ಬಾಹುಬಲಿಯಲ್ಲಿ ಶಿವಗಾಮಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಹೇಂದ್ರ ಬಾಹುಬಲಿಯನ್ನು ಕಾಪಾಡುತ್ತಾಳೆ. ಆ ದೃಶ್ಯಕ್ಕೆ 48 ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ನಿಜವಾದ ಘಟನೆಯೇ ಸ್ಫೂರ್ತಿ ಅನ್ನೋದು ನಿಮಗೆ ಗೊತ್ತಾ?
ರಾಜಮೌಳಿ ನಿರ್ದೇಶನದ ಬಾಹುಬಲಿ ಅ.31ಕ್ಕೆ ಮರು ಬಿಡುಗಡೆಯಾಗಿದೆ. ಬಾಹುಬಲಿ 1 ಮತ್ತು 2 ಸೇರಿಸಿ 'ಬಾಹುಬಲಿ ದಿ ಎಪಿಕ್' ಹೆಸರಲ್ಲಿ ರಿಲೀಸ್ ಆಗಲಿದೆ. ಈ ವೇಳೆ ಚಿತ್ರದ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷಯಗಳು ವೈರಲ್ ಆಗಿವೆ.
25
ಹಾಲಿವುಡ್ ಸಿನಿಮಾದಿಂದ ಕಾಪಿ
ಬಾಹುಬಲಿ 1ರಲ್ಲಿ ಶಿವಗಾಮಿ ನದಿಯಲ್ಲಿ ಮುಳುಗುತ್ತಿದ್ದರೂ, ಮಗುವನ್ನು ಒಂದೇ ಕೈಯಲ್ಲಿ ಹಿಡಿದಿರುತ್ತಾಳೆ. ಈ ಪೋಸ್ಟರ್ ಹಾಲಿವುಡ್ ಸಿನಿಮಾದಿಂದ ಕಾಪಿ ಮಾಡಲಾಗಿದೆ ಎಂದು ಟ್ರೋಲ್ ಆಗಿತ್ತು. ಆದರೆ ಇದರ ಸ್ಫೂರ್ತಿ ಬೇರೆಲ್ಲೋ ಅಲ್ಲ.
35
ನೈಸರ್ಗಿಕ ವಿಕೋಪ
1977ರಲ್ಲಿ ಆಂಧ್ರಪ್ರದೇಶದಲ್ಲಿ 'ದಿವಿ ಸೀಮಾ' ಚಂಡಮಾರುತ ಭಾರಿ ಅನಾಹುತ ಸೃಷ್ಟಿಸಿತ್ತು. ಈ ನೈಸರ್ಗಿಕ ವಿಕೋಪದಲ್ಲಿ 10,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತವನ್ನು ಕಲಾವಿದ ವದ್ದಾಡಿ ಪಾಪಯ್ಯ ಚಿತ್ರಿಸಿದ್ದರು.
ದಿವಿ ಸೀಮಾ ಚಂಡಮಾರುತದ ಕೆಲವು ಹೃದಯ ವಿದ್ರಾವಕ ಘಟನೆಗಳನ್ನು ಅವರು ಚಿತ್ರಿಸಿದ್ದರು. ಅದರಲ್ಲಿ ತಾಯಿಯೊಬ್ಬಳು ಪ್ರವಾಹದಲ್ಲಿ ಮುಳುಗುತ್ತಿದ್ದರೂ ತನ್ನ ಮಗುವನ್ನು ಕೈಯಲ್ಲಿ ಹಿಡಿದಿರುತ್ತಾಳೆ. ಬಾಹುಬಲಿ ದೃಶ್ಯಕ್ಕೆ ಇದೇ ಸ್ಫೂರ್ತಿ.
55
ಪೇಂಟಿಂಗ್ ಈಗ ವೈರಲ್
ಪಾಪಯ್ಯ ಅವರು 'ಚಂದಮಾಮ' ಪತ್ರಿಕೆಯಲ್ಲಿ ಮಹಿಷಾಸುರ ಮರ್ದಿನಿಯಂತಹ ಅನೇಕ ಕಲಾಕೃತಿಗಳನ್ನು ರಚಿಸಿದ ಖ್ಯಾತ ಕಲಾವಿದರು. ಅವರು ಬರೆದ ವಿಷ್ಣು ಕಥೆಯೂ ಜನಪ್ರಿಯವಾಗಿತ್ತು. ಅವರ ಈ ಪೇಂಟಿಂಗ್ ಈಗ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.