ರವಿಚಂದ್ರನ್ ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಈ ಸಿನಿಮಾಗೆ ಹಾಕಿದ್ದರು. ಕ್ಲೈಮ್ಯಾಕ್ಸ್ಗಾಗಿ 50 ಎಕರೆ ಜಾಗವನ್ನೇ ಬಾಡಿಗೆಗೆ ಪಡೆದಿದ್ದರು. ವಿಎಫ್ಎಕ್ಸ್ಗಾಗಿ ದೊಡ್ಡ ಸೆಟ್ ಹಾಕಿಸಿದ್ದರು. ಆದ್ರೆ ಊಹಿಸದ ರೀತಿಯಲ್ಲಿ ಸಿನಿಮಾ ಸೋತು, ನಿರ್ದೇಶಕ ದೊಡ್ಡ ಸಂಕಷ್ಟಕ್ಕೆ ಸಿಲುಕಿದರು. ಬಳಿಕ ಬಿ ಗ್ರೇಡ್ ಸಿನಿಮಾಗಳ ರಿಮೇಕ್ ಮಾಡಿ ಪುನಃ ಚೇತರಿಸಿಕೊಂಡರು. ರಜನಿ, ನಾಗಾರ್ಜುನ ಮತ್ತು ರವಿಚಂದ್ರನ್ ಶಾಂತಿ ಕ್ರಾಂತಿಯಲ್ಲಿ ಅದ್ಭುತವಾಗಿ ನಟಿಸಿದ್ದರು.