Drishti bottu ದತ್ತ ಬದಲಾಗ್ತಾನಾ, ಸೀರಿಯಲ್ಲೇ ಮುಗಿಯತ್ತಾ? ನಟ Rakshith Gowda ಎಂಟ್ರಿ ಏಕೆ? ಉತ್ತರ ಇಲ್ಲಿದೆ...

Published : Sep 15, 2025, 12:31 PM IST

ದೃಷ್ಟಿಬೊಟ್ಟು ಧಾರಾವಾಹಿ ಅಂತ್ಯಗೊಳ್ಳುವ ಸುಳಿವು ಸಿಕ್ಕಿದ್ದು, ತಂಡದ ಫೋಟೋಶೂಟ್ ಮತ್ತು ಮುದ್ದುರಾಜ್ ಅನೂಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಈ ವದಂತಿಗೆ ಪುಷ್ಟಿ ನೀಡಿವೆ. ದತ್ತನ ಪಾತ್ರಧಾರಿ ವಿಜಯ್ ಸೂರ್ಯ ಬಿಗ್ ಬಾಸ್‌ಗೆ ಹೋಗುತ್ತಿರುವುದು ಧಾರಾವಾಹಿ ನಿಲ್ಲಲು ಕಾರಣ ಎನ್ನಲಾಗಿದೆ.

PREV
17
ದೃಷ್ಟಿಬೊಟ್ಟು ಸೀರಿಯಲ್​ ದಿ ಎಂಡ್​?

ಇದೇ ಸೆಪ್ಟೆಂಬರ್​ 28ರಿಂದ Bigg Boss Kannada Seaon 12 ಷೋ ಆರಂಭವಾಗಲಿದೆ. ಇದಕ್ಕಾಗಿ ಕೆಲವು ಸೀರಿಯಲ್​ಗಳನ್ನೂ ಮುಗಿಸಲಾಗುತ್ತಿದೆ. ಬಿಗ್​ಬಾಸ್​ನಲ್ಲಿ ಪಾಲ್ಗೊಳ್ಳಲು ದೃಷ್ಟಿಬೊಟ್ಟು (Drishti Bottu) ಸೀರಿಯಲ್ ದತ್ತಾಬಾಯಿ ರೋಲ್​ ಮಾಡ್ತಿರೋ ನಟ ವಿಜಯ ಸೂರ್ಯ ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದೇ ಕಾರಣಕ್ಕೆ, ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸುದ್ದಿಯಾಗುತ್ತಿದೆ.

27
ದತ್ತನ ಸಾವು?

ಅಷ್ಟಕ್ಕೂ ಸೀರಿಯಲ್​ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ. ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್​ ಮಾಡಿದ್ದ ದತ್ತನ ಅತ್ತಿಗೆ ಶರಾವತಿಗೆ ಸೋಲಾಗಿದೆ. ಇದೇ ಕಾರಣಕ್ಕೆ ಆಕೆ ದತ್ತನನ್ನು ಮುಗಿಸಲು ಸ್ಕೆಚ್​ ಹಾಕಿದ್ದಳು. ಈಗ ದತ್ತನ ಸಾವಿನ ಸುದ್ದಿಯೂ ಬಂದಾಗಿದೆ. ಆತನ ಕಾರು ಅಪ್ಪಚ್ಚಿಯಾಗಿದೆ ಎಂದೇ ತೋರಿಸಲಾಗಿದೆ.

37
ದತ್ತನ ರೋಲ್​ ಬದಲಾಗುತ್ತಾ?

ಇಷ್ಟು ಹೇಳುತ್ತಿದ್ದಂತೆಯೇ ದತ್ತನ ರೋಲ್​​ ಬದಲಾಗುತ್ತದೆ. ಆತನಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿ ಹೊಸ ನಟನನ್ನು ತರಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಳೆಯ ದತ್ತ ವಿಜಯ ಸೂರ್ಯನನ್ನು ಸಾಯಿಸುವುದಿಲ್ಲ, ಬದಲಿಗೆ ಅವರನ್ನೇ ಕೋಮಾದಲ್ಲಿ ಇರಿಸುವಂತೆ ಮಾಡಿ ಬಿಗ್​ಬಾಸ್​​ನಿಂದ ಬಂದ ಮೇಲೆ ಸೀರಿಯಲ್​ ಮುಂದುವರೆಸಬಹುದು, ಇಲ್ಲದೇ ಅದಕ್ಕಿಂತಲೂ ಹೆಚ್ಚಾಗಿ ಸೀರಿಯಲ್​ಗೆ ಬೇರೆಯ ರೀತಿ ಟ್ವಿಸ್ಟ್​ ಕೊಟ್ಟು ಪ್ಲಾಸ್ಟಿಕ್​ ಸರ್ಜರಿ ಮಾಡಲಾಗುತ್ತದೆ ಎಂದೇ ವೀಕ್ಷಕರು ಅಂದುಕೊಂಡಿದ್ದರು.

47
ಮುದ್ದುರಾಜ ಅನೂಪ್​ ಪೋಸ್ಟ್​

ಆದರೆ, ಇದೀಗ ದೃಷ್ಟಿಯ ತಮ್ಮನ ರೋಲ್​ ಮಾಡ್ತಿರೋ ಬಾಲಕ ಮುದ್ದುರಾಜ ಅನೂಪ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದು, ಎಲ್ಲರೂ ಏನು ಎತ್ತ ಎಂದು ತಿಳಿಯಲಾಗದೇ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. 'ನಿಮ್ಮೆಲ್ಲರೊಂದಿಗೆ ನನ್ನ ಅತ್ಯುತ್ತಮ ಸ್ಮರಣೀಯ ಸಮಯವನ್ನು ಕಳೆದಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಮತ್ತು ಶೀಘ್ರದಲ್ಲೇ ಮತ್ತೆ ಈ ತಂಡದ ಭಾಗವಾಗಲು ಬಯಸುತ್ತೇನೆ' ಎಂದು ಬಾಲಕ ಬರೆದುಕೊಂಡಿದ್ದಾನೆ.

57
ಅಂತಿಮ ಫೋಟೋಶೂಟ್​

ಹಾಗಿದ್ದರೆ ಸೀರಿಯಲ್​ ಮುಗಿಯುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೇ ಇಡೀ ಟೀಮ್​ನವರು ಫೋಟೋಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ವಿಜಯಸೂರ್ಯ ಇಲ್ಲ ಎನ್ನುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಸೀರಿಯಲ್​ ಮುಗಿಸುವುದೇ ಹೌದಾದರೆ ದತ್ತನನ್ನು ಸಾಯಿಸುವ ಅವಶ್ಯಕತೆ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೂ, ಕೊನೆಯಲ್ಲಿ ಸೀರಿಯಲ್​ ಟ್ವಿಸ್ಟ್​ ಪಡೆದು ಎಲ್ಲರೂ ಒಂದಾಗುವಂತೆ ಮಾಡುವ ಸಾಧ್ಯತೆ ಇದೆ.

67
ನಿರ್ಮಾಪಕರ ಫೋಟೋ

ಆದರೆ, ಇನ್ನೊಂದು ಕುತೂಹಲ ಎಂದರೆ ಬಾಲಕ ಹಾಕಿರುವ ಪೋಸ್ಟ್​ನಲ್ಲಿ ನಟ ರಕ್ಷಿತ್​ ಗೌಡ (Rakshith Gowda) ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ದತ್ತಾಬಾಯಿ ಆಗಿ ರಕ್ಷಿತ್​ ಅವರು ಬರುತ್ತಿದ್ದಾರೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. 

77
ನಿರ್ಮಾಪಕರ ಜೊತೆ ಟೀಂ

ಆದರೆ, ಅಸಲಿಗೆ ದೃಷ್ಟಿಬೊಟ್ಟು ಸೀರಿಯಲ್​ನ ನಿರ್ಮಾಪಕರಲ್ಲಿ ಅವರೂ ಒಬ್ಬರು. ಇನ್ನೊಬ್ಬರು ಅನುಷಾ ಶಿವಪ್ರಸಾದ್​. ಇವರಿಬ್ಬರೂ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅಲ್ಲಿಗೆ ದೃಷ್ಟಿಬೊಟ್ಟು ಸೀರಿಯಲ್​​ ಅಂತ್ಯ ಕಾಣುವುದು ಖಚಿತವಾಗಿದೆ.

Read more Photos on
click me!

Recommended Stories