ಸಂಜೆ 6 ಗಂಟೆಗೆ ಸಿನಿಮಾ ರಿಲೀಸ್:
ಇದಕ್ಕಾಗಿ ವಕೀಲ ಆದಿತ್ಯ ಗುಪ್ತಾ ಅವರನ್ನು ಆಯುಕ್ತರನ್ನಾಗಿ ದೆಹಲಿ ಹೈಕೋರ್ಟ್ ನೇಮಿಸಿತು. ಈ ಬಗ್ಗೆ ಎರಡೂ ಕಡೆಯವರೂ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಮಾತುಕತೆ ನಡೆಸುತ್ತಿದ್ದು, ಇಂದು ಸಂಜೆ 3 ಗಂಟೆಯೊಳಗೆ ಎರಡೂ ಕಡೆಯವರೂ ಒಪ್ಪಂದಕ್ಕೆ ಬಂದರೆ, ಈ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಹೇಳಲಾಗಿತ್ತು. ಸದ್ಯಕ್ಕೆ ಎರಡೂ ಕಡೆಯವರೂ ಒಪ್ಪಂದಕ್ಕೆ ಬಂದಿರುವುದಾಗಿ 3 ಗಂಟೆಗೆ, ನ್ಯಾಯಾಧೀಶರಿಗೆ ತಿಳಿಸಿದ ನಂತರ, 4 ವಾರಗಳ ಕಾಲ ಚಿತ್ರ ಬಿಡುಗಡೆಗೆ ಹಾಕಿದ್ದ ತಡೆಯನ್ನು ದೆಹಲಿ ಹೈಕೋರ್ಟ್ ತೆರವುಗೊಳಿಸಿದೆ. ತಡೆ ನಿವಾರಣೆಯಾದ್ದರಿಂದ ಇಂದು ಸಂಜೆ 6 ಗಂಟೆಗೆ ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ.