ಸನ್ನಿ ಡಿಯೋಲ್‌ ಮ್ಯಾಚ್‌ ಆಗೋಲ್ಲವೆಂದು ನಟಿಸಲು ನಿರಾಕರಿಸಿದ್ದರಂತೆ ಈ ನಟಿ

First Published Dec 5, 2022, 5:28 PM IST

ಸನ್ನಿ ಡಿಯೋಲ್ (Sunny Deol) ಅವರ ಮುಂಬರುವ ಚಿತ್ರ 'ಗದರ್ 2'  (Gadar 2) ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಪ್ರೇಕ್ಷಕರು ಇಲ್ಲಿಯವರೆಗೆ ನೋಡದ ಸಾಹಸ ದೃಶ್ಯಗಳು ಚಿತ್ರದಲ್ಲಿ ಕಾಣಿಸುತ್ತವೆ ಎಂದು ಹೇಳಲಾಗುತ್ತಿದೆ.  ಅಂದಹಾಗೆ, ಚಿತ್ರದ ಮೊದಲ ಪಾರ್ಟ್‌ ಕೂಡ ಆ್ಯಕ್ಷನ್‌ನಿಂದ ತುಂಬಿತ್ತು ಮತ್ತು ಈ ಚಿತ್ರ ಆ ಕಾಲದ ಅತಿ ಹೆಚ್ಚು ಗಳಿಕೆ ಚಿತ್ರಗಳಲ್ಲಿ ಒಂದಾಗಿದೆ. ಆದರೆ ಈ ಚಿತ್ರದಕ್ಕೆ ಸನ್ನಿ ಡಿಯೋಲ್ ಮತ್ತು ಅಮಿಶಾ ಪಟೇಲ್ (Amisha Patel) ಬದಲಿಗೆ ಗೋವಿಂದ (Govinda) ಮತ್ತು ಕಾಜೋಲ್ (Kajol) ಅವರನ್ನು ಮೊದಲು ಸಂಪರ್ಕಿಸಲಾಗಿತ್ತು. ಆದರೆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?

ಈ ಹಿಂದೆ 'ಗದರ್: ಏಕ್ ಪ್ರೇಮ್ ಕಥಾ' ಚಿತ್ರದಲ್ಲಿ ತಾರಾ ಸಿಂಗ್ ಪಾತ್ರಕ್ಕಾಗಿ ಗೋವಿಂದ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದರು, ಆದರೆ ಈ ಸಮಯದಲ್ಲಿ ಅನಿಲ್ ಶರ್ಮಾ ನಿರ್ದೇಶನದ ಅವರ 'ಮಹಾರಾಜ' ಚಿತ್ರವೂ ವಿಫಲವಾಯಿತು. ಚಿತ್ರ ಫ್ಲಾಪ್ ಆದ ಕೂಡಲೇ ಗೋವಿಂದ ಮತ್ತು ಅನಿಲ್ ಶರ್ಮಾ ನಡುವೆ ಕ್ರಿಯೇಟಿವ್ ಡಿಫರೆನ್ಸ್ ಉಂಟಾಗಿ ಚಿತ್ರ ಗೋವಿಂದನ ಕೈಯಿಂದ ಹೊರಬಿದ್ದಿದೆ ಎನ್ನಲಾಗಿದೆ. 

ಅಂದಹಾಗೆ, ಈ ವರದಿಯ ಬಗ್ಗೆ ಅನಿಲ್ ಶರ್ಮಾ ಅವರ ಅಭಿಪ್ರಾಯಯ ಬೇರೆಯೇ ಆಗಿದೆ. ಅನಿಲ್ ಶರ್ಮಾ ಸಂದರ್ಶನವೊಂದರಲ್ಲಿ ಗೋವಿಂದ ಚಿತ್ರಕ್ಕೆ ತನ್ನ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಅವರ ಪ್ರಕಾರ, ಅವರು ಚಿತ್ರದ ಕಥೆಯನ್ನು ಗೋವಿಂದನಿಗೆ ವಿವರಿಸಿದರು. ಆದರೆ ಅದನ್ನು ಕೇಳಿ ಅವರು ಗಾಬರಿಗೊಂಡರು. ಗೋವಿಂದ ಅವರ ಜೊತೆ 'ಗದರ್' ಸಿನಿಮಾ ಮಾಡಬೇಕೆಂದು ಅಂದಕೊಂಡಿರಬೇಕು. ಆದರೆ ಅವರು ಎಂದಿಗೂ ಚಿತ್ರಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಶರ್ಮಾವೆಂದೇ ಹೇಳಿದರು. ಅವರ ಪ್ರಕಾರ, ಚಿತ್ರಕ್ಕೆ ಸನ್ನಿ ಡಿಯೋಲ್ ಮೊದಲ ಮತ್ತು ಕೊನೆಯ ಆಯ್ಕೆ

ಕಾಜೋಲ್‌ಗೆ ಆಫರ್ ಮಾಡಲ್ಪಟ್ಟಿದೆ, ಆದರೆ ಅವರು ಅದನ್ನು ಮಾಡಲು ಸಿದ್ಧರಿಲ್ಲ. ಕಾಜೋಲ್ ಜೊತೆ ಡೇಟ್ಸ್ ಸಿಕ್ಕಿರಲಿಲ್ಲ ಎನ್ನಲಾಗಿದೆ. ಕಾಜೋಲ್, ಸನ್ನಿ ಡಿಯೋಲ್ ಅವರನ್ನು ತನಗೆ ಮ್ಯಾಚ್‌ ಎಂದು ಪರಿಗಣಿಸಿಲ್ಲ ಎಂದು ಸ್ವತಃ ಅನಿಲ್ ಶರ್ಮಾ ನಟಿಯ ಹೆಸರಿಸದೇ ಸೂಚಿಸಿದ್ದರು. ಈ ಚಿತ್ರಕ್ಕಾಗಿ ನಾನು ಅನೇಕ ನಟಿಯರನ್ನು ಸಂಪರ್ಕಿಸಿದ್ದೇನೆ ಎಂದಿದ್ದರು. ಆದರೆ ಅವರೆಲ್ಲರೂ  ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದರು.

'ನಾನು ಹೆಸರು ತೆಗೆದುಕೊಳ್ಳುವುದಿಲ್ಲ, ಇದು ಸರಿಯಲ್ಲ. ಮಾಧ್ಯಮಗಳು ಯಾರ ಹೆಸರನ್ನೂ ಹೇಳಲು ಮುಕ್ತವಾಗಿವೆ. ಆದರೆ ನಾನು ಅನೇಕ ಟಾಪ್ ನಟಿಯರನ್ನು ಸಂಪರ್ಕಿಸಿದ್ದೇನೆ. ಕೆಲವರು ತಮಗಾಗಲ್ಲವೆಂದು ಭಾವಿಸಿದ್ದರು. ಕೆಲವರು ಅವರ ಲೆವಲ್‌ಗೆ ಸನ್ನಿ ಡಿಯೋಲ್ ಜೊತೆ ಆಗುವುದಿಲ್ಲ ಎಂದು ಭಾವಿಸಿದ್ದರು ಮತ್ತು ಸನ್ನಿಯನ್ನು ಉನ್ನತ ಸ್ಥಾನದಲ್ಲಿಟ್ಟು ನೋಡುತ್ತಿದ್ದರು. ಅವರು ನಮ್ಮ ಕಥೆಯನ್ನು ಕೇಳಲಿಲ್ಲ'  ಎಂದು ನಿರ್ದೇಶಕ ಶರ್ಮಾ ಹೇಳಿದ್ದಾರೆ.

'ಕೆಲವು ನಟಿಯರಿಗೆ ಇದು ಪಿರಿಯಡ್‌ ಡ್ರಾಮಾ ಮತ್ತು ತಮ್ಮ ಇಮೇಜ್ ಹಾಳಾಗಬಹುದು ಎಂದೇ ಭಾವಿಸಿದರು. ಆ ದಿನಗಳಲ್ಲಿ ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಗಿತ್ತು. ಯೂತ್ ಓರಿಯೆಂಟೆಡ್ ಚಲನಚಿತ್ರಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದರು. ಎಂದು ಅನಿಲ್ ಶರ್ಮಾ ಹೇಳಿದ್ದಾರೆ

ಚಿತ್ರಕ್ಕಾಗಿ 400 ನಾಯಕಿಯರನ್ನು ಸ್ಕ್ರೀನ್ ಟೆಸ್ಟ್ ಮಾಡಲಾಗಿದೆ, ಅದರಲ್ಲಿ ಅಮೀಶಾ ಪಟೇಲ್ ಅವರನ್ನು ಅಂತಿಮಗೊಳಿಸಲಾಯಿತು. ಚಿತ್ರದ ದೃಶ್ಯವೊಂದರಲ್ಲಿ ಕಪಿಲ್ ಶರ್ಮಾ ಕೂಡ ಭಾಗಿಯಾಗಿದ್ದರು.  ವಾಸ್ತವವಾಗಿ, ಈ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ, ಕಪಿಲ್ ಹದಿಹರೆಯದವರಾಗಿದ್ದರು. ಅಮೀಶಾ ಪಟೇಲ್ ಅವರ ರೈಲು ಹತ್ತುವ ದೃಶ್ಯದಲ್ಲಿ ಅವರು ಗುಂಪಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕಪಿಲ್‌ಗೆ ಈ ದೃಶ್ಯಗಳು ಸಿಕ್ಕಿದ್ದು ಅವರ ತಂದೆಯ ಕಾರಣದಿಂದ. ಅವರು ಪೊಲೀಸ್ ಅಧಿಕಾರಿಯಾಗಿದ್ದು, ಚಿತ್ರದ ಶೂಟಿಂಗ್ ಸಮಯದಲ್ಲಿ ಸೆಟ್‌ನಲ್ಲಿ ಕರ್ತವ್ಯದಲ್ಲಿದ್ದರು.

ಮೊದಲ ದಿನ 1.40 ಕೋಟಿ, ಮೊದಲ ವಾರಾಂತ್ಯದಲ್ಲಿ 4.08 ಕೋಟಿ ಮತ್ತು ಮೊದಲ ವಾರದಲ್ಲಿ 9.28 ಕೋಟಿ ಗಳಿಸಿ ಈ ಚಿತ್ರದ ಜೀವಿತಾವಧಿಯ ಸಂಗ್ರಹವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸರಿಸುಮಾರು 76.88 ಕೋಟಿ ಮತ್ತು ವಿಶ್ವಾದ್ಯಂತ 143 ಕೋಟಿ ಆಗಿತ್ತು.

1947ರ ವಿಭಜನೆಯ ಸಮಯದಲ್ಲಿ ಮುಸ್ಲಿಂ ಹುಡುಗಿ ಜೈನಾಬ್ ಅವರ ಜೀವವನ್ನು ಉಳಿಸಿದ ನಿವೃತ್ತ ಬ್ರಿಟಿಷ್ ಆರ್ಮಿ ಅಧಿಕಾರಿ ಬೂಟಾ ಸಿಂಗ್ ಅವರ ಪ್ರೇಮಕಥೆ ಈ ಚಲನಚಿತ್ರದ ಕಥೆಗೆ ಪ್ರೇರೇಪಿಸಲಾಗಿದೆ. ಬೂಟಾ ಜೈನಾಬ್ ಳನ್ನು ಪ್ರೀತಿಸಿ ಮದುವೆಯಾಗಿದ್ದರು. ಜೈನಾಬ್ ಮುಸ್ಲಿಂ ಎಂಬ ಕಾರಣಕ್ಕೆ ಆಕೆಯನ್ನು ನಂತರ ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು. ಜೈನಬಳನ್ನು ಮರಳಿ ಕರೆತರಲು ಬುಟಾ ಅಕ್ರಮವಾಗಿ ಪಾಕಿಸ್ತಾನವನ್ನು ಪ್ರವೇಶಿಸುತ್ತಾರೆ. ಆದರೆ ಕುಟುಂಬದ ಒತ್ತಡದಿಂದ ಜೈನಬ್ ಹಿಂದೆ ಸರಿಯುತ್ತಾಳೆ. ಹತಾಶೆಗೊಂಡ ಬೂಟಾ ತನ್ನ ಮಗಳೊಂದಿಗೆ ಪಾಕಿಸ್ತಾನದ ಶಹದಾರಾ ನಿಲ್ದಾಣದ ಬಳಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ, ಆದರೆ ಮಗಳು ಬದುಕುಳಿದಿದ್ದಾಳೆ.

click me!