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೆಹಂದಿ ಸಸ್ಯವನ್ನು ಭಾರತದಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ, ಇದರ ಎಲೆಗಳನ್ನು ಮಹಿಳೆಯರು ಹೆಚ್ಚಾಗಿ ನೈಸರ್ಗಿಕ ಹೇರ್ ಡೈ ಆಗಿ ಬಳಸುತ್ತಾರೆ, ಜೊತೆಗೆ ವಿಶೇಷವಾಗಿ ಕೈ ಮತ್ತು ಕಾಲುಗಳ ಮೇಲೆ ಅಲಂಕಾರಿಕ ಚಿತ್ರ ಬಿಡಿಸಲು ಬಳಸುತ್ತಾರೆ. ಮೆಹಂದಿಯು ಅತ್ಯಂತ ಪ್ರಯೋಜನಕಾರಿ ಗಿಡಮೂಲಿಕೆಗಳಲ್ಲಿ ಒಂದಾಗಿದೆ ಮತ್ತು  ಕೂದಲಿಗೆ ಅದ್ಭುತಗಳನ್ನು ಮಾಡಬಹುದು. 

ಬೆಲೆಬಾಳುವ ಸಸ್ಯರಾಸಾಯನಿಕಗಳಿಂದ ತುಂಬಿರುವ ಮೆಹಂದಿ ಎಲೆಗಳನ್ನು ಹೊರತುಪಡಿಸಿ, ಸಸ್ಯದ ಇತರ ಭಾಗಗಳಾದ ಹೂವುಗಳು, ಬೀಜಗಳು, ಬೇರುಗಳು ಮತ್ತು ತೊಗಟೆಗಳು ಸಹ ಹಲವಾರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಮೆಹಂದಿ ಹೂವುಗಳು ಸಾರಭೂತ ತೈಲಗಳನ್ನು ನೀಡುತ್ತವೆ.
undefined
ಮೆಹಂದಿ ಎಲೆಗಳನ್ನು ಸಾಮಾನ್ಯವಾಗಿ ಒಣಗಿಸಿ ಪುಡಿ ಮಾಡಿ ಬಳಸಬಹುದು ಅಥವಾ ವಾಣಿಜ್ಯವಾಗಿ ಮಾರಾಟ ಮಾಡುತ್ತಾರೆ. ಈ ಎಲೆಗಳು ಕೂದಲಿನ ಬೆಳವಣಿಗೆ ಮತ್ತು ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಆಂಟಿ ಆಕ್ಸಿಡೆಂಟ್ ಗಳಾದ ಟ್ಯಾನಿನ್ಸ್, ಕ್ಯಾಟೆಚಿನ್ಸ್, ಫ್ಲೇವನಾಯ್ಡ್ಗಳು, ಅಗತ್ಯ ಕೊಬ್ಬಿನ ಆಮ್ಲಗಳು ಮತ್ತು ವಿಟಮಿನ್ ಇ ಗಳು ಕೂದಲಿನ ಆರೋಗ್ಯಕ್ಕೆ ಹಲವಾರು ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ.
undefined
ಮೆಹೆಂದಿ ತಂಪಾಗಿಸುವ ಗುಣಗಳನ್ನು ಹೊಂದಿದೆ ಮತ್ತು ತಲೆಬುರುಡೆಗೆ ಹಚ್ಚಿದರೆ ಕೂದಲು ಮೃದುವಾಗುತ್ತದೆ. ಜೊತೆಗೆ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಮೆಹಂದಿಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳು ಇವೆ ನೋಡೋಣ....
undefined
ಮೆಹಂದಿ ಕೂದಲಿಗೆ ಅತ್ಯುತ್ತಮ ಕಂಡೀಷನರ್ ಆಗಿದೆ. ಇದು ಕಾಂತಿ ಮತ್ತು ವಾಲ್ಯೂಮ್ ಅನ್ನು ಹೆಚ್ಚಿಸುವುದಲ್ಲದೇ, ಅದರ ಮೇಲೆ ಲೇಪನವನ್ನು ರಚಿಸುವ ಮೂಲಕ ಮತ್ತಷ್ಟು ಹಾನಿಯನ್ನು ತಡೆಯುತ್ತದೆ.
undefined
ಮೆಹಂದಿಯು ತಲೆಬುರುಡೆಯಲ್ಲಿ ನೈಸರ್ಗಿಕ ಆಮ್ಲ-ಕ್ಷಾರೀಯ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ರಾಸಾಯನಿಕ ಆಧಾರಿತ ಉತ್ಪನ್ನಗಳಂತೆ ನೈಸರ್ಗಿಕ ಸಮತೋಲನವನ್ನು ಬದಲಾಯಿಸದೆ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ.
undefined
ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಇತರ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
undefined
ಕೂದಲಿಗೆ ಯಾವುದೇ ಅಡ್ಡ ಪರಿಣಾಮಗಳು ಇದರಿಂದ ಇಲ್ಲ ಮತ್ತು ಗಾಢವಾದ ಬಣ್ಣವನ್ನು ನೀಡುವುದರಿಂದ ಕೂದಲಿಗೆ ಬಣ್ಣ ನೀಡಲು ಸಹ ನೀವು ಬಳಸಬಹುದು.
undefined
ಮೆಹಂದಿಯು ಕೂದಲನ್ನು ಬಿಳಿಯಾಗುವುದರಿಂದ ಮತ್ತು ತೆಳುವಾಗಿಸುವುದರಿಂದ ರಕ್ಷಿಸುತ್ತದೆ ಮತ್ತು ಆರೋಗ್ಯಕರ ಮತ್ತು ಕಾಂತಿಯುತವಾಗಿಸುತ್ತದೆ.
undefined
ಮೆಹಂದಿಯಿಂದ ಕೂದಲಿಗೆ ಹಲವಾರು ಪ್ರಯೋಜನಗಳಲ್ಲದೆ, ಮೊಡವೆ, ಬೊಯ್ಲ್ಸ್ ಮತ್ತು ವಾರ್ಟ್ ಗಳನ್ನು ಗುಣಪಡಿಸಲು ಮೆಹಂದಿಯು ಸಹಾಯ ಮಾಡುತ್ತದೆ.
undefined
ಸುಟ್ಟ ಗಾಯವಾಗಿದ್ದರೆ ಸ್ವಲ್ಪ ಮೆಹಂದಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಬಾಧಿತ ಪ್ರದೇಶಕ್ಕೆ ಹಚ್ಚಿ ತಕ್ಷಣ ಶಮನ ಗೊಳಿಸಬಹುದು. ಇದು ಗಾಯವನ್ನು ಗುಣಮಾಡುವುದು ಮಾತ್ರವಲ್ಲದೆ ಸೋಂಕು ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ.ದಿಸಿ.
undefined
click me!