Bigg Bossನಲ್ಲಿ ಅವಕಾಶ ಸಿಗಬೇಕೆಂದ್ರೆ ಏನೇನು ಪ್ರೊಸೆಸ್​ ಇರತ್ತೆ? ತುಕಾಲಿ ಮಾನಸಾ ಏನಂದ್ರು ಕೇಳಿ...

Published : Sep 01, 2025, 08:53 PM IST

ಬಿಗ್​ಬಾಸ್​ನ 12ನೇ ಸೀಸನ್​ ಇನ್ನೇನು ಶುರುವಾಗಲಿದೆ. ಹಲವರಿಗೆ ಈ ಷೋನಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಬಹುತೇಕರಿಗೆ ಇದು ಕನಸಿನ ಮಾತೇ. ಇದೀಗ ತುಕಾಲಿ ಮಾನಸಾ ಅವರು ಏನಂದಿದ್ದಾರೆ ಕೇಳಿ... 

PREV
18
ಫೇಮಸ್​ ಆದ ತುಕಾಲಿ ದಂಪತಿ

 Colors Kannadaದ 'ಬಿಗ್ ಬಾಸ್' (Bigg Boss) ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಸಾಕಷ್ಟು ಫೇಮಸ್​ ಆಗಿದ್ರು, ಜೊತೆಗೆ ಒಂದಿಷ್ಟು ಒಳ್ಳೆಯ ಹೆಸರುಗಳನ್ನೂ ಗಳಿಸಿದ್ದಾರೆ. ಫೈನಲ್​ ತನಕ ಹೋಗಿದ್ದರು.

28
ಐದನೇ ವಾರದಲ್ಲಿ ಎಲಿಮಿನೇಟ್​

ಆದರೆ ಅವರ ಪತ್ನಿ ಮಾನಸಾ (Tukali Manasa) ಐದೇ ವಾರದಲ್ಲಿ ವಾಪಸ್​ ಆಗಿದ್ದರು. ಮಾನಸಾ ಅವರು ಪತಿ ಸಂತೋಷ್​ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದರೆ ಅವರು ಎಲಿಮಿನೇಟ್​ ಆಗಿ ಬಂದರು.

38
ಮಾತುಗಳೇ ಮುಳುವಾಯ್ತು

ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್​ ಇನ್ಯಾರೂ ಆಗಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟು ಹೊರಕ್ಕೆ ಬಂದರು ಎಂದರೆ ಅವರಿಗೆ ಸಿಗುವಷ್ಟು ರಾಜಮರ್ಯಾದೆಯೇ ಬೇರೆ. ಬಿಗ್​ಬಾಸ್​ಗೆ ಹೋಗುವ ಮೊದಲೇ ಟಿವಿ ಷೋಗಳಿಂದಾಗಿ ತುಕಾಲಿ ಸಂತೋಷ್​ ಫೇಮಸ್​ ಆಗಿದ್ದರು, ಈಗ ಅವರ ಪತ್ನಿ ಮಾನಸ ಅವರೂ ಈಗ ಜೊತೆಯಾಗಿದ್ದಾರೆ.

48
ಪ್ರೊಸೀಜರ್​ ಬಗ್ಗೆ ಏನಂದ್ರು?

ಇದೀಗ ಅವರಿಗೆ ನ್ಯೂಸ್​ಬೀಟ್​ ಕನ್ನಡ ಚಾನೆಲ್​ನವರು ಬಿಗ್​ಬಾಸ್​ಗೆ ಹೋಗುವ ಪ್ರೊಸೆಸ್​ ಬಗ್ಗೆ ಕೇಳಿದ್ದಾರೆ. ಆದರೆ ಆ ಬಗ್ಗೆ ತಮಗೆ ಸರಿಯಾಗಿ ಏನೂ ಗೊತ್ತಿಲ್ಲ. ಅದೂ ಇದೂ ಇರುತ್ತೆ. ಆಮೇಲೆ 3-4 ಮೀಟಿಂಗ್​ ಇರುತ್ತದೆ. ನನಗೆ ಒಂದೇ ಮೀಟಿಂಗ್​ ಇತ್ತು. ಅದಕ್ಕೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಸಂತುಗೆ ಕೇಳಿದ್ರೆ ಸರಿಯಾಗಿ ಗೊತ್ತಾಗತ್ತೆ ಎಂದಿದ್ದಾರೆ.

58
ಪೇಮೆಂಟ್​ ಕಾರಣ

ಕೆಲವು ಮೀಟಿಂಗ್​ ಆದ ಬಳಿಕವೂ ಕ್ಯಾನ್ಸಲ್​ ಆಗತ್ತಲ್ಲ, ಯಾಕೆ ಎಂದು ಪ್ರಶ್ನಿಸಿದಾಗ, ಅದಕ್ಕೆ ಏನೇನೋ ಕಾರಣಗಳು ಇರುತ್ತವೆ, ಪೇಮೆಂಟ್​ ಕೂಡ ಕಾರಣ ಆಗಬಹುದು ಎಂದಿದ್ದಾರೆ.

68
ಹೇಳಿಮಾಡಿಸಿದ ಜೋಡಿ

ಅಷ್ಟಕ್ಕೂ ಇವರ ಜೋಡಿ ಹೇಳಿಮಾಡಿಸಿದ್ದು ಎಂದೇ ಫೇಮಸ್ಸು. ಈ ಹಿಂದೆ ಸಂದರ್ಶನವೊಂದರಲ್ಲಿ ತುಕಾಲಿ ಸಂತೋಷ್​ ಅವರು ಪತ್ನಿ ಬಗ್ಗೆ ಮಾತನಾಡುತ್ತಾ, ಇಎಂಐ ತೀರಿಸಲು ಬಿಗ್​ಬಾಸ್​ಗೆ ಹೋಗಿದ್ಲು, ಆದರೆ ಐದೇ ವಾರಕ್ಕೆ ವಾಪಸ್​ ಬಂದಳು. ಮುಂದೆ ಸಮಸ್ಯೆ ಇದದ್ದೇ ಅಲ್ವಾ ಎಂದರು ಸಂತೋಷ್​​.

78
ಸಜೆಷನ್​ ತೆಗೆದುಕೊಂಡಿರಲಿಲ್ಲ

ಇದೇ ವೇಳೆ ತಾವು ಬಿಗ್​ಬಾಸ್​ ಒಳಗೆ ಹೋಗುವಾಗ ಸಂತೋಷ್​ (Tukali Santosh) ಅವರ ಸಜೆಷನ್​ ತೆಗೆದುಕೊಂಡಿರಲಿಲ್ಲ. ಅದೇ ಮಾಡಿದ ತಪ್ಪು ಎನ್ನಿಸತ್ತೆ. ಅವರ ಹಾಗೆ ನಾನು ಆಗುವುದು ಬೇಡ, ನನ್ನ ಸ್ಟೈಲ್​ನಲ್ಲಿಯೇ ನಾನು ಇರೋಣ ಅಂದುಕೊಂಡೆ. ಸಂತು ಕೂಡ ಹಾಗೇ ಹೇಳಿದ್ರು. ಆದ್ರೆ ಸಜೆಷನ್​ ತಗೋಬಿಕಿತ್ತೇನೋ ಎಂದರು.

88
ಬೇರೆಯವರಿಗೆ ಗೌರವ ಕೊಡಬೇಕು

ಇದೇ ವೇಳೆ, ಬಿಗ್​ಬಾಸ್​ನಿಂದ ಬೇರೆಯವರಿಗೆ ಗೌರವ ಕೊಡಬೇಕು, ಮಾತಿನ ಮೇಲೆ ನಿಗಾ ಇಡಬೇಕು ಎನ್ನುವುದನ್ನು ಕಲಿತೆ. ಯೋಚನೆ ಮಾಡಿ ಮಾತನಾಡಬೇಕು ಎನ್ನುವುದನ್ನು ಬಿಗ್​ಬಾಸ್​ ಕಲಿಸಿತು ಎಂದರು.

Read more Photos on
click me!

Recommended Stories