ಟಾಲಿವುಡ್ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.
ಟಾಲಿವುಡ್ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಪಾಸಿಟಿವ್ ಪ್ರತಿಕ್ರಿಯೆ ಕೊಡುತ್ತಿರುವ ಕಾರಣ, ಸಿನಿಮಾಗೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.
27
105 ವರ್ಷಗಳಲ್ಲಿ ಇದೇ ಮೊದಲು!
ಇದರೊಂದಿಗೆ ಈ ಸಿನಿಮಾ ಹಲವು ದಾಖಲೆಯನ್ನು ನಿರ್ಮಿಸುತ್ತಿದೆ. 105 ವರ್ಷಗಳ ಟಾಲಿವುಡ್ ಸಿನಿಮಾ ದಾಖಲೆಗಳನ್ನು ಬ್ರೇಕ್ ಮಾಡಿದ್ದು, ಭಾನುವಾರ ತೆಲುಗು ರಾಜ್ಯಗಳಲ್ಲಿ ಹಾಕಿದ್ದ ಎಲ್ಲಾ ಶೋಗಳು ಹೌಸ್ ಫುಲ್ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಹೌದು, ಈ ರೀತಿ ನಡೆದಿರೋದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಬಾರಿಗೆ ಎಂದು ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ.
37
ಸಿನಿಮಾ ಚೆನ್ನಾಗಿದ್ದರೆ ಜನರು ಥಿಯೇಟರ್ಗೆ ಬರ್ತಾರೆ!
ಸಿನಿಮಾ ಕಥೆ ಉತ್ತಮವಾಗಿದ್ದರೆ ಜನರು ಈಗಲೂ ಥಿಯೇಟರ್ಗೆ ಬರ್ತಾರೆ ಅನ್ನೋದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ. ಚಿತ್ರಮಂದಿರಕ್ಕೆ ಬರುವುದನ್ನೇ ನಿಲ್ಲಿಸಿದ್ದ ಹಲವು ಮಂದಿಯನ್ನು ಕೈ ಹಿಡಿದು ಥಿಯೇಟರ್ ಮೆಟ್ಟಿಲು ಹತ್ತುವಂತೆ ಮಾಡಿದೆ. ಸದ್ಯ ಎರಡು ರಾಜ್ಯದಲ್ಲಿ ಸಿನಿಮಾ ಫೀವರ್ ಹೆಚ್ಚಾಗಿದೆ. ಇನ್ನು ಹಲವು ವರ್ಷಗಳಿಂದ ಸೂಪರ್ ಹಿಟ್ ಸಿನಿಮಾಗಾಗಿ ಕಾದುಕುಳಿತ್ತಿದ್ದ ರವಿತೇಜ ಅವರಿಗೂ ಇದು ಕಮ್ಬ್ಯಾಕ್ ಸಿನಿಮ ಎಂದು ಹೇಳಬಹುದು.
ಒಂದು ಮಿಡಲ್ ಕ್ಲಾಸ್ ತಂದೆಯ ಪಾತ್ರದಲ್ಲಿ ರವಿತೇಜ್ ನಟಿಸಿದ್ದು, ನಿರ್ದೇಶಕ ತಾವು ಆಯ್ಕೆ ಮಾಡಿಕೊಂಡಿದ್ದ ಕಥೆಯನ್ನು ಯಾವುದೇ ಗೊಂದಲವಿಲ್ಲದೇ ಪ್ರೇಕ್ಷಕರು ಮುಂದಿಟ್ಟಿದ್ದಾರೆ. ಸಿನಿಮಾ ಕಥ ಹಲವರಿಗೆ ಗೊತ್ತಿದೆ ಅಂತ ಅನಿಸಿದರೂ, ಅದನ್ನು ವಿಶೇಷವಾಗಿ ಸಿನಿಮಾ ಪ್ರೇಮಿಗಳ ಮುಂದಿಟ್ಟಿದ್ದಾರೆ. ಒಂದು ಥ್ರಿಲ್ಲರ್ ಕಥೆಯನ್ನು ಭಕ್ತಿಪೂರ್ವಕವಾಗಿ ಹೊಸದಾಗಿ ಸಿನಿಮ್ಯಾಟಿಕ್ ರೂಪದಲ್ಲಿ ಹೇಳಲು ಯಶಸ್ವಿಯಾಗಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ.
57
ಇರುಮುಡಿ ಭರ್ಜರಿ ಗಳಿಕೆ
ಸಿನಿಮಾ ಕಲೆಕ್ಷನ್ಗಳು ಉತ್ತಮವಾಗಿದ್ದು, ಮೂರು ದಿನದಲ್ಲಿ 72 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕಳೆದ ಒಂದು ದಶಕದಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ, ಕೇವಲ ಒಂದೂವರೆ ದಿನದಲ್ಲಿಯೇ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ವೆಚ್ಚವನ್ನು ಮರುಗಳಿಸಿದ (break-even) ಏಕೈಕ ಗಮನಾರ್ಹ ಚಿತ್ರವಾಗಿ 'ಇರುಮುಡಿ' (Irumudi) ಹೊರಹೊಮ್ಮಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಕಂಡು ಸ್ವತಃ ವಾಣಿಜ್ಯ ವಲಯದವರೇ ಅಚ್ಚರಿಗೊಂಡಿರುವುದು ನಿಜಕ್ಕೂ ಗಮನಾರ್ಹ ಸಂಗತಿಯಾಗಿದೆ.
67
262 ನೈಟ್ ಶೋಗಳು ಹೌಸ್ ಫುಲ್!
ಭಾನುವಾರ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಹಾಕಿದ್ದ ಶೋಗಳಲ್ಲಿ ಶೇಕಡಾ 97ರಷ್ಟು ಟಿಕೆಟ್ಗಳು ಮಾರಾಟವಾಗಿದ್ದು, ಅದರಲ್ಲೂ ಹೈದರಾಬಾದ್ ನಗರವೊಂದರಲ್ಲೇ ಹಾಕಿದ್ದ 262 ನೈಟ್ ಶೋಗಳು ಫುಲ್ ಆಗಿದೆ. ಮೈತ್ರಿ ಮ್ಯೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ತೆಲುಗು ರಾಜ್ಯಗಳಾದ ಪ್ರಮುಖ ನಗರಗಳಾದ ಹೈದರಾಬಾದ್, ವಿಶಾಖಪಟ್ಟಣ, ವಿಜಯವಾಡ ಸೇರಿದಂತೆ ಹಲವು ನಗರಗಳಲ್ಲಿ 500 ಹೆಚ್ಚು ಶೋಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಶೋ ಪ್ರದರ್ಶನ ಕಂಡಿದೆ.
77
ಸಿನಿಮಾ ಕಥೆ ಎಲ್ಲರಿಗೂ ಗೊತ್ತಿದೆ, ಆದರೆ ನಿರ್ದೇಶಕರು ಗೆದ್ದಿದ್ದು ಎಲ್ಲಿ?
ಇನ್ನು, ಸಿನಿಮಾ ಕಥೆ ವಿಚಾರಕ್ಕೆ ಬಂದರೆ, ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಅರಣ್ಯ ಪ್ರದೇಶದ ಸಮೀಪದ ಪೊಲ್ಲೂರು ಗ್ರಾಮದಲ್ಲಿ ತ್ರಿನಾಥ್ ರಾಮ್, ಕಾವೇರಿ ದಂಪತಿಯ ಮಗಳು ಮಣಿಕಂಠ ಜೊತೆ ಜೀವನ ನಡೆಸುತ್ತಿರುತ್ತಾರೆ. ಮಗಳು ಎಂದರೆ ತಂದೆಗೆ ಪ್ರಾಣ, ತಾನು ನೋಡಿದ ಪ್ರತಿ ಹೆಣ್ಣು ಮಗಳಲ್ಲಿಯೂ ತನ್ನ ಮಗಳನ್ನು ನೋಡುವ ಭಾವನೆಯನ್ನು ತಂದೆ ಹೊಂದಿರುತ್ತಾನೆ. ಆದರೆ ಆತನಿಗೆ ಇರುವ ಕುಡಿತದಿಂದ ದೂರವಿರಲೂ ಆತ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ಮಾಲೆ ಧರಿಸುತ್ತಾನೆ. ಆ ಬಳಿಕ 41 ದಿನ ನಿಷ್ಠೆಯಿಂದ ಜೀವನ ನಡೆಸುತ್ತಾನೆ. ಇದೇ ಸಂದರ್ಭದಲ್ಲಿ ಗ್ರಾಮದ ಶಾಲೆಯಲ್ಲಿ ನಡೆದ ಘಟನೆ ಕಥೆಗೆ ಟ್ವಿಸ್ಟ್ ನೀಡುತ್ತದೆ. ಶಾಲೆಯ ಶಿಕ್ಷಕಿಯಿಂದ ಬಾಲಕಿಯೊಬ್ಬಳು ಸಾವನ್ನಪ್ಪುತ್ತಾಳೆ, ಟೀಚರ್ ಅಮಾನತು ಆಗುತ್ತಾಳೆ. ಆದರೆ ಆಕೆ ವಾಪಸ್ ಬಂದ ಬಳಿಕ ಏನೆಲ್ಲಾ ಟ್ವಿಸ್ಟ್ಗಳು ಸಿಗುತ್ತದೆ? ತ್ರಿನಾಥ್ಗೆ ಬಂದ ಸಮಸ್ಯೆ ಏನು? ಆತ ಮಾಲೆ ಏಕೆ ಧರಿಸುತ್ತಾನೆ? ಅನ್ನೋದನ್ನು ತಿಳಿದುಕೊಳ್ಳಲು ನೀವು ಸಿನಿಮಾ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.