KGF ನಂತರ ತಿರುಗಿದ ಸಂಜಯ್‌ದತ್‌ ಲಕ್; ತಲಪತಿ ಜೊತೆ ಮುಂದಿನ ಚಿತ್ರ?

First Published Sep 13, 2022, 5:32 PM IST

ಸೌತ್ ಸ್ಟಾರ್ ಯಶ್  (YAsh )ಅಭಿನಯದ ಕೆಜಿಎಫ್ 2 (KGF 2) ಸಿನಿಮಾ ಮೂಲಕ ಸದ್ದು ಮಾಡಿದ್ದ ಸಂಜಯ್ ದತ್‌ಗೆ  (Sanjay Dutt) ಮತ್ತೊಂದು ಸೌತ್ ಸಿನಿಮಾ (South Indian Movie) ಸಿಕ್ಕಿದೆ ಎನ್ನಲಾಗಿದೆ.. ಸೌತ್ ಸ್ಟಾರ್ ತಲಪತಿ ವಿಜಯ್ (Thalapathy Vijay) ಅವರ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ (Shooting) ಆರಂಭವಾಗಲಿದೆ. ಅಷ್ಟೇ ಅಲ್ಲ  ಸಂಜಯ್ ದತ್ ವಿಜಯ್ ಮುಂದಿನ ಚಿತ್ರದಲ್ಲಿ 10 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ವರದಿ ಮಾಡಿದೆ.

ಸೌತ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದಲ್ಲಿ ವಿಲನ್ ಅಧೀರ ಪಾತ್ರದಲ್ಲಿ ನಟಿಸಿ ಸುದ್ದಿ ಮಾಡಿದ್ದ ಸಂಜಯ್ ದತ್ ಮತ್ತೊಂದು ಸೌತ್ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಬರುತ್ತಿದೆ.
 

ದಳಪತಿ ವಿಜಯ್ ಅವರ ಹೆಸರಿಡದ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಲೋಕೇಶ್ ತನ್ನ ಗ್ಯಾಂಗ್‌ಸ್ಟರ್ ಆಧಾರಿತ ಥ್ರಿಲ್ಲರ್ ಚಿತ್ರಕ್ಕಾಗಿ ಸಂಜಯ್ ಅವರನ್ನು ಸಂಪರ್ಕಿಸಿದ್ದಾರಂತೆ.

Latest Videos


ಈ ಚಿತ್ರದಲ್ಲಿ ಹಲವು ಖಳನಾಯಕರು ಕಾಣಿಸಿಕೊಳ್ಳಲಿದ್ದು, ಅವರಲ್ಲಿ ಸಂಜಯ್ ಕೂಡ ಒಬ್ಬರು. ಚಿತ್ರದಲ್ಲಿ ಕೆಲಸ ಮಾಡಲು ಸಂಜಯ್ 10 ಕೋಟಿ ರೂ ಚಾರ್ಜ್‌ ಮಾಡಲಿದ್ದಾರಂತೆ.ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬಹುದು. ಈ ಚಿತ್ರವು 2023 ರಲ್ಲಿ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ

ಈ ವರ್ಷ ಸಂಜಯ್ ದತ್‌ ಅವರ 3 ಚಿತ್ರಗಳು ಕೆಜಿಎಫ್ 2, ಸಾಮ್ರಾಟ್ ಪೃಥ್ವಿರಾಜ್ ಮತ್ತು ಶಂಶೇರಾ ಬಿಡುಗಡೆಯಾಗಿವೆ. ಆದರೆ, ಕೆಜಿಎಫ್ 2 ಹೊರತುಪಡಿಸಿ, ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿವೆ. 

ಕೆಜಿಎಫ್ 2 ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ ನಂತರ, ಈಗ ಹೆಚ್ಚಾಗಿ ಅವರಿಗೆ ಅಂತಹ ಪಾತ್ರಗಳೇ ಬರುತ್ತಿವೆ ಮತ್ತು  ಅವರೂ ಅಂತಹ ಪಾತ್ರಗಳನ್ನು ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.ಸಂಜಯ್‌ ದತ್‌. ಅವರ ಮುಂಬರುವ ಚಿತ್ರಗಳು ದಿ ಗುಡ್ ಮಹಾರಾಜ ಮತ್ತು ಘೂರ್ಚದಿ. ಪ್ರಸ್ತುತ, ಅವರು ಈ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ದಕ್ಷಿಣ ಚಲನಚಿತ್ರಗಳ ಸೂಪರ್‌ಸ್ಟಾರ್ ಥಲಪತಿ ವಿಜಯ್, ಕೊನೆಯ ಬಾರಿಗೆ  ಬೀಸ್ಟ್‌ ಚಿತ್ರದಲ್ಲಿ ಕಾಣಿಸಿಕೊಂಡರು, ಅದು ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಈಗ ಅವರು ತಮ್ಮ ವರಿಸು ಚಿತ್ರಕ್ಕಾಗಿ ಸುದ್ದಿ ಮಾಡುತ್ತಿದ್ದಾರೆ. 

ಸುದ್ದಿ ಪ್ರಕಾರ ವಂಶಿ ಪೈಡಿಪಲ್ಲಿ ನಿರ್ದೇಶನದ ವರಿಸು ಚಿತ್ರದ ಶೂಟಿಂಗ್ ಇನ್ನೂ ನಡೆಯುತ್ತಿದ್ದು, ಚಿತ್ರ ಈಗಾಗಲೇ 150 ಕೋಟಿ ಗಳಿಸಿದೆ. ಚಿತ್ರದ ಹಿಂದಿ ಅವತರಣಿಕೆಯನ್ನು ನಿರ್ಮಾಪಕರು ಭಾರೀ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 
 

Thalapathy Vijay

ಈ ಚಿತ್ರದಲ್ಲಿ ವಿಜಯ್ ಜೊತೆ ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರಲ್ಲದೆ, ಪ್ರಕಾಶ್ ರಾಜ್, ಯೋಗಿ ಬಾಬು, ಜಯಸುಧಾ, ಪ್ರಭು, ಆರ್ ಶರತ್‌ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ವಿಜಯ್ ಅವರ 67ನೇ ಚಿತ್ರ.

click me!