ಜೀವನದಲ್ಲಿ ಎಂದಿಗೂ ಯಾರ ಮುಂದೆಯೂ ತಲೆತಗ್ಗಿಸಿಲ್ಲ. ಲೈಫ್ನಲ್ಲಿ ಇದೇ ಮೊದಲ ಬಾರಿಗೆ ಮಂಡಿಯೂರಿ ಕ್ಷಮೆ ಕೋರುತ್ತಿದ್ದೇನೆ ಎನ್ನುತ್ತಲೇ ಭಾಗ್ಯಳ ಮುಂದೆ ಆದಿ ಮಂಡಿಯೂರಿ ಕ್ಷಮೆ ಕೋರಿಯಾಗಿದೆ. ಆಸ್ತಿಗಾಗಿ ಈ ಮದುವೆಯಾಗುತ್ತಿದೆ ಎಂದು ಭಾಗ್ಯಾಳನ್ನು ಚುಚ್ಚಿದ್ದ ಆತನ ಮಾತಿಗೆ ನೊಂದು ಭಾಗ್ಯ ತಂಗಿ ಪೂಜಾ ಮತ್ತು ಕಿಶನ್ ಮದುವೆ ಆಗದಂತೆ ತಡೆಯೊಡ್ಡಿದ್ದಳು. ತಂಗಿಯ ಮದುವೆಗಾಗಿ ಎಷ್ಟೆಲ್ಲಾ ಕಷ್ಟಪಟ್ಟಿದ್ದ ಭಾಗ್ಯ, ಹಸೆಮಣೆಯಿಂದಲೇ ತಂಗಿಯನ್ನು ಕರೆದುಕೊಂಡು ಬಂದು ಮದುವೆಯನ್ನು ರದ್ದು ಮಾಡಲು ಮುಂದಾಗಿದ್ದಳು.
27
ಭಾಗ್ಯಳ ಕ್ಷಮೆ ಕೋರಿದ್ದ ಆದಿ
ಆದರೆ ಆದಿಗೆ ತನ್ನಿಂದ ತಪ್ಪಾಗಿರುವುದು ತಿಳಿದಿದೆ. ಭಾಗ್ಯ ಎಂಥ ಸ್ವಾಭಿಮಾನಿ ಹೆಣ್ಣು, ಆಕೆ ಹೇಗೆಲ್ಲಾ ಬದುಕಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ನೊಂದುಕೊಂಡಿದ್ದ. ಭಾಗ್ಯಳಿಗೆ ಇಲ್ಲಸಲ್ಲದ ಮಾತುಗಳನ್ನಾಗಿ ನೋಯಿಸಿದ್ದ ಆತನಿಗೆ ನೋವಾಗಿತ್ತು. ಮಂಡಿಯೂರುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಭಾಗ್ಯಳ ಬಳಿ ಕ್ಷಮೆ ಕೋರಿದ್ದ.
37
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?
ಆಗಲೇ ಭಾಗ್ಯ ಮತ್ತು ಆದಿ ನಡುವೆ ಲವ್ ಹುಟ್ಟುತ್ತೆ, ಇಬ್ಬರೂ ಮದ್ವೆಯಾಗುತ್ತಾರೆ ಎಂದೇ ನೆಟ್ಟಿಗರು ಹೇಳ್ತಿದ್ದರು. ನಿಜ ಜೀವನದಲ್ಲಿ ಈ ರೀತಿ ಮಧ್ಯವಯಸ್ಸಿನ ಹೆಣ್ಣು ಮದ್ವೆಯಾಗೋದನ್ನು ಒಪ್ಪುತ್ತಾರೋ, ಬಿಡುತ್ತಾರೋ, ಆದರೆ ಸೀರಿಯಲ್ನಲ್ಲಿ ಮಾತ್ರ ಆದಿ ಮತ್ತು ಭಾಗ್ಯ ಮದ್ವೆಯಾಗಬೇಕು, ತಾಂಡವ್ಗೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಹಲವರು ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಇದೀಗ ಸೀರಿಯಲ್ಗೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಆದಿ ಮತ್ತು ಭಾಗ್ಯಳ ಲವ್ಸ್ಟೋರಿಗೆ ತಾಂಡವ್ನಿಂದಲೇ ಗ್ರೀನ್ ಸಿಗ್ನಲ್ ಸಿಗುವಂತಿದೆ.
ಇದಕ್ಕೆ ಕಾರಣ, ಒಂದು ಹಂತದಲ್ಲಿ ಆದಿ ಮತ್ತು ತಾಂಡವ್ ಸ್ನೇಹಿತರಾಗಿದ್ದಾರೆ. ಆದರೆ ಇಬ್ಬರಿಗೂ ಅವರ ಇತಿಹಾಸ ಗೊತ್ತಿಲ್ಲ. ಪೂಜಾಳ ಮದುವೆಯಾಗಿರುವುದು ಆದಿಯ ತಮ್ಮನಿಗೆ ಎನ್ನುವ ಸತ್ಯ ತಾಂಡವ್ಗೆ ತಿಳಿದಿಲ್ಲ, ಅದೇ ರೀತಿ, ತಾಂಡವ್ ಭಾಗ್ಯಳ ಪತಿ ಎನ್ನುವುದೂ ಆದಿಗೆ ಗೊತ್ತಿಲ್ಲ. ಆದರೆ ಆದಿ ಮತ್ತು ಆತನ ತಮ್ಮ ಮದುವೆಯಾಗ್ತಿರೋ ಮನೆಯವರಿಗೆ ಗಲಾಟೆ ಆಗಿರುವ ವಿಷಯ ತಾಂಡವ್ಗೆ ತಿಳಿದಿದೆ.
57
ತಾಂಡವ್ಗೆ ಭಾಗ್ಯಳ ಕುರಿತು ತಿಳಿಸಿದ ಆದಿ
ಇದೇ ಕಾರಣಕ್ಕೆ ಮದುವೆ ಏನಾಯ್ತು ಎಂದು ಫೋನ್ನಲ್ಲಿ ತಾಂಡವ್ ಆದಿಗೆ ಕೇಳಿದ್ದು, ತಾನು ಭಾಗ್ಯಳ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ತುಂಬಾ ಒಳ್ಳೆಯವಳು ಎಂದು ಆದಿ ತಾಂಡವ್ಗೆ ಹೇಳಿದ್ದಾನೆ.
67
ಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರು
ಆದರೆ, ಭಾಗ್ಯಳ ಹೆಸರು ಹೇಳಲಿಲ್ಲ. ಆ ಲೇಡಿ ಎಂದು ಹೇಳಿರೋ ಕಾರಣ, ತಾಂಡವ್ಗೆ ಆದಿ ಮಾತನಾಡ್ತಿರೋದು ಭಾಗ್ಯಳ ವಿಷಯ ಎಂದು ತಿಳಿದಿಲ್ಲ. ಒಳ್ಳೆಯದಾಯಿತು, ಕೊನೆಗೂ ತಪ್ಪಿನ ಅರಿವಾಗಿದ್ದು ಒಳ್ಳೆಯದು ಎಂದಿದ್ದಾನೆ. ಅಲ್ಲಿಗೆ ಆದಿ ಮತ್ತು ಭಾಗ್ಯಳ ಲವ್ ಸ್ಟೋರಿಗೆ ಒಂದು ರೀತಿಯಲ್ಲಿ ಅವನೇ ಗ್ರೀನ್ ಸಿಗ್ನಲ್ ಕೊಟ್ಟಂತಾಗಿದೆ.
77
Bhagyalakshmಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರುi
ಅದೇ ಇನ್ನೊಂದೆಡೆ, ಪೂಜಾಳಿಗೆ ಯಾವುದೇ ಆಪತ್ತು ಬರದಂತೆ ಕಾಯುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾನೆ ಆದಿ. ಅಲ್ಲಿಗೆ ಪೂಜಾ ವಿವಾಹ ಸಂಪನ್ನವಾಗುತ್ತದೆ. ಪೂಜಾಳ ಮದುವೆಗೆ ಇದ್ದ ಎಲ್ಲಾ ಅಡ್ಡಿ ಆತಂಕಕಗಳೂ ಸದ್ಯ ನಿವಾರಣೆಯಾಗಿದೆ. ಅಷ್ಟಕ್ಕೂ ಕನ್ನಿಕಾ ಅಣ್ಣನಾಗಿ ಆದಿ ಅರ್ಥಾತ್ ನಟ ಹರೀಶ್ ಎಂಟ್ರಿಯಾದಾಗಲೇ ಭಾಗ್ಯಳಿಗೆ ಈತ ಜೋಡಿ ಎಂದಿದ್ದರು ನೆಟ್ಟಿಗರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.