ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ ಭಿನ್ನ ವಿಭಿನ್ನ ಟ್ವಿಸ್ಟ್ ಪಡೆದುಕೊಳ್ಳುತ್ತಾ ಸಾಗಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್ ನಡುವಿನ ಸ್ಟೋರಿಯಾದರೆ ಇನ್ನೊಂದು ಕಡೆಯಲ್ಲಿ, ಸಿದ್ದೇಗೌಡ್ರು ಮತ್ತು ಭಾವನಾ ಸ್ಟೋರಿ. ಇದೀಗ ಸೈಕೋ ಎಂದೇ ಫೇಮಸ್ ಆಗಿರೋ ಜಯಂತ್, ಪತ್ನಿ ಇಲ್ಲದೇ ವಿಲವಿಲ ಒದ್ದಾಡುತ್ತಿದ್ದಾನೆ. ಏನೇ ಆದರೂ ಇವನಿಗೆ ಪತ್ನಿ ಸಿಗಬಾರದು ಎಂದೇ ವೀಕ್ಷಕರು, ನೆಟ್ಟಿಗರು ಹೇಳ್ತಿರೋದು ಉಂಟು. ಆದರೆ ಇದೀಗ ಜಯಂತ್ ಸಂಪೂರ್ಣ ಬದಲಾಗಿ ಹೋಗಿದ್ದಾನೆ. ತನ್ನ ಜಾನುಮರಿ ತನ್ನಿಂದ ದೂರವಾಗಲು ಸಿಸಿಟಿವಿಯೇ ಕಾರಣ ಎಂದುಕೊಂಡು ಎಲ್ಲವನ್ನೂ ಸುಟ್ಟು ಹಾಕಿದ್ದಾನೆ.
29
ಪತ್ನಿಯ ಕಳಕೊಂಡು ಕಣ್ಣೀರು
ಅದೇ ಇನ್ನೊಂದೆಡೆ, ಇವನ ಗೋಳನ್ನು ಕೆಲಸದಾಕೆ ಶಾಂತಮ್ಮನಿಗೆ ನೋಡಲು ಆಗುತ್ತಿಲ್ಲ. ತನ್ನದು ಅತಿರೇಕದ ವರ್ತನೆ ಎಂದು ಜಯಂತ್ಗೆ ಗೊತ್ತಾಗಿದೆ. ತಾನು ಚಿನ್ನುಮರಿ ಮೇಲೆ ಹಾಗೆ ಮಾಡಿದ್ದು ಸರಿಯಲ್ಲ ಎಂದು ಅಳುತ್ತಿದ್ದಾನೆ. ಆಗ ಕೆಲಸದವಳು ಅದು ನಿನ್ನ ತಪ್ಪಲ್ಲ, ನಿನ್ನ ಮನಸ್ಸಿನದ್ದು ಎಂದಿದ್ದಾಳೆ. ಅಲ್ಲಿಗೆ ಜಯಂತ್ ಈಗ ಸಂಪೂರ್ಣ ಬದಲಾಗಿದ್ದಾನೆ. ಹುಟ್ಟು ಗುಣ ಅಷ್ಟು ಬೇಗ ಹೋಗುವುದಿಲ್ಲ ಎನ್ನುವುದು ನಿಜವಾದರೂ ಜಯಂತ್ಗೆ ಈಗ ತಾನು ಪತ್ನಿಯನ್ನು ಅತಿರೇಕದಿಂದ ಪ್ರೀತಿಸಿದೆ. ಅದು ಪ್ರೀತಿ ಅಲ್ಲ ಅತಿರೇಕ ಎನ್ನುವುದು ತಿಳಿದಿದೆ.
39
ಪತ್ನಿಯ ಕಳಕೊಂಡು ಕಣ್ಣೀರು
ಅವನು ಅಳೋದನ್ನು ವೀಕ್ಷಕರಿಗೆ ನೋಡಲಾಗ್ತಿಲ್ಲ. ಈಗ ಹೇಗಿದ್ದರೂ ಅವನಿಗೆ ಬುದ್ಧಿಬಂದಿದೆ ಅಂತಿರೋ ನೆಟ್ಟಿಗರು, ಪ್ಲೀಸ್ ಇಬ್ಬರನ್ನೂ ಒಂದು ಮಾಡಿ ಎನ್ನುತ್ತಿದ್ದಾರೆ. ಈಗ ಈತ ಸೈಕೋ ಅಲ್ಲ, ಇವನಿಗೆ ನಮ್ಮ ಲೈಕೋ ಲೈಕು ಎನ್ನುತ್ತಿದ್ದಾರೆ. ಆದರೆ ಜಾಹ್ನವಿಗೆ ಇದು ಗೊತ್ತಾಗತ್ತಾ? ಇಬ್ಬರೂ ಒಂದಾಗುತ್ತಾರಾ ಎನ್ನುವುದು ಸದ್ಯಕ್ಕೆ ಇರುವ ಕುತೂಹಲ.
ಅಷ್ಟಕ್ಕೂ, ವಿಶ್ವನ ಮನೆಯಲ್ಲಿ ಜಾಹ್ನವಿ ಉಳಿದುಕೊಂಡಿದ್ದಾಳೆ. ವಿಶ್ವನ ನಿಶ್ಚಿತಾರ್ಥವೂ ನಡೆದಿದೆ. ಆದರೆ ಆತ ಇನ್ನೂ ಜಾಹ್ನವಿಯ ಗುಂಗಿನಿಂದ ಹೊರಕ್ಕೆ ಬಂದಿಲ್ಲ. ಆದರೆ ಜಾಹ್ನವಿಗೆ ವಿಶ್ವ ತನ್ನನ್ನೇ ಲವ್ ಮಾಡ್ತಾ ಇರೋದು ಎನ್ನುವ ಸತ್ಯ ಅವಳಿಗೆ ತಿಳಿದಿದೆ. ಆದರೆ ಏನೂ ಮಾಡದ ಸ್ಥಿತಿ ಆಕೆಯದ್ದು. ಜಯಂತ್ ವಿಶ್ವನ ಮನೆಗೇ ಬಂದಿದ್ದ. ಆತನ ನೋಡಿ ಜಾಹ್ನವಿಗೆ ಗಾಬರಿ ಆಗಿತ್ತು. ಆಕೆ ಅಲ್ಲಿ ಚಂದನಾ ಹೆಸರಿನಲ್ಲಿ ವಾಸವಾಗಿದ್ದಾಳೆ (ಅಸಲಿಗೆ ನಟಿಯ ಅಸಲಿ ಹೆಸರು ಕೂಡ ಚಂದನಾ). ಇದೇ ವೇಳೆ ವಿಶ್ವನ ಅಮ್ಮ ಜಯಂತ್ಗೆ ಕಾಫಿ ತಂದುಕೊಡಲು ಹೇಳಿದ್ದಳು. ಇನ್ನು ಮುಗಿಯಿತು ತನ್ನ ಕಥೆ ಎಂದುಕೊಳ್ಳುವಷ್ಟರಲ್ಲಿ ವಿಶ್ವ ಬಂದು ಕಾಪಾಡಿದ್ದ.
59
ವಿಶ್ವನ ಮನೆಯಲ್ಲಿ ಜಾಹ್ನವಿ
ಸದ್ಯ ಜಯಂತ್ಗೆ ಜಾಹ್ನವಿ ಅಲ್ಲೇ ಇರುವ ವಿಷಯ ತಿಳಿದಿಲ್ಲ. ಹಾಗೆಂದು ಆತನಿಗೆ ಅವಳು ಬದುಕಿದ್ದಾಳೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಆದರೆ, ಆಕೆಯನ್ನು ಹೇಗೆ ಪತ್ತೆ ಮಾಡುವುದು ತಿಳಿಯದೇ ಪೇಚಿಗೆ ಸಿಲುಕಿದ್ದಾನೆ. ಸದ್ಯ ಅವನ ಕೈಯಲ್ಲಿ ಇರುವುದು ಗೂಬೆಯ ಅಸ್ತ್ರ ಮಾತ್ರ.
69
ಹತ್ತಿರವಿದ್ದರೂ ತಿಳಿಯದ ಜಯಂತ್
ಈ ಹಿಂದೆ ವಿಶ್ವ ಮನೆಗೆ ಬಂದು ಜಾಹ್ನವಿ ಕಾಣದಿದ್ದಾಗ ಪತ್ರವೊಂದನ್ನು ಬರೆದು ಮನೆಯೊಳಗೆ ಎಸೆದಿದ್ದನು. ಕೊನೆಯಲ್ಲಿ ತನ್ನ ಹೆಸರಿನ ಬದಲಾಗಿ ಗೂಬೆ ಎಂದು ಬರೆದಿದ್ದನು. ಈ ಪತ್ರ ಶಾಂತಮ್ಮಳಿಗೆ ಸಿಕ್ಕಿತ್ತು. ಈ ಪತ್ರ ನೋಡಿದ್ರೆ ಜಯಂತ್ ಇನ್ನೇನು ಮಾಡುತ್ತಾನೆ ಎಂದು ಶಾಂತಮ್ಮ ಭಯಪಟ್ಟಿದ್ದಳು. ಆದ್ರೂ ಪತ್ರ ಮುಚ್ಚಿಡಲು ಪ್ರಯತ್ನಿಸಿದ್ದ ಶಾಂತಮ್ಮಾ, ತಗ್ಲಾಕೊಂಡಿದ್ದಳು. ಕೊನೆಗೂ ಜಯಂತ್ಗೆ ಆ ಪತ್ರ ಸಿಕ್ಕಿತ್ತು.
79
ಗೂಬೆ ಬಗ್ಗೆ ತನಿಖೆ
ಇದರಿಂದ ಗೂಬೆ ಯಾರು ಎನ್ನುವ ಬಗ್ಗೆ ತನಿಖೆ ಶುರುವಿಟ್ಟುಕೊಂಡಿದ್ದಾನೆ. ಒಂದು ವೇಳೆ ಜಾಹ್ನವಿ ವಿಶ್ವನ ಮನೆಯಲ್ಲಿ ಇರುವ ವಿಷ್ಯ ಗೊತ್ತಾದ್ರೆ ಅಷ್ಟೇ ಕಥೆ. ಏಕೆಂದ್ರೆ, ಅವನು ಜಾಹ್ನವಿ ಕಾಲೇಜಿನಲ್ಲಿದ್ದಾಗ ಅವಳ ಸ್ನೇಹಿತನಾಗಿದ್ದ ವಿಶ್ವನೊಂದಿಗೆ ಕ್ಲೋಸ್ ಆಗಿದ್ದಕ್ಕಾಗಿ ಅವಳನ್ನು ಶಿಕ್ಷಿಸಿದ್ದ. ಇದೀಗ ಮತ್ತೆ ಅಲ್ಲೇ ಇದ್ದಾಳೆ ಎಂದು ತಿಳಿದರೆ ಜಾಹ್ನವಿ ಪಾಡು ದೇವ್ರೇ ಗತಿ.
89
ಜಯಂತ್ ಮುಂದಿನ ನಡೆಯೇನು?
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಜಯಂತ್, ಪೆನ್ಡ್ರೈವ್ನಲ್ಲಿ ಜಾಹ್ನವಿ ಕ್ಲಾಸ್ಮೇಟ್ಸ್ ಡಿಟೇಲ್ಸ್ ತೆಗೆದುಕೊಂಡು ಬಂದಿದ್ದ. ಅದರಲ್ಲಿ ಎಲ್ಲರಿಗೂ ಕಾಲ್ ಮಾಡಿ ಗೂಬೆ ಅಂತ ಹೇಳ್ತಿರೋದು ಯಾರಿಗೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ ಆತ. ಗೂಬೆ ಯಾರೆಂದು ಗೊತ್ತಾದರೆ ಜಾಹ್ನವಿ ಎಲ್ಲಿದ್ದಾಳೆ ಗೊತ್ತಾಗುತ್ತದೆ ಎನ್ನುವುದು ಅವನ ಅನಿಸಿಕೆ. ಶಾಂತಮ್ಮ ಇದನ್ನು ನೋಡಿ ಗಾಬರಿಗೊಂಡಿದ್ದಾಳೆ. ಇವನ ಕೈಗೆ ಅವಳು ಸಿಕ್ಕರೆ ಗತಿ ಏನು ಎನ್ನುವುದು ಆಕೆಗೂ ಗೊತ್ತು. ಆದರೆ ಏನೂ ಮಾಡದ ಸ್ಥಿತಿ.
99
ದಂಪತಿ ಒಂದಾಗಲಿ ಎಂದು ಹಾರೈಕೆ
ಇಷ್ಟೆಲ್ಲಾ ಮಾಡಿದ ಮೇಲೆ ಜಾಹ್ನವಿ ಸಿಕ್ಕಿಬೀಳ್ತಾಳೆ ಎನ್ನೋ ಭಯ ಸೀರಿಯಲ್ ಪ್ರೇಮಿಗಳದ್ದಾಗಿತ್ತು. ಯಾವುದೇ ಕಾರಣಕ್ಕೂ ಗೂಬೆ ಜಯಂತ್ಗೆ ಸಿಗದಂತೆ ಮಾಡಪ್ಪಾ ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಆದರೆ ಇದೀಗ ಜಯಂತ್ಗೆ ತನ್ನ ತಪ್ಪಿನ ಅರಿವು ಆಗ್ತಿರೋ ಕಾರಣ ಇಬ್ಬರೂ ಒಂದಾಗಲಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.