ತೆಲಂಗಾಣಕ್ಕೆ ಆಗಮಿಸಿದ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಮಹಿಳೆ, ವಿಡಿಯೋದಿಂದ ವಿವಾದ

Published : May 15, 2025, 08:18 PM IST
ತೆಲಂಗಾಣಕ್ಕೆ ಆಗಮಿಸಿದ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಮಹಿಳೆ, ವಿಡಿಯೋದಿಂದ ವಿವಾದ

ಸಾರಾಂಶ

ತೆಲಂಗಾಣದಲ್ಲಿ ಆಯೋಜನೆಗೊಂಡಿರುವ ಮಿಸ್ ವರ್ಲ್ಡ್ ಸ್ಪರ್ಧೆಗೆ 100ಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸಿದ್ದಾರೆ. ಆದರೆ ಈ ಸ್ಪರ್ಧಿಗಳ ಪಾದ ತೊಳೆದ ವಿಡಿಯೋ ಇದೀಗ ಭಾರಿ ವಿವಾದಕ್ಕೆ ಗುರಿಯಾಗಿದೆ. 

ಹೈದರಾಬಾದ್(ಮೇ.15) ಭಾರತ ಈ ವರ್ಷ ಮಿಸ್ ವರ್ಲ್ದ್ ಸ್ಪರ್ಧೆಯನ್ನು ತೆಲಂಗಾಣಲ್ಲಿ ಆಯೋಜಿಸಿದೆ. ಮಿಸ್ ವರ್ಲ್ಡ್ ಫಿನಾಲೆ ಹೈದರಾಬಾದ್‌ನಲ್ಲಿ ಮೇ.31ಕ್ಕೆ ನಡೆಯಲಿದೆ. ಈಗಾಗಲೇ 100ಕ್ಕೂ ಹೆಚ್ಚು ವಿವಿಧ ದೇಶಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಬಹುತೇಕ ಬಾರಿ ಮಿಸ್ ವರ್ಲ್ಡ್ ವಿವಾದಕ್ಕೆ ಗುರಿಯಾಗಿದೆ.ಇದಕ್ಕೆ ತೆಲಂಗಾಣದಲ್ಲಿ ಈ ವರ್ಷ ಆಯೋಜನೆಗೊಂಡಿರುವ ಮಿಸ್ ವರ್ಲ್ಡ್ ಸ್ಪರ್ಧೆ ಕೂಡ ಹೊರತಾಗಿಲ್ಲ. ಈ ಬಾರಿ ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ವಿಶ್ವ ಸುಂದರಿ ಸ್ಪರ್ಧಿಗಳ ಪಾದ ತೊಳೆಯಲಾಗಿದೆ. ಸೀರೆಯುಟ್ಟ ನಾರಿಯರು ಇವರ ಪಾದ ತೊಳೆದಿದ್ದಾರೆ. ಇದು ವಿವಾದದ ಕೇಂದ್ರ ಬಿಂದು. 

ವಸಾಹತುಶಾಹಿ ಮನಸ್ಥಿತಿ ಎಂದು ಆಕ್ರೋಶ
ಭಾರತ ಮಿಸ್ ವರ್ಲ್ಡ್ ಸ್ಪರ್ಧೆ ಆಯೋಜಿಸುತ್ತಿದೆ. ಭಾರತಕ್ಕೆ ಬಂದು ಇಲ್ಲಿನ ಸಂಸ್ಕತಿ, ಪ್ರದೇಶಗಳ ವೀಕ್ಷಣೆ, ಮಾಹಿತಿ ತಿಳಿದುಕೊಳ್ಳುವುದು ಅತೀ ಮುಖ್ಯ. ಇಲ್ಲಿನ ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿಸಿಕೊಡುವುದು ಅತೀ ಮುಖ್ಯ. ಆದರೆ ಸೀರೆಯುಟ್ಟ ನಾರಿಯರಿಗೆ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆಯಲು ಸೂಚಿಸಿರುವುದು ಬ್ರಿಟಿಷ್ ವಸಾಹತುಶಾಹಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಕಾರಣ ಏನೇ ಇರಬಹುದು, ಆದರೆ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆಯಲು ಭಾರತೀಯ ನಾರಿಯರ ನೇಮಕ ಮಾಡಲಾಗಿದೆ. ಇದು ಸರಿಯಲ್ಲ. ಅವರ ಪಾದ ಪೂಜೆ ಯಾಕ ಮಾಡಬೇಕು? ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಕುರಿತು ಬಿಆರ್‌ಎಸ್ ಹಂಗಾಮಿ ಅಧ್ಯಕ್ಷ ಕೆಟಿ ರಾಮಾ ರಾವ್ ಕೂಡ ಆಕ್ರೋಶ ಹೊರಹಾಕಿದ್ದಾರೆ.

 Aishwarya Rai vs Sushmita Sen: ಐಶ್ವರ್ಯಾ ರೈಗೆ ಸುಶ್ಮಿತಾ ಸೇನ್ ಕಂಡರೆ ಆಗ್ತಾ ಇರಲಿಲ್ವಾ?

ದೇವಸ್ಥಾನ ಪ್ರವೇಶಕ್ಕೂ ಮುನ್ನ ಪಾದ ಪೂಜೆ
100ಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿದ ಮಿಸ್ ವರ್ಲ್ಡ್ ಸ್ಪರ್ಧಿಗಳಿಗೆ ತೆಲಂಗಾಣದ ವಿವಿಧ ಪ್ರದೇಶಗಳು, ಸಂಸ್ಕೃತಿಗಳ ದರ್ಶನ ಮಾಡಿಸಲಾಗುತ್ತಿದೆ. ಈ ವೇಳೆ ದೇವಸ್ಥಾನ ಭೇಟಿಗೂ ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕೂ ಮುನ್ನ ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ಪೂಜೆ ಮಾಡಲಾಗಿದೆ. ಸೀರೆಯುಟ್ಟ ನಾರಿಯರಿಗೆ ಪಾದ ತೊಳೆಯಲು ಸೂಚಿಸಲಾಗಿದೆ. ಇಲ್ಲಿನ ಸಂಸ್ಕೃತಿಯಂತೆ ನಡೆಯಬೇಕು. ಬ್ರಿಟಿಷರ ಗುಲಾರಮಂತೆ ನಡೆದುಕೊಳ್ಳಬೇಡಿ ಅನ್ನೋ ಸಲಹೆ ಸೂಚನೆಗಳು ವ್ಯಕ್ತವಾಗಿದೆ.

ವಾರಂಗಲ್‌ನ ಪ್ರಾಚೀನ ರಾಮಪ್ಪ ದೇವಾಲಯಕ್ಕೆ ಬಂದ ಮಿಸ್ ಇಂಡಿಯಾ ಸ್ಪರ್ಧಿಗಳಿಗೆ ಮೊದಲು ತೆಲಂಗಾಣ ಮಹಿಳೆಯರು ನೀರು ನೀಡಿದರು. ಒಂದು ತಟ್ಟೆಯಲ್ಲಿ ಪಾದಗಳನ್ನು ಇಟ್ಟು ಆ ನೀರಿನಿಂದ ಪಾದಗಳನ್ನು ತೊಳೆದರು. ನಂತರ ಟವೆಲ್‌ನಿಂದ ಅವರ ಪಾದಗಳನ್ನು ಒರೆಸಿದರು. ಈ ವಿಷಯ ವಿವಾದಾಸ್ಪದವಾಯಿತು. ತೆಲಂಗಾಣ ಮಹಿಳೆಯರ ಮಾನಭಂಗ ಮಾಡುವಂತೆ ವಿದೇಶಿ ಮಹಿಳೆಯರ ಪಾದಗಳನ್ನು ತೊಳೆಸುತ್ತೀರಾ ಎಂದು ಭಾರತ ರಾಷ್ಟ್ರ ಸಮಿತಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಆರ್‌ಎಸ್ ವರ್ಕಿಂಗ್ ಪ್ರೆಸಿಡೆಂಟ್ ಕೆಟಿಆರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಸಿಎಂ ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಟೀಕಿಸಿದ್ದಾರೆ.ವಾರಂಗಲ್ ಪ್ರವಾಸದಲ್ಲಿ ವಿಶ್ವ ಸುಂದರಿ ಸ್ಪರ್ಧಿಗಳ ಪಾದಗಳನ್ನು ತೆಲಂಗಾಣ ಮಹಿಳೆಯರು ತೊಳೆದಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ನಮ್ಮ ಸಂಪ್ರದಾಯ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ತೆಲಂಗಾಣ ಮಹಿಳೆಯರ ಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಆರ್‌ಎಸ್ ಆರೋಪಿಸಿದೆ.

 

 

ಮಾಜಿ ಮಹಿಳಾ ಸಚಿವೆ ಸಬಿತಾ ಇಂದ್ರಾರೆಡ್ಡಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರುದ್ರಮದೇವಿ, ಸಮ್ಮಕ್ಕ-ಸಾರಕ್ಕರಂತಹ ವೀರ ವನಿತೆಯರು ಹುಟ್ಟಿದ ನೆಲದಲ್ಲಿ ತೆಲಂಗಾಣ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ ಮಾನಭಂಗ ಮಾಡಿದೆ. ತೆಲಂಗಾಣ ಮಾತ್ರವಲ್ಲ, ಭಾರತೀಯ ಮಹಿಳೆಯರ ಮಾನವನ್ನು ಜಗತ್ತಿನ ಮುಂದೆ ತೆಗೆದ ಘಟನೆ ಇದು ಎಂದು ಅವರು ఆందోళನ ವ್ಯಕ್ತಪಡಿಸಿದ್ದಾರೆ.

ಆದರೆ, ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಮಿಸ್ ವರ್ಲ್ಡ್ 2025 ಸ್ಪರ್ಧಿಗಳ ಪಾದಗಳನ್ನು ತೆಲಂಗಾಣ ಮಹಿಳೆಯರು ತೊಳೆದಿದ್ದು ಸಂಪ್ರದಾಯ ಎಂದು ಹೇಳುತ್ತಿದ್ದಾರೆ. ನಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯ ನಡೆದಾಗ ಮಹಿಳೆಯರು ಪಾದಗಳನ್ನು ತೊಳೆದು ಅರಿಶಿನ ಹಚ್ಚುವುದು ಸಂಪ್ರದಾಯ. ಇದನ್ನೇ ರೇವಂತ್ ಸರ್ಕಾರ ಮಾಡಿದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ಹೋಗುವಾಗ ಪಾದಗಳನ್ನು ತೊಳೆಯುವುದು ಸಂಪ್ರದಾಯ. ರಾಮಪ್ಪ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗುವ ಮುನ್ನ ಮಿಸ್ ವರ್ಲ್ಡ್ ಸ್ಪರ್ಧಿಗಳು ಅದನ್ನೇ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಈ ವಿಷಯದ ಬಗ್ಗೆ ಗದ್ದಲ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

Yukta Mookhey: ಮಿಸ್‌ ವರ್ಲ್ಡ್‌ ಆಗಿದ್ದ ಆ ನಟಿಗೆ ಬಾಲಿವುಡ್‌ನಲ್ಲಿ ಆಕೆಯ ಎತ್ತರವೇ ಮುಳುವಾಯ್ತಾ?
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!