ಆ ರಾತ್ರಿ ಬಟ್ಟೆ ಇಲ್ಲದೆಯೇ ಮಹೇಶ್ ಭಟ್ ಹಿಂದೆ ಓಡಿದ್ದರಂತೆ ಪರ್ವೀನ್ ಬಾಬಿ!

First Published Aug 22, 2020, 4:26 PM IST

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮತ್ತು ಪರ್ವೀನ್ ಬಾಬಿ ಸಂಬಂಧ ಬಿ-ಟೌನ್‌ನ ಅತ್ಯಂತ ವಿವಾದಾತ್ಮಕ ರಿಲೆಷನ್‌ಶಿಪ್‌ಗಳಲ್ಲೊಂದು. ದಿವಂಗತ ನಟಿ ಪರ್ವೀನ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಪರ್ವೀನ್ ಅನುಮಾಸ್ಪದವಾಗಿ ಮೃತಪಟ್ಟಾಗ ಮಹೇಶ್ ಭಟ್ ಅವರ ಅಂತ್ಯಕ್ರಿಯೆ ಮಾಡಲೂ ಸಿದ್ಧವಾಗಿದ್ದರಂತೆ. ಸುಶಾಂತ್ ಸಿಂಗ್ ರಜಪೂತ್‌ರ ಸಾವಿನ ತನಿಖೆಯಲ್ಲಿ ಮಹೇಶ್ ಭಟ್ ಹಾಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ನಡೆಸಿದ ವಾಟ್ಸ್ ಆ್ಯಪ್ ಚಾಟ್ ವೈರಲ್ ಆಗುತ್ತಿದ್ದಂತೆ, ಇವರ ಮೇಲೂ ಅನುಮಾನ ಹುಟ್ಟಿ ಕೊಂಡಿದೆ. ಆ ಕಾರಣಕ್ಕಾಗಿಯೇ ಪರ್ವೀನ್ ಬಾಬಿ ಹೆಸರು ಮತ್ತೊಮ್ಮೆ ಸುದ್ದಿಯಲ್ಲಿದೆ. ಕರಿಷ್ಮಾ ಉಪಾಧ್ಯಾಯ ಅವರ ಒಂದು ಬಯೋಗ್ರಾಫಿಯಲ್ಲಿ  ಮಹೇಶ್ ಭಟ್  ನಟಿಯೊಂದಿಗೆ ತಮ್ಮ ಸಂಬಂಧವನ್ನು ನೆನಪಿಸಿಕೊಂಡಿದ್ದನ್ನು ಉಲ್ಲೇಖಿಸಲಾಗಿದೆ. 

ಪರ್ವೀನ್ ಬಾಬಿ ತಮ್ಮ ವೃತ್ತಿಯ ಉತ್ತುಂಗದಲ್ಲಿರುವಾಗಲೇ ಮಹೇಶ್ ಭಟ್ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 1977ರಲ್ಲಿಯೇ ಈ ಇಬ್ಬರ ನಡುವೆ ಪ್ರೇಮ ಅಂಕುರಿಸಿತ್ತು. ಆಗಲೇ, ಮಹೇಶ್ ಮಗುವಿನ ತಂದೆಯೂ ಆಗಿದ್ದರು. ಕಬೀರ್ ಜೊತೆ ಇದ್ದ ಪರ್ವೀನ್ ಸಂಬಂಧ ಹಳಸಲು ಶುರವಾಗಿತ್ತು.
undefined
ಪರ್ವೀನ್ ಜೊತೆ ಮಹೇಶ್ ಲೀವ್ ಇನ್ ಸಂಬಂಧದಲ್ಲಿದ್ದರು. ಅವರಿಬ್ಬರ ನಡುವೆ ಪ್ರೀತಿ ಹೊರತು ಪಡಿಸಿ ಬೇರೆ ಯಾವುದಕ್ಕೂ ಸ್ಥಾನವೇ ಇಲ್ಲ ಎನ್ನುವಷ್ಟು ಇಬ್ಬರೂ ಹತ್ತಿರವಾಗಿದ್ದರು. ಮನೆಯಲ್ಲಿರುವಾಗ ಒಬ್ಬ ಸಾಧಾರಣ ಹುಡುಗಿಯಂತಿರುತ್ತಿದ್ದ ಪರ್ವೀನ್, ಮಹೇಶ್ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದರು.
undefined
ಹೀಗಿರುವಾಗಲೇ ಪರ್ವೀನ್ ಮೇಲೆ ಸಿಟ್ಟಾದ ಮಹೇಶ್ ಮನೆಯಿಂದ ಒಮ್ಮೆ ಹೊರ ನಡೆದಿದ್ದರಂತೆ. ಅದೆಷ್ಟು ಮಹೇಶ್ ಮೇಲೆ ಹುಚ್ಚು ಪ್ರೇಮ ಇತ್ತು ಪರ್ವೀನ್‌ಗೆ ಅಂದರೆ, ಮೈಮೇಲೆ ಬಟ್ಟೆ ಇಲ್ಲ ಎಂಬ ಜ್ಞಾನವೂ ಇಲ್ಲದೇ ಮಹೇಶ್ ಹಿಂದೆ ಓಡಿದ್ದರಂತೆ.
undefined
ಆ ರಾತ್ರಿ ಸಂಬಂಧ ಮುಂದುವರಿಸುವ ಬಗ್ಗೆ ಈ ಇಬ್ಬರಲ್ಲಿ ಮಾತಾಗಿತ್ತಂತೆ. ಮಹೇಶ್ ಒಂದೂ ಮಾತನಾಡದೇ ಹೋದರೂ, ಅವರ ಮನಸ್ಸಿನಲ್ಲಿ ಏನಿದೆ ಎಂಬುವುದನ್ನು ಪರ್ವೀನ್ ಅರ್ಥ ಮಾಡಿಕೊಂಡಿದ್ದರಂತೆ. ಬಟ್ಟೆ ತೊಟ್ಟ ಮಹೇಶ್ ರೂಮಿನಿಂದ ಹೊರ ನಡೆದರಂತೆ. ಆಗ ಪರ್ವೀನ್ ಕಣ್ಣಲ್ಲಿ ನೀರು ತುಂಬಿತ್ತೆಂದು, ಖುದ್ದು ಮಹೇಶ್ ಭಟ್ ಸಂದರ್ಶನವೊಂದರಲ್ಲಿ ಹೇಳಿದ್ದರು.
undefined
ಲಿಫ್ಟ್‌ಗೂ ಕಾಯದೇ ಮೆಟ್ಟಿಲಲ್ಲೇ ನಾನು ಇಳಿದು ಹೋಗುತ್ತಿದ್ದೆ. ನನ್ನನ್ನು ಪರ್ವೀನ್ ಹಿಂಬಾಲಿಸಿದ್ದು ಗಮನಕ್ಕೆ ಬಂದಿತ್ತು. ಬಟ್ಟೆ ಇಲ್ಲದೇ, ಈ ಸ್ಥಿತಿಯಲ್ಲಿ ಹೊರ ಬರಬೇಡವೆಂದು ಹೇಳಬೇಕೆಂದೆನಿಸಿದರೂ, ಹೇಳದೇ ಮುಂದೆ ನಡೆದೆ. ಈ ಘಟನೆಯಾದ ಕೆಲವು ದಿನಗಳಲ್ಲಿ ಅಂದರೆ 1980ರಲ್ಲಿಯೂ ಈ ಜೋಡಿ ಸಂಬಂಧ ಮುರಿದು ಬಿತ್ತು.
undefined
ಆಗಲೇ ಪರ್ವೀನ್ ಖಿನ್ನತೆಗೆ ಜಾರಿದ್ದರು. ಆಗ ಮಹೇಶ್‌ಗೆ ಗೈಡ್‌ನಂತಿದ್ದ ಯು.ಜಿ.ಕೃಷ್ಣಮೂರ್ತಿ ಈ ಜೋಡಿಗೆ ಬಹಳ ರೀತಿಯಲ್ಲಿ ಸಹಕರಿಸಿದ್ದರಂತೆ.
undefined
ಪರ್ವೀನ್ ಅವರನ್ನು ಸರಿ ಮಾಡಲು ಕೃಷ್ಣಮೂರ್ತಿ ಖುದ್ದು ನಟಿಯನ್ನು ಸ್ವಿಡ್ಜರ್ಲೆಂಡ್‌ಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲದೇ ಅವರು ಸ್ವಲ್ಪ ಸರಿ ಹೋಗಿದ್ದಾರೆಂದು ಎನಿಸಿದ ಕೂಡಲೇ ಪತ್ರ ಬರೆದು, ಪರ್ವೀನ್ ಅವರನ್ನು ಮಹೇಶ್ ಸುಪರ್ದಿಯಲ್ಲಿ ಬಿಡಲು ಸಿದ್ಧವಿರುವುದಾಗಿಯೂ ಹೇಳಿದ್ದರಂತೆ.
undefined
ಆರಂಭದಿಂದಲೂ ಮಹೇಶ್ ಭಟ್ ಜೊತೆ ವಿವಾದಗಳೇ ಸುತ್ತಿ ಹಾಕಿ ಕೊಂಡಿವೆ. 1970ರಲ್ಲಿ ಕಿರಣ್ ಭಟ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಮಹೇಶ್‌ಗೆ ಇಬ್ಬರು ಮಕ್ಕಳಿದ್ದಾರೆ. ಪರ್ವೀನ್ ಜೊತೆ ಸಂಬಂಧದಿಂದಲೇ ಕಿರಣ್, ಮಹೇಶ್‌ರಿಂದ ದೂರವಾದರು. ಆದರೆ, ಪರ್ವೀನ್‌ಗೆ ಮಾನಸಿಕ ರೋಗವಿತ್ತು ಎನ್ನುವ ಕಾರಣದಿಂದಲೇ ಅವರನ್ನೂ ಈ ಭಟ್ ವರಿಸಲು ಮುಂದಾಗಲಿಲ್ಲವಂತೆ.
undefined
ಆ ನಂತರ ನಟಿ ಸೋನಿ ರಾಜದಾನ್ ಅವರನ್ನು ವರಿಸಿದ ಭಟ್‌ಗೆ ಆಲಿಯಾ ಹಾಗೂ ಶಾಹೀನ್ ಎಂಬಿಬ್ಬರು ಮಕ್ಕಳಿದ್ದಾರೆ.
undefined
ಕೆಲವು ವರ್ಷಗಳ ಹಿಂದೆ ಮ್ಯಾಗಜೀನ್‌ಗೆ ಸ್ವಂತ ಮಗಳು ಪೂಜಾ ಭಟ್‌ಗೆ ಲಿಪ್ ಲಾಕ್ ಮಾಡಿದ ಫೋಸ್ ನೀಡಿಯೂ ಮಹೇಶ್ ಭಟ್ ಸುದ್ದಿಯಾಗಿದ್ದರು. ಒಟ್ಟಿನಲ್ಲಿ ಯಾರಿಗೆ ಮಾನಸಿಕ ಅಸ್ವಸ್ಥತೆ ಎಂಬುವುದು ಅರ್ಥವಾಗುವುದಿಲ್ಲ.
undefined
click me!