ಕೇರಳದ ಸ್ಪೆಷಲ್ ಹಬ್ಬದೂಟ 'ಓಣಂ ಸದ್ಯ'; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ ?

Published : Sep 06, 2022, 04:48 PM IST
ಕೇರಳದ ಸ್ಪೆಷಲ್ ಹಬ್ಬದೂಟ 'ಓಣಂ ಸದ್ಯ'; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ ?

ಸಾರಾಂಶ

ದೇವರನಾಡಿನ ವಿಶಿಷ್ಟ ಹಬ್ಬ ಓಣಂ. ಈ ಹಬ್ಬದ ವಿಶೇಷತೆಯೆಂದರೆ ಓಣಂ ಸದ್ಯ. ಬರೋಬ್ಬರಿ 26 ಬಗೆಯ ಭಕ್ಷ್ಯಗಳನ್ನು ಓಣಂ ಹಬ್ಬಕ್ಕಾಗಿ ತಯಾರಿಸುತ್ತಾರೆ. ನಾವು ಕೇರಳಿಗರಲ್ಲ. ಹಬ್ಬದೂಟ ಸವಿಯೋಕಾಗಲ್ಲ ಅಂತ ನೀವು ವರಿ ಮಾಡ್ಕೋಬೇಕಾಗಿಲ್ಲ. ಬೆಂಗಳೂರಿನಲ್ಲಿ ರುಚಿಕರವಾದ ಓಣಂ ಸದ್ಯ ಉಣಬಡಿಸುವ ಹೊಟೇಲ್‌ಗಳ ಮಾಹಿತಿ ಇಲ್ಲಿದೆ. 

ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಓಣಂ ಎಂದರೆ ಹೂವಿನಲ್ಲೇ ಹಾಕುವ ರಂಗೋಲಿ ಪೂಕಳಂ, ಹಬ್ಬದ ವಿಶೇಷ ಊಟ ಓಣಂ ಸದ್ಯ ಹೆಚ್ಚು ಪ್ರಸಿದ್ಧಿಯಾಗಿದೆ. ಓಣಂ ಸದ್ಯದಲ್ಲಿ  26 ವಿಭಿನ್ನ ರುಚಿಕರವಾದ ಮೇಲೋಗರಗಳು, ಕರಿದ ತರಕಾರಿಗಳು, ಸಿಹಿ ಭಕ್ಷ್ಯಗಳು ಮತ್ತು ಇತರ ಆಹಾರಗಳು ಸೇರಿವೆ. ಊಟವನ್ನು ಬಾಳೆ ಎಲೆಯಲ್ಲಿ ಬಡಿಸಿ ಕೈಯಿಂದ ತಿನ್ನುತ್ತಾರೆ. ಆದ್ರೆ ನಾವು ಕೇರಳಿಗರಲ್ಲ. ಹಬ್ಬದೂಟ ಸವಿಯೋಕಾಗಲ್ಲ ಅಂತ ನೀವು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಬೆಂಗಳೂರಿನ ಹೊಟೇಲ್‌ಗಳಲ್ಲೂ ಭರ್ಜರಿ ಓಣಂ ಸದ್ಯ ಲಭ್ಯವಿದೆ. ಎಲ್ಲೆಲ್ಲಿ ? ಯಾವತ್ತು ಅನ್ನೋ ಮಾಹಿತಿ ತಿಳ್ಕೊಳ್ಳಿ.

1. ದಿ ಕ್ರೀಕ್, ದಿ ಡೆನ್ ಬೆಂಗಳೂರು
ದಿ ಡೆನ್ ಬೆಂಗಳೂರು ತನ್ನ ಗ್ರಾಹಕರಿಗೆ (Customers) ಸರ್ವೋತ್ಕೃಷ್ಟ ಓಣಂ ಅನುಭವವನ್ನು ನೀಡಲು ಸಿದ್ಧವಾಗಿದೆ. ಸೆಪ್ಟೆಂಬರ್ 8ರಂದು ಹೊಟೇಲ್‌ನಲ್ಲಿ ವಿಶೇಷ ಓಣಂ ಸದ್ಯವನ್ನು ಆಯೋಜಿಸಲಾಗಿದೆ. ಊಟದ ಮೆನುವಿನಲ್ಲಿ ಅವಿಯಲ್, ಥೋರನ್, ಕುಂಬಳಕಾಯಿ ಎರಿಸ್ಸೆರಿ, ವಜಕ್ಕ ಪುಳಿಸ್ಸೆರಿ, ಕಡಲ ಕೂಟು ಕರಿ, ಸೇಮಿಯಾ ಪಾಯಸಂ ಮತ್ತು ಹೆಚ್ಚಿನವುಗಳು ಒಳಗೊಂಡಿದೆ. ಹೊಟೇಲ್‌ಗೆ ಬರಲು ಸಾಧ್ಯವಾಗದಿದ್ದವರಿಗೆ ಓಣಂ ಸದ್ಯದೂಟವನ್ನು ಮನೆಗೆ ತಲುಪಿಸಲಾಗುತ್ತದೆ. 

Onam Festival: ದೇವರನಾಡಿನಲ್ಲಿ ಆಚರಿಸುವ ಓಣಂ ಹಬ್ಬದ ವಿಶೇಷತೆಯೇನು?

2. ಕಪ್ಪಾ ಚಕ್ಕ ಕಂಧಾರಿ
ಪ್ರಶಸ್ತಿ ವಿಜೇತ ಕೇರಳ ವಿಶೇಷ ರೆಸ್ಟೋರೆಂಟ್ ಕಪ್ಪಾ ಚಕ್ಕ ಕಂಧಾರಿ. ಸೆಪ್ಟೆಂಬರ್ 6ರಿಂದ 8ರ ವರೆಗೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ರುಚಿಕರವಾದ ಸಾಂಪ್ರದಾಯಿಕ (Traditional) ಓಣಂ ಸದ್ಯವನ್ನು ಬಡಿಸಲು ಸಿದ್ಧವಾಗಿದೆ. ಇದನ್ನು ಚೆನ್ನೈ ಮತ್ತು ಬೆಂಗಳೂರು ಎರಡೂ ಔಟ್‌ಲೆಟ್‌ಗಳಲ್ಲಿ ಆಯೋಜಿಸಲಾಗಿದೆ. ಈ ವರ್ಷ, 26 ಬಗೆಯ ಭಕ್ಷ್ಯಗಳಿರುತ್ತವೆ. ಹೊಟೇಲ್‌ಗೆ ಬರಲು ಸಾಧ್ಯವಾಗವರು ಪಾರ್ಸೆಲ್ ಸೌಲಭ್ಯದ (Facility) ಸದುಪಯೋಗವನ್ನು ಪಡೆದುಕೊಳ್ಳಬಹುದು.

3. ರೇಸ್ ಕೋರ್ಸ್ ಹೊಟೇಲ್‌
ರೇಸ್ ಕೋರ್ಸ್‌ನಲ್ಲಿ ಕಾರ್ಯನಿರ್ವಾಹಕ ಬಾಣಸಿಗ ನೀರಜ್ ವಿಶೇಷ ಓಣಂ ಸದ್ಯವನ್ನು ಸಿದ್ಧಪಡಿಸಿದ್ದಾರೆ. ಮಲಯಾಳಿಗರ ವಿಶೇಷ ಹಬ್ಬದ ಊಟ ಸೆಪ್ಟೆಂಬರ್ 1ರಿಂದ 8ರ ವರೆಗೆ ಲಭ್ಯವಿದ್ದು, ಈ ವಿಶೇಷ ಊಟದಲ್ಲಿ ಸಾಂಪ್ರದಾಯಿಕ ಖಾದ್ಯಗಳಾದ ಕಾಯಾ ವರುತಾತ (ಬಾಳೆಹಣ್ಣಿನ ಚಿಪ್ಸ್), ಚೆನಾ ವರುತಾತ (ಯಾಮ್ ಚಿಪ್ಸ್), ಸರ್ಕಾರಾ ಉಪ್ಪೇರಿ (ಬೆಲ್ಲದ ಲೇಪಿತ ಬಾಳೆ ಚಿಪ್ಸ್) (Banana chips), ಮಾವಿನ ಉಪ್ಪಿನಕಾಯಿ, ನಿಂಬೆ ಉಪ್ಪಿನಕಾಯಿ, ಪುಳಿ ಇಂಜಿ (ಹುಣಿಸೇಹಣ್ಣು ಮತ್ತು ಶುಂಠಿ ಚಟ್ನಿ) ), ಕಿಚಡಿ (ಸೌಮ್ಯ ಮಸಾಲೆಯುಕ್ತ ಮೊಸರಿನಲ್ಲಿ ಸೋರೆಕಾಯಿ), ಪಚಡಿ (ಮೊಸರಿನಲ್ಲಿ ಅನಾನಸ್) , ಓಲನ್ (ತೆಂಗಿನಕಾಯಿ ಹಾಲಿನ ಗ್ರೇವಿಯಲ್ಲಿ ಕಪ್ಪು ಬೀನ್ಸ್ ಜೊತೆಗೆ ಬೂದಿ ಸೋರೆಕಾಯಿ),ಮೊದಲಾದ ಭಕ್ಷ್ಯಗಳು ಲಭ್ಯವಿರಲಿವೆ.

Onam Pookalam: ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಹಾಕುವುದು ಯಾಕೆ ?

4. ಹಯಾತ್ ಸೆಂಟ್ರಿಕ್ ಎಂಜಿ ರೋಡ್ ಬೆಂಗಳೂರು
ಓಣಂ ಸಂಭ್ರಮಕ್ಕೆ ಹಯಾತ್ ಸೆಂಟ್ರಿಕ್ ಎಂಜಿ ರೋಡ್ ಬೆಂಗಳೂರು ಎಲ್ಲಾ ಸಾಂಪ್ರದಾಯಿಕ ತಿನಿಸುಗಳೊಂದಿಗೆ ಸಿದ್ಧವಾಗಿದೆ. ವಿಶೇಷ ಅಡುಗೆಯನ್ನು ಸೋಮನಾಥನ್ ಅವರೊಂದಿಗೆ ಸಿದ್ಧಪಡಿಸಲಾಗಿದ್ದು, ಈ ವಿಶೇಷ ಭೋಜನವನ್ನು ಸೆಪ್ಟೆಂಬರ್ 8ರಂದು ಆಯೋಜಿಸಲಾಗಿದೆ. ವಿಶೇಷ ಭೋಜನ ವಿವಿಧ ಸಸ್ಯಾಹಾರಿ ಭಕ್ಷ್ಯಗಳನ್ನು (Vegetarian recipe) ಒಳಗೊಂಡಿದೆ. ಶುಂಠಿ ಉಪ್ಪಿನಕಾಯಿಯಿಂದ ಹಿಡಿದು ಬೆಲ್ಲದ ಚಿಪ್ಸ್, ಪಚಡಿಗಳು ಮತ್ತು ಹೆಚ್ಚಿನವು ಊಟದಲ್ಲಿರುತ್ತದೆ.

5. ಜೆಡಬ್ಲ್ಯೂ ಮ್ಯಾರಿಯೆಟ್ ಬೆಂಗಳೂರು
ಈ ವರ್ಷ, ಜೆಡಬ್ಲ್ಯೂ ಓಣಂ ಆಚರಣೆಯ ಭಾಗವಾಗಿ ಸಧ್ಯದ ಕೆಲವು ಸಿಹಿ ಭಕ್ಷ್ಯಗಳೊಂದಿಗೆ ವಿಶೇಷ ಅಡುಗೆಯನ್ನು ಸಿದ್ಧಪಡಿಸಿದೆ. ವಿಶೇಷ ಬ್ರಂಚ್ ಅನ್ನು ಸೆಪ್ಟೆಂಬರ್ 8ರಂದು ಆಯೋಜಿಸಲಾಗಿದೆ. ನೇಯಿ ಅಪ್ಪಂ, ಬಾಳೆಹಣ್ಣಿನ ದೋಸೆ, ಮೀನ್ ಪೊಲ್ಲಿಚಾತು, ಕರುವೆಪ್ಪಿಲೈ ಕೋಜಿ ರಸಂ, ಜೊತೆಗೆ ಸಾಂಪ್ರದಾಯಿಕ ದಕ್ಷಿಣ ಭಾರತದ ಸಮುದ್ರಾಹಾರ ಕೌಂಟರ್ ಮತ್ತು ಹೆಚ್ಚಿನವುಗಳನ್ನು ಒದಗಿಸುವ ಲೈವ್ ಕೌಂಟರ್‌ಗಳಿಂದ - ಬ್ರಂಚ್ ಬಫೆಯು ಎಲ್ಲರಿಗೂ ಸಾಕಷ್ಟು ಸಂತೋಷದಾಯಕ ಸಂಗತಿಯಾಗಿದೆ. 

Onam 2022: ಹಬ್ಬಕ್ಕೆ ತಯಾರಾಗುತ್ತೆ ರುಚಿಕರವಾದ 26 ಬಗೆಯ ಭಕ್ಷ್ಯ

6. ಶೆರಟಾನ್ ಗ್ರ್ಯಾಂಡ್ ಹೋಟೆಲ್ ಬೆಂಗಳೂರು 
ಶೆರಾಟನ್ ಗ್ರ್ಯಾಂಡ್ ಹೋಟೆಲ್ ಬೆಂಗಳೂರಿನ ಎಲ್ಲಾ ದಿನದ ಫೈನ್ ಡೈನಿಂಗ್ ರೆಸ್ಟೊರೆಂಟ್ ಆಗಿರುವ ಶೆಫ್ಸ್ ಅಟ್ ಫೀಸ್ಟ್, ವಾರ್ಷಿಕ ಓಣಂ ಊಟವನ್ನು ಸೆಪ್ಟೆಂಬರ್ 8ರಂದು ಆಯೋಜಿಸುತ್ತಿದೆ. ಈ ಮೆನುವು ಕೂಟು ಕರಿ, ಮಲಬಾರ್ ಅವಿಯಲ್‌ನಂತಹ ಸಾಂಪ್ರದಾಯಿಕ ಭಕ್ಷ್ಯಗಳ ರುಚಿಕರವಾದ ಹರಡುವಿಕೆಯನ್ನು ಒಟ್ಟುಗೂಡಿಸುತ್ತದೆ. , ಕಾಯ ಮೆಜುಕ್ಕುಪುರಟ್ಟಿ, ಮಲಬಾರ್ ರಸಂ, ತಲಸ್ಸೆರಿ ತರಕಾರಿ ಬಿರಿಯಾನಿ, ಬಿಳಿ ಕುಂಬಳಕಾಯಿ ಮೋರ್ ಕರಿ, ವೆಂಡಕ್ಕೈ ಪಚಡಿ, ಅನಾನಸ್ ಪಚಡಿ ಮತ್ತು ಹೆಚ್ಚು ಭಕ್ಷ್ಯವನ್ನು ಒಳಗೊಂಡಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!