Amruthadhaare ಭೂಮಿಕಾ ಧರಿಸಿದ ಕಾಲ್ಗೆಜ್ಜೆಗೀಗ ಭಾರಿ ಡಿಮಾಂಡ್​: ಪತಿ ತೊಡಿಸಿದರೆ ಆಗುವುದೇನು?

Published : May 07, 2026, 05:38 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಪ್ರೀತಿಯಿಂದ ಭೂಮಿಕಾಳ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ. ಈ ಘಟನೆಯು ಕೇವಲ ಪ್ರೀತಿಯ ಸಂಕೇತವಲ್ಲ, ಬದಲಾಗಿ ಪತಿ ಪತ್ನಿಯ ಕಾಲಿಗೆ ಗೆಜ್ಜೆ ತೊಡಿಸುವುದರ ಹಿಂದೆ ಆಳವಾದ ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯದ ಮಹತ್ವವಿದೆ ಎಂದು ವಿವರಿಸಲಾಗಿದೆ.

PREV
16
ಅಮೃತಧಾರೆ ಎಂದರೆ...

ಅಮೃತಧಾರೆ ಸೀರಿಯಲ್​ (Amruthadhaare Serial) ಅಂದ್ರೆನೇ ಅದೊಂದು ರೀತಿಯಲ್ಲಿ ದಾಂಪತ್ಯದ ರಸದೌತಣವನ್ನು ಉಣಬಡಿಸುವ ಧಾರಾವಾಣಿ ಎಂದುಕೊಳ್ಳುವುದು ಇದೆ. ಇದಾಗಲೇ ಈ ಸೀರಿಯಲ್​ ಸಂಪೂರ್ಣವಾಗಿ ಮುಗಿಯುವ ಹಂತಕ್ಕೆ ಬಂದಿದ್ದರೂ, ಇನ್ನೊಂದೇನೋ ಎಳೆ ತಂದು ಸೀರಿಯಲ್​ ಎಳೆಯುತ್ತಿರುವುದಕ್ಕೂ ಇದೇ ಕಾರಣ, ಇದು ಸೀರಿಯಲ್​ ವೀಕ್ಷಕರ ಪ್ರೀತಿ, ಟಿಆರ್​ಪಿಯ ಏರಿಕೆ. ಇದೀಗ ಸೀರಿಯಲ್​ನಲ್ಲಿ ಗೌತಮ್​ಗೆ ಮಗಳಿಂದಲೇ ಆಪತ್ತು ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರಿಂದಾಗಿ, ಅದು ಯಾವ ಮಗಳು, ಮಿಸ್ಸಿಂಗ್​ ಆಗಿರೋ ಮಗಳೇ, ಇನ್ನೊಂದು ಮಗು ಹುಟ್ಟುತ್ತಾ... ಹೀಗೆ ಹಲವಾರು ರೀತಿಯಲ್ಲಿ ಸಸ್ಪೆನ್ಸ್ ಇಟ್ಟಿದ್ದಾರೆ ನಿರ್ದೇಶಕರು. ಆದ್ದರಿಂದ ಈ ಸೀರಿಯಲ್​ ಇನ್ನೊಂದು ವರ್ಷ ಎಳೆಯುವುದಂತೂ ಖಂಡಿತ.

26
ಪೂಜೆಗೆ ಸಿದ್ಧತೆ

ಅದರ ನಡುವೆಯೇ, ಗೌತಮ್​ ತನ್ನ ಮೂಲ ಮನೆಯನ್ನು ಮತ್ತೆ ವಾಪಸ್​ ಪಡೆದಿದ್ದು, ಅದಕ್ಕೆ ಹೋಗಲು ಕುಟುಂಬ ಸಜ್ಜಾಗುತ್ತಿದೆ. ಮನೆಯಲ್ಲಿ ಪೂಜೆಗೆಂದು ಗೌತಮ್​ ಭೂಮಿಕಾಗೆ ಹೊಸ ಸೀರೆ ಕೊಡಿಸಿದ್ದರೆ, ಭೂಮಿಕಾ ಕೂಡ ಪತಿಗೆ ಹೊಸ ಡ್ರೆಸ್​​ ಕೊಡಿಸಿದ್ದಾಳೆ. ಆದರೆ ಇಲ್ಲಿ ಗಮನ ಸೆಳೆದಿದ್ದು ಭೂಮಿಕಾಗೆ ಗೌತಮ್​ ತೊಡಿಸಿದ ಗೆಜ್ಜೆ.

36
ಗಮನ ಸೆಳೆದ ಗೆಜ್ಜೆ

ಈ ಗೆಜ್ಜೆಗೆ ಈಗ ಭಾರಿ ಡಿಮಾಂಡ್​ ಬಂದಿದೆ. ಅದಕ್ಕೆ ಕಾರಣ, ಗೌತಮ್​ ಪ್ರೀತಿಯಿಂದ ಭೂಮಿಕಾಗೆ ಅದನ್ನು ತೊಡಿಸಿದ್ದಾನೆ. ಇದನ್ನು ನೋಡಿ ವೀಕ್ಷಕರು ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಬೇರೆ ಬೇರೆ ಸಂಪ್ರದಾಯದವರು ಗೆಜ್ಜೆಯನ್ನು ಧರಿಸುವುದು ಮಾಮೂಲಾಗಿದ್ದರೂ, ಹಿಂದೂ ಸಂಪ್ರದಾಯಕ್ಕೂ, ಗೆಜ್ಜೆಗೂ ತುಂಬಾ ಹತ್ತಿರ ನಂಟಿದೆ. ಅದರಲ್ಲಿಯೂ ಪತಿಯಾದವನು ಪತ್ನಿಯ ಕಾಲಿಗೆ ಖುದ್ದು ತೊಡಿಸಿದರೆ, ಅದಕ್ಕೂ ಒಂದು ಅರ್ಥವಿದೆ. ಅದೇ ಅರ್ಥದಲ್ಲಿಯೂ ಈ ಸೀರಿಯಲ್​ನಲ್ಲಿ ಗೌತಮ್, ಪತ್ನಿ​ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ.

46
ಪತಿ ತೊಡಿಸಿದರೆ ಏನಾಗುತ್ತೆ?

ಅನೇಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ, ಗಂಡನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡುವ ಗೆಜ್ಜೆ, ಗಮನಾರ್ಹವಾದ ಭಾವನಾತ್ಮಕ, ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯ ಅರ್ಥವನ್ನು ಹೊಂದಿದೆ. ಇದನ್ನು ಹೆಚ್ಚಾಗಿ ವಿವಾಹಿತ ಮಹಿಳೆಯ 16 ಅಲಂಕಾರಗಳ (ಶೃಂಗಾರ) ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರೀತಿ, ರಕ್ಷಣೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.

56
ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಮಹತ್ವ

ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಮಹತ್ವವೂ ಈ ರೀತಿ ಗೆಜ್ಜೆ ತೊಡಿಸುವುದಕ್ಕೆ ಇದೆ. ಬೆಳ್ಳಿಯ ಕಾಲ್ಗೆಜ್ಜೆಗಳು ಜ್ಯೋತಿಷ್ಯದಲ್ಲಿ ಚಂದ್ರನೊಂದಿಗೆ ಸಂಬಂಧ ಹೊಂದಿವೆ. ಅವುಗಳನ್ನು ಧರಿಸುವುದರಿಂದ ಭಾವನೆಗಳನ್ನು ಶಾಂತಗೊಳಿಸಬಹುದು, ಮಾನಸಿಕ ಸ್ಥಿರತೆಯನ್ನು ಸುಧಾರಿಸಬಹುದು ಮತ್ತು ವೈವಾಹಿಕ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಬಹುದು, ವಿಶೇಷವಾಗಿ ಹೆಂಡತಿಯ ಜಾತಕದಲ್ಲಿ ಚಂದ್ರ ದುರ್ಬಲವಾಗಿದ್ದರೆ, ಗಂಡನಾದವ ಹೀಗೆ ತೊಡಿಸಿದರೆ ಆ ದೋಷ ಹೋಗುತ್ತದೆ ಎನ್ನಲಾಗಿದೆ.

66
ನಕಾರಾತ್ಮಕತೆಯ ವಿರುದ್ಧ ರಕ್ಷಣೆ

ಕಾಲ್ಗೆಜ್ಜೆಗಳ ಶಬ್ದವು ದುಷ್ಟಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಇದು ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಂಡತಿಗೆ ಉಡುಗೊರೆಯಾಗಿ ನೀಡುವುದು ಪ್ರೀತಿಯ ಸಂಕೇತವಾಗಿದೆ, ಅವಳನ್ನು ಗೌರವಿಸುತ್ತದೆ ಮತ್ತು ಜೀವಮಾನದ ಬದ್ಧತೆಯನ್ನು ದೃಢೀಕರಿಸುತ್ತದೆ. ಜ್ಯೋತಿಷ್ಯವನ್ನು ಮೀರಿ, ಬೆಳ್ಳಿಯ ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ ಮತ್ತು ಕಾಲುಗಳಲ್ಲಿ ನೋವು ಅಥವಾ ಮರಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

Read more Photos on
click me!

Recommended Stories