ಒಂದೊಳ್ಳೆ ಕೆಲಸಕ್ಕೆ ಅಭಿಮಾನಿಗಳಲ್ಲಿ ರಮ್ಯಾ ಮನವಿ

First Published Jun 3, 2020, 9:30 PM IST

ಬೆಂಗಳೂರು(ಜೂ.03)  ಫೇಸ್ ಬುಕ್ ನಲ್ಲಿ ಪ್ರತ್ಯಕ್ಷವಾದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮಾನವನ ಘೋರ ಕೆಲಸಕ್ಕೆ ಬಲಿಯಾದ ಆನೆಯ  ಸಾವಿಗೆ ನ್ಯಾಯ ಕೇಳಿದ್ದಾರೆ. ಕೆಪಿಸಿಸಿ ಸೋಶಿಯಲ್ ಮೀಡಿಯಾ ವಿಂಗ್ ನೋಡಿಕೊಳ್ಳುತ್ತಿದ್ದ ರಮ್ಯಾ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಿಂದಲೇ ನಾಪತ್ತೆಯಾಗಿದ್ದರು. 

ಆನೆಯ ಸಾವಿಗೆ ಕಾರಣರಾದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು ಎಂದು ರಮ್ಯಾ ಆಗ್ರಹಿಸಿದ್ದಾರೆ.
undefined
ಆನೆಯ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲು ಪಿಟಿಷನ್ ಸೈನ್ ಮಾಡಲು ಮನವಿ ಮಾಡಿಕೊಂಡಿದ್ದಾರೆ.
undefined
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಪ್ರಾಣಿ ದೌರ್ಜನ್ಯದ ಆಘಾತಕಾರಿ ಘಟನೆ ನಡೆದು ಹೋಗಿದೆ.
undefined
ಪಟಾಕಿ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದೆ. ಮಾಹಿತಿ ಪ್ರಕಾರ ಕೆಲವು ಸ್ಥಳೀಯರು ಆನೆಗೆ ಈ ಆಹಾರ ನೀಡಿದ್ದರು. ಮಲಪ್ಪುರಂ (Malappuram) ಜಿಲ್ಲೆಯ ಅರಣ್ಯ ಅಧಿಕಾರಿಯೊಬ್ಬರು ಈ ಭೀಕರ ಘಟನೆಯ ವಿವರಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡ ನಂತರ ಇಡೀ ದೇಶಾದ್ಯಂತ ವ್ಯಾಪಕ ಪ್ರತಿಕ್ರಿಯೆ ಬರುತ್ತಿದೆ.
undefined
ಮನುಷ್ಯರನ್ನು ನಂಬಿದ ಆನೆ ದಾರುಣ ಅಂತ್ಯ ಕಂಡಿದ್ದರ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಲೇ ಇದೆ.
undefined
ರಮ್ಯಾ ತಮ್ಮ ಟ್ವಿಟರ್ ಖಾತೆಯನ್ನು ಕೆಲ ಕಾಲ ಡಿಲೀಟ್ ಮಾಡಿದ್ದರು.
undefined
click me!