
Kollur Mookambika ದೇವಿಗೆ ಖಡ್ಗ ಅರ್ಪಿಸುವ ಸಂಪ್ರದಾಯದ ಹಿಂದಿನ ಮಹತ್ವವೇನು? ಮೂಕಾಸುರ ವಧೆ, ವಿಜಯದ ಸಂಕೇತವಾದ ಖಡ್ಗ ಹಾಗೂ ರಾಜಕಾರಣಿಗಳ ಭಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಸಲಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಮಹಿಮೆಯು ಅಪಾರವಾದದ್ದು. ಈ ಕ್ಷೇತ್ರ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಜ್ಞಾನ, ಕಲೆ ಮತ್ತು ವಿದ್ಯೆಗೆ ಪ್ರಸಿದ್ಧವಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು, ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಹಾಗೂ ಸುವರ್ಣಮುಖಿ ನದಿಯ ದಂಡೆಯ ಮೇಲೆ ನೆಲೆಸಿದೆ. ಹಿಂದೆ ಕಾಸುರನೆಂಬ ರಾಕ್ಷಸನು ದೇವಾನುದೇವತೆಗಳಿಗೆ ತೊಂದರೆ ನೀಡುತ್ತಿದ್ದಾಗ, ದೇವಿಯು ಅವನ ಮಾತನ್ನ ಕಸಿದುಕೊಂಡು ಮೂಕಾಸುರನನ್ನಾಗಿ ಮಾಡಿದಳು. ನಂತರ ಆತನನ್ನ ವಧಿಸಿದ್ದರಿಂದ ದೇವಿಗೆ "ಮೂಕಾಂಬಿಕೆ" ಅನ್ನೋ ಹೆಸರು ಬಂತು. ಈ ದೇವಿಯ ಕೈಯಲ್ಲಿರೋ ಆಯುಧ ಖಡ್ಗ.
ಅಂತೆಯೇ ಈ ದೇಗುಲಕ್ಕೆ ಖಡ್ಗವನ್ನ ಉಡುಗೊರೆಯಾಗಿ ಕೊಡಲಾಗುತ್ತೆ. ಅಸಲಿಗೆ ಈ ದೇಗುಲಕ್ಕೆ ನೂರಾರು ಖಡ್ಗಗಳು ಉಡುಗೊರೆ ಆಗಿ ಬಂದಿವೆ. ಹೌದು ಕತ್ತಿ ಅಂದರೆ ಶತ್ರುಸಂಹಾರದ ಮತ್ತು ವಿಜಯದ ಸಂಕೇಂತ. ಅಂತೆಯೇ ಈ ದೇವಿಗೆ ರಾಜಕಾರಣಿಗಳು ಖಡ್ಗವನ್ನ ಸಮರ್ಪಿಸ್ತಾರೆ. ಸದ್ಯ ವಿಜಯ್ ಕೂಡ ಅದೇ ಕಾರಣಕ್ಕೆ ಬೆಳ್ಳಿ ಖಡ್ಗ ನೀಡಿದ್ದಾರೆ. ಹೌದು ಈ ದೇಗುಲದಲ್ಲಿ ಭಕ್ತರ ಕೈಗೆ ರಕ್ಷಾದಾರ ಕಟ್ಟಲಾಗಿತ್ತೆ. ಇದು ದೃಷ್ಟಿ ದೋಷವನ್ನ ನಿವಾರಿಸುತ್ತೆ ಅನೇಕ ರಾಜಕಾರಣಿಗಳಿ ಇಲ್ಲಿಗೆ ಬಂದು ರಕ್ಷಾದಾರ ಕಟ್ಟಿಸಿಕೊಂಡಿದ್ದಾರೆ. ದೇವಿಯ ರಕ್ಷಯನ್ನ ಪಡೆದು ಯಶಸ್ವಿ ಆಗಿದ್ದಾರೆ. ಆ ಸಾಲಿಗೆ ಈಗ ವಿಜಯ್ ಕೂಡ ಸೇರ್ತಾ ಇದ್ದಾರೆ..!