ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಪುಷ್ಪ-2 ನಟ ಅಲ್ಲು ಅರ್ಜುನ್

Published : Dec 04, 2024, 04:18 PM ISTUpdated : Dec 04, 2024, 04:23 PM IST

ಅಪಾರ ಜನಪ್ರಿಯತೆಯ ಹೊರತಾಗಿಯೂ ಪುಷ್ಪ-2 ನಟ ಅಲ್ಲು ಅರ್ಜುನ್‌ ಅವರು ಗಾಸಿಪ್‌ಗಳಿಂದ ಹೊರತಾಗಿಲ್ಲ, ಅವರ ವಿರೋಧಿಗಳು ಆಗಾಗ ಅವರನ್ನು ಬೇರೆ ಬೇರೆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡ್ತಿರ್ತಾರೆ. ಇದು ಅವರ ನಿಷ್ಠಾವಂತ ಅಭಿಮಾನಿಗಳನ್ನು ಬೇಸರಗೊಳ್ಳುವಂತೆ ಮಾಡಿದೆ

PREV
16
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಪುಷ್ಪ-2 ನಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಟಾಪ್ ಟಾಲಿವುಡ್ ಸ್ಟಾರ್ ಮತ್ತು ಪ್ಯಾನ್-ಇಂಡಿಯಾ ಹೀರೋ. ಸಾಮಾನ್ಯ ಹೀರೋ ಆಗಿ ವೃತ್ತಿ ಆರಂಭಿಸಿದ  ಅವರು ತಮ್ಮದೇ ಆದ ಸ್ಥಾನವನ್ನು ಕೆತ್ತಿದರು. ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರು ಅಲ್ಲು ಅರ್ಜುನ್ ಅವರನ್ನು ಮಧ್ಯಮ ಯಶಸ್ವಿ ಚೊಚ್ಚಲ ಚಿತ್ರ ಗಂಗೋತ್ರಿಯ ಮೂಲಕ ಟಾಲಿವುಡ್‌ಗೆ ಪರಿಚಯಿಸಿದರು.

26

ಆದರೆ 'ಆರ್ಯ' ಸಿನಿಮಾ ಅಲ್ಲು ಅರ್ಜುನ್ ಅವರಿಗೆ ಇನ್ನಿಲ್ಲದ ಖ್ಯಾತಿ ನೀಡಿತ್ತು. ನಿರ್ದೇಶಕ ಸುಕುಮಾರ್ ಅವರು ಈ ಸಿನಿಮಾಗೆ ವಿಶಿಷ್ಟ ಪ್ರೇಮಕಥೆಯನ್ನು ರಚಿಸಿದರು ಮತ್ತು ಆ ಪಾತ್ರವು ಅರ್ಜುನ್‌ಗೆ ಸರಿಯಾಗಿ ಹೊಂದಿಕೆಯಾಯಿತು. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಮತ್ತು ಅರ್ಜುನ್ ಅವರ ನೃತ್ಯವು ಈ ಸಿನಿಮಾದಲ್ಲಿ ಮ್ಯಾಜಿಕ್ ಸೃಷ್ಟಿಸಿತು. ಡಾನ್ಸ್ ಅಲ್ಲು ಅವರ ಶಕ್ತಿಗಳಲ್ಲಿ ಒಂದಾಗಿದೆ, ಇದು ಅವರನ್ನು ಟಾಲಿವುಡ್‌ನ ಅತ್ಯುತ್ತಮ ಡಾನ್ಸರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

36

ಅಲ್ಲು ಅರ್ಜುನ್ ಒಂದೊಂದೇ ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದು, ಚಿತ್ರದಿಂದ ಚಿತ್ರಕ್ಕೆ ಅವರ ಸ್ಥಾನ ಭದ್ರವಾಗ್ತಾ ಹೋಯ್ತು. ಗಮನಾರ್ಹವಾಗಿ, ಅವರು ಬರೀ ತೆಲುಗು ರಾಜ್ಯಗಳು ಮಾತ್ರವಲ್ಲದೇ ನೇರೆಯ ಕರ್ನಾಟಕ ಕೇರಳಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಏಕೈಕ ತೆಲುಗು ನಟ. ಅವರ 'ಅಲ ವೈಕುಂಠಪುರಮುಲೋ' ಬ್ಲಾಕ್‌ಬಸ್ಟರ್ ಆಗಿದ್ದು,  ಬಾಹುಬಲಿ ಸಿನಿಮಾದ ಹಲವು ದಾಖಲೆಗಳನ್ನು ಮುರಿಯಿತು. ಅಲ್ಲದೇ ನಟನಿಗೆ ಭಾರತಾದ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿತು.

46

ಪುಷ್ಪ ಸಿನಿಮಾದ ಹಿಂದಿ ಆವೃತ್ತಿ ಹೆಚ್ಚಿನ ಪ್ರಚಾರವಿಲ್ಲದೆ ಬಿಡುಗಡೆಯಾಯಿತು, ಆದರೆ ₹100 ಕೋಟಿಗೂ ಹೆಚ್ಚು ಗಳಿಸಿತು. ಅವರು ಪುಷ್ಪಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನುಪಡೆದರು. ಪುಷ್ಪ 2 ಡಿಸೆಂಬರ್ 5 ರಂದು ಬಿಡುಗಡೆಯಾಗಲಿದ್ದು, ಅವರನ್ನು ₹1000 ಕೋಟಿ ಕ್ಲಬ್‌ಗೆ ತಳ್ಳುವ ಸಾಧ್ಯತೆಯಿದೆ.

56

ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಏಕೈಕ ಟಾಲಿವುಡ್ ನಟ ಎಂಬ ಸಾಧನೆ ಸೇರಿದಂತೆ ಅವರ ಸಾಧನೆಗಳ ಹೊರತಾಗಿಯೂ, ಅಲ್ಲು ಅರ್ಜುನ್ ಅವರು ಕೆಲವು ಆರೋಪಗಳಿಗೆ ಆಗಾಗ ಟ್ರೋಲ್ ಆಗಿದ್ದಾರೆ. ಅವರು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಟ್ರೋಲ್ ಎದುರಿಸುತ್ತಿದ್ದಾರೆ. ಪ್ರತಿಸ್ಪರ್ಧಿಗಳ ಅಭಿಮಾನಿಗಳು ಆಗಾಗ್ಗೆ ಇದರ ಬಗ್ಗೆ ಅವರನ್ನು ಅಣಕಿಸುತ್ತಾರೆ.

66

ಪ್ರಸಿದ್ಧ ಶಸ್ತ್ರಚಿಕಿತ್ಸಕ ಡಾ. ರಾಜಶೇಖರ್ ಅವರು, ಹಳೆಯ ಫೋಟೋಗಳ ಆಧಾರದ ಮೇಲೆ, ಅಲ್ಲು ಅರ್ಜುನ್ ತಮ್ಮ ಮೂಗು ಮತ್ತು ತುಟಿಗಳ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಹುದು ಎಂದು ಸೂಚಿಸಿದ್ದಾರೆ. ಡಾ. ರಾಜಶೇಖರ್ ಅವರ  ಈ ಮೌಲ್ಯಮಾಪನವನ್ನು ಅಲ್ಲು ಅರ್ಜುನ್ ಅವರ ವಿರೋಧಿಗಳು ವ್ಯಾಪಕವಾಗಿ ಪ್ರಸಾರ ಮಾಡಿದರು ಇದು ಸಾಕಷ್ಟು ಪ್ರಚಾರ ಪಡೆಯಿತು. ಆದರೆ ಇದು ನಿಜವಲ್ಲ, ಊಹಾಪೋಹಾ ಎಂದು ತಿಳಿದು ಬಂದಿದೆ.

Read more Photos on
click me!

Recommended Stories