Kangana Ranaut: ಪದ್ಮಶ್ರೀ ವಾಪಸ್ ಕೊಡ್ತೀನಿ ಎಂದ ನಟಿ

Published : Nov 14, 2021, 11:12 AM ISTUpdated : Nov 14, 2021, 11:40 AM IST

Kangana Ranaut: ಪದ್ಮಶ್ರೀ ವಾಪಸ್ ಕೊಡ್ತೀನಿ ಎಂದ ಕ್ವೀನ್ ನಟಿ ಆದ್ರೆ ಒಂದು ಕಂಡೀಷನ್ ಇದೆ, ಏನದು ನಟಿಯ ಹೊಸ ವರಸೆ ?

PREV
110
Kangana Ranaut: ಪದ್ಮಶ್ರೀ ವಾಪಸ್ ಕೊಡ್ತೀನಿ ಎಂದ ನಟಿ

ಕಂಗನಾ ರಣಾವತ್(Kangana Ranaut) ಸ್ವಾತಂತ್ರ್ಯ ಕುರಿತ ಹೇಳಿಕೆಗಾಗಿ ಭಾರೀ ಟೀಕೆ ಎದುರಿಸಿದ ಬೆನ್ನಲ್ಲೇ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಪ್ರಶಸ್ತಿ ಹಿಂದಿರುಗಿಸಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದಾರೆ.

210

1947 ರಲ್ಲಿ ನಡೆದ ಘಟನೆಯ ಬಗ್ಗೆ ಯಾರಾದರೂ ತನಗೆ ತಿಳಿಹೇಳಿದರೆ ಪದ್ಮಶ್ರೀಯನ್ನು(Padma Shri) ಹಿಂದಿರುಗಿಸಲು ಸಿದ್ಧ ಎಂದು ನಟಿ ಕಂಗನಾ ರಣಾವತ್ ಅವರು ಹೇಳಿದ್ದಾರೆ. ಈಗಾಗಲೇ ನಟಿಯ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದ್ದು ಜನ ನಟಿಯ ಮನೆಯ ಮುಂದೆ ಜಮಾಯಿಸಿದ್ದರು.

310

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತವು 2014 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು ಎಂದು ಕಂಗನಾ ಹೇಳಿದ್ದರು. 1947 ರಲ್ಲಿ ದೇಶದ ಸ್ವಾತಂತ್ರ್ಯವಲ್ಲ ಭಿಕ್ಷೆ ಪಡೆದಿತ್ತು ಎಂದು ಹೇಳಿದ್ದರು.

410

1857 ರ ಸ್ವಾತಂತ್ರ್ಯಕ್ಕಾಗಿ ಮೊದಲ ಸಾಮೂಹಿಕ ಹೋರಾಟದ ಅದೇ ಸಂದರ್ಶನದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಜಿ ಅವರಂತಹ ಶ್ರೇಷ್ಠರ ತ್ಯಾಗ ಎಂದಿದ್ದಾರೆ.

510

1857 ನನಗೆ ಗೊತ್ತು. ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ, ಯಾರಾದರೂ ನನ್ನ ಅರಿವಿಗೆ ತರಲು ಸಾಧ್ಯವಾದರೆ ನಾನು ನನ್ನ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಇದಕ್ಕೆ ನನಗೆ ಸಹಾಯ ಮಾಡಿ ಎಂದಿದ್ದಾರೆ ನಟಿ

610

ನಾನು ರಾಣಿ ಲಕ್ಷ್ಮಿ ಬಾಯಿಯವರ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. 1857 ರ ಸ್ವಾತಂತ್ರ್ಯದ ಮೊದಲ ಹೋರಾಟದ ಬಗ್ಗೆ ವ್ಯಾಪಕವಾಗಿ ಸಂಶೋಧನೆ ಮಾಡಿದ್ದೇನೆ. ರಾಷ್ಟ್ರೀಯತೆಯು ಬಲಪಂಥೀಯವಾಗಿ ಏರಿತು. ಆದರೆ ಅದು ಏಕೆ ಹಠಾತ್ ಕೊನೆಯಾಯಿತು ಎಂದು ಪ್ರಶ್ನಿಸಿದ್ದಾರೆ.

710

ಏಕೆ ಗಾಂಧಿಯವರು ಭಗತ್ ಸಿಂಗ್ ಅವರನ್ನು ಸಾಯಲು ಬಿಟ್ಟರು ? ಏಕೆ ನೇತಾ ಬೋಸ್ ಕೊಲ್ಲಲ್ಪಟ್ಟರು ? ಅವರೇಕೆ ಗಾಂಧಿಯವರ ಬೆಂಬಲವನ್ನು ಪಡೆಯಲಿಲ್ಲ? ಬಿಳಿಯ ವ್ಯಕ್ತಿ ಏಕೆ ವಿಭಜನೆಯ ಗೆರೆಯನ್ನು ಎಳೆದಿದ್ದಾರೆ ? ಎಂದು ಪ್ರಶ್ನೆ ಮಾಡಿದ್ದಾರೆ.

810

ಇದರ ಪರಿಣಾಮ ಎದುರಿಸಲು ಸಿದ್ಧ ಎಂದು ಕಂಗನಾ ರಣಾವತ್ ಹೇಳಿದ್ದಾರೆ. 2014 ರಲ್ಲಿ ಆಜಾದಿಗೆ ಸಂಬಂಧಿಸಿದಂತೆ ನಾನು ನಿರ್ದಿಷ್ಟವಾಗಿ ಹೇಳಿದ್ದೇನೆಂದರೆ ಭೌತಿಕ ಆಜಾದಿ ನಮ್ಮಲ್ಲಿರಬಹುದು. ಆದರೆ 2014 ರಲ್ಲಿ ಭಾರತದ ಪ್ರಜ್ಞೆ ಮತ್ತು ಆತ್ಮಸಾಕ್ಷಿಯನ್ನು ಮುಕ್ತಗೊಳಿಸಲಾಯಿತು ಎಂದಿದ್ದಾರೆ.

910

ಸತ್ತ ನಾಗರಿಕತೆಯು ಜೀವಂತವಾಯಿತು. ಅದರ ರೆಕ್ಕೆಗಳನ್ನು ಬೀಸಿತು. ಈಗ ಘರ್ಜಿಸುತ್ತಿದೆ. ಎತ್ತರಕ್ಕೆ ಏರುತ್ತಿದೆ. ತಪ್ಪಿತಸ್ಥ ಮನಸ್ಸಾಕ್ಷಿ ಇರುವವರು ಸುಟ್ಟಗಾಯವನ್ನು ಅನುಭವಿಸುತ್ತಾರೆ. ಅದರ ಬಗ್ಗೆ ಏನೂ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆಯಲ್ಲೂ ಮೊನಚಾದ ಒಂದು ಟಾಂಗ್ ಕೊಟ್ಟಿದ್ದಾರೆ.

1010

ಆಮ್ ಆದ್ಮಿ ಪಕ್ಷವು ಮುಂಬೈ ಪೊಲೀಸರಿಗೆ ದೇಶದ್ರೋಹಿ ಮತ್ತು ಪ್ರಚೋದನಕಾರಿ ಕಾಮೆಂಟ್‌ಗಳಿಗಾಗಿ ಪ್ರಕರಣವನ್ನು  ದಾಖಲಿಸಲು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಸ್ಪೆಕ್ಟ್ರಮ್‌ನಾದ್ಯಂತದ ರಾಜಕಾರಣಿಗಳು ಅವರ ಕಾಮೆಂಟ್‌ಗಳಿಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.

Read more Photos on
click me!

Recommended Stories