ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..!

Suvarna News   | Asianet News
Published : Sep 17, 2020, 07:14 PM IST
ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..!

ಸಾರಾಂಶ

15 ದಿನ ಐಸಿಯುವಿನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದ ಹಿರಿಯರೊಬ್ಬರು ಗುಣಮುಖರಾಗಿದ್ದಾರೆ. ಅವರು ಗುಣಮುಖರಾದಾಗ ಚಿಕಿತ್ಸೆ ನೀಡಿದ ವೈದ್ಯರಿಗೆ ಥ್ಯಾಂಕ್ಸ್ ಹೇಳಲು ಬಯಸಿದ್ದರು. ಅವರು ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದು ಹೇಗೆ ಗೊತ್ತಾ..? ಇಲ್ಲಿ ಓದಿ

ಭಾರತದ ಆಹಾರ ಸಂಸ್ಕೃತಿಯಲ್ಲಿ ಅಕ್ಕಿ ಪ್ರಧಾನ ಆಹಾರ. ಸಾಂಬಾರು, ಪಲ್ಯ, ತರಕಾರಿ, ಸೊಪ್ಪಿನ ಜೊತೆ ನಾವು ಅನ್ನ ಉಣ್ಣುತ್ತೇವೆ. ಇಡ್ಲಿ, ದೋಸೆ ಹಿಟ್ಟು ಮಾಡೋಕು ಅಕ್ಕಿ ಬೇಕು. ಗಂಜಿ ನೀರಿನಲ್ಲಿಯೂ ಸಿಕ್ಕಾಪಟ್ಟೆ ಪೌಸ್ಟಿಕಾಂಶವಿರುತ್ತದೆ. ಹಿಂದಿನ ಕಾಲದಲ್ಲಿ ಅಕ್ಕಿ ತೊಳೆದ ನೀರನ್ನೂ ಹಲವು ರೆಸಿಪಿಗಳಲ್ಲಿ ಬಳಸುತ್ತಿದ್ದರು.

ಇದು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿ. ಇತ್ತೀಚೆಗೆ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ತಮಗೆ ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಮನೆಯಲ್ಲೇ ಬೆಳೆದ ಅಕ್ಕಿ ಕೊಟ್ಟಿದ್ದಾರೆ.

ಮುಂಬೈ ಮಿರ್ಚಿ ಅಲ್ಲ, ಇದು ಗುಜರಾತ್‌ನ ಐಸ್‌ಕ್ರೀಂ ವಡಪಾವ್..!

15 ದಿನ ಐಸಿಯುವಿನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದ ಹಿರಿಯರೊಬ್ಬರು ಗುಣಮುಖರಾಗಿದ್ದಾರೆ. ಅವರು ಗುಣಮುಖರಾದಾಗ ಚಿಕಿತ್ಸೆ ನೀಡಿದ ವೈದ್ಯರಿಗೆ ಥ್ಯಾಂಕ್ಸ್ ಹೇಳಲು ಬಯಸಿದ್ದರು. ಅವರ ಗದ್ದೆಯಲ್ಲಿ ಅವರೇ ಬೆಳೆದ ಅಕ್ಕಿಯನ್ನು ನಮಗೆ ಕೊಟ್ಟಿದ್ದಾರೆ ಎಂದು ವೈದ್ಯೆ ಡಾ. ಊರ್ವಿ ಶುಕ್ಲಾ ಟ್ವೀಟ್ ಮಾಡಿದ್ದಾರೆ.

12 ದಿನ ವೆಂಟಿಲೇಟರ್‌ನಲ್ಲಿದ್ದ ವೃದ್ಧ ತಮ್ಮನ್ನು ಪ್ರೀತಿಯಿಂದ ನೋಡಿಕೊಂಡ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇದೀಗ ಹಿರಿಯ ವ್ಯಕ್ತಿಯ ಕೃತಜ್ಞತೆಯ ಕಥೆ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ವೈದ್ಯೆಯ ಟ್ವೀಟ್‌ಗೆ 3.3 ಸಾವಿರ ಲೈಕ್ಸ್ ಬಂದಿದೆ. ಬಹಳಷ್ಟು ಜನರು ವೈದ್ಯರನ್ನೂ, ಅಕ್ಕಿ ಕೊಟ್ಟ ವೃದ್ಧ ವ್ಯಕ್ತಿಗೂ ವಂದನೆ ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಬಾರಿ ಬೇಯಿಸಿದರೂ ಬೇಯದ ತಲೆಮಾಂಸ: ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದವನಿಗೆ ನ್ಯಾಯ ನೀಡಿದ ಪೊಲೀಸರು
ನೀವು ಪನೀರ್ ಪ್ರಿಯರೇ? ಹಾಗಿದ್ದರೆ ಈ ಸೈಡ್ ಎಫೆಕ್ಟ್ ಬಗ್ಗೆ ಮೊದಲು ತಿಳ್ಕೊಳ್ಳಿ