ಸುಶಾಂತ್ ಅಭಿಮಾನಿಗಳ ಪರ ನಿಲ್ಲಬೇಕು; ಸಲ್ಮಾನ್ ಖಾನ್ ಮಾತನ್ನು ನಂಬುವರೇ ಜನರು!

First Published Jun 21, 2020, 4:57 PM IST

ಸಾಮಾಜಿಕ ಜಾಲತಾಣದಲ್ಲಿ ನಟ ಸಲ್ಮಾನ್‌ ಖಾನ್ ವಿರುದ್ಧ ಮಾತನಾಡುತ್ತಿರುವ ಅಭಿಮಾನಿಗಳಿಗೆ ನಟನ ಟ್ಟೀಟ್ ಶಾಕ್ ನೀಡಿದೆ. ಇಷ್ಟು ದಿನ ಸುಮ್ಮನಿದ್ದ ಸಲ್ಮಾನ್ ಇದೀಗ ಸುಶಾಂತ್ ಸಿಂಗ್ ಪರವಾಗಿ ನಿಲ್ಲಬೇಕೆಂದು ಹೇಳಲು ಕಾರಣವೇನು?

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿಗೆ ಕರಣ್‌ ಜೋಹಾರ್, ಅಲಿಯಾ ಹಾಗೂ ಸಲ್ಮಾನ್ ಖಾನ್ ಕಾರಣರು ಎಂದು ನೆಟ್ಟಿಗರು ಗಂಭೀರ ಆರೋಪ ಮಾಡಿದ್ದರು.
undefined
ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡುವುದಿಲ್ಲ ಅವರೊಬ್ಬ ಸ್ವಾರ್ಥಿ ತನಗೆ ಬೇಕಾದವರನ್ನು ಮಾತ್ರ ಅವರು ಬೆಳೆಸುತ್ತಾರೆ ಎಂದು ಸಲ್ಮಾನ್‌ ಖಾನ್‌ ವಿರುದ್ಧ ಆರೋಪ ಕೇಳಿ ಬಂದಿದೆ.
undefined
ಈ ಕಾರಣಕ್ಕೆ ಸುಶಾಂತ್ ಅಭಿಮಾನಿಗಳು ಸಲ್ಮಾನ್‌ ಖಾನ್ 'Being human' ಅಂಗಡಿ ಹಾಗೂ ಪೋಸ್ಟರ್‌ಗಳ ಮುಂದೆ ಪ್ರತಿಭಟನೆ ಮಾಡಿದ್ದಾರೆ.
undefined
ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಫಾಲೋವರ್ಸ್‌ ಕಡಿಮೆಯಾಗುತ್ತಿದ್ದಂತೆ ಕೂಡಲೇ ಎಚ್ಚೆತ್ತಿರುವ ಸಲ್ಮಾನ್ ಖಾನ್‌ ಟ್ಟೀಟ್‌ ಮಾಡಿದ್ದಾರೆ.
undefined
'ನಾನು ನನ್ನ ಅಭಿಮಾನಿಗಳನ್ನು ಬೇಡಿಕೊಳ್ಳುವೆ ಎಲ್ಲರೂ ಸುಶಾಂತ್ ಅಭಿಮಾನಿಗಳ ಪರ ನಿಲ್ಲಬೇಕು. ಅವರ ಭಾವನೆಗಳ ಭಾವನೆಗೆ ಬೆಲೆ ನೀಡಬೇಕು. ಸುಶಾಂತ್ ಕಳೆದುಕೊಂಡ ನೋವಿನಲ್ಲಿರುವ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಪರ ನಾವು ನೀವು ನಿಲ್ಲಬೇಕಿದೆ' ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.
undefined
'ಸುಶಾಂತ್ ಇಲ್ಲದ ನೋವು ತುಂಬಾ ದೊಡ್ಡದು' ಎಂದು ಬರೆದುಕೊಂಡಿದ್ದಾರೆ.
undefined
ಸುಶಾಂತ್ ಸಾವಿನ ನಂತರ #BoycottSalmanKhan, #BoycottStarKids ಹಾಗೂ #BoycottBollywood ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡ್ ಆಗುತ್ತಿದೆ.
undefined
ಸಲ್ಮಾನ್ ಖಾನ್ ಟ್ಟೀಟ್‌ ನಂತರ #JusticeForSushantSinghRajput ಟ್ರೆಂಡ್‌ ಆಗುತ್ತಿದೆ.
undefined
ನಿರ್ದೇಶಕ ಅಭಿನವ್ ಕಶ್ಯಪ್ ಸಲ್ಮಾನ್‌ ಖಾನ್ ಚಿತ್ರರಂಗದಲ್ಲಿ ಹೊಸಬರಿಗೆ ಮಾಡುವ ಅನ್ಯಾಯದ ಬಗ್ಗೆ ಹೇಳಿದ್ದರು.
undefined
ಹಾಗೂ ಚಾರಿಟಿ ಹೆಸರಿನಲ್ಲಿ ನಡೆಯುತ್ತಿರುವ 'Being Human' ಬ್ರ್ಯಾಂಡ್ ಜನರಿಗೆ ಹಗಲು ದರೋಡೆ ಮಾಡುತ್ತಿದೆ. 500ರೂ ಬಟ್ಟೆಗೆ 5000ರೂ ಬಿಲ್ ಹಾಕುತ್ತಾರೆ ಎಂದಿದ್ದಾರೆ.
undefined
click me!