ನಾಡಿದ್ದು ಉಪೇಂದ್ರ ಪ್ರಜಾಕೀಯ ವಿವರ ಬಹಿರಂಗ

Published : Oct 29, 2017, 03:43 PM ISTUpdated : Apr 11, 2018, 12:46 PM IST
ನಾಡಿದ್ದು ಉಪೇಂದ್ರ ಪ್ರಜಾಕೀಯ ವಿವರ ಬಹಿರಂಗ

ಸಾರಾಂಶ

ಹೊಸ ಆಲೋಚನೆಯೊಂದಿಗೆ ಕಳೆದ ಆ.14ರಂದು ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷಕ್ಕೆ ಎರಡು ತಿಂಗಳ ಅವಧಿ ಯಲ್ಲಿ ಹಲವು ರೂಪರೇಷೆಗಳನ್ನು ಸಿದ್ಧಪಡಿಸ ಲಾಗಿದೆ. ಈ ಅವಧಿಯಲ್ಲಿ ಉಪೇಂದ್ರ ಅವರು ವಿವಿಧ ಕ್ಷೇತ್ರದ ಗಣ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರು(ಅ.29): ಎರಡು ತಿಂಗಳ ಹಿಂದೆ ಹೊಸ ಕಲ್ಪನೆಯ ರಾಜಕೀಯ ಸಿದ್ಧಾಂತ ಪ್ರತಿಪಾದಿಸಿ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಮಂಗಳವಾರ ಅಧಿಕೃತವಾಗಿ ಪಕ್ಷದ ಹೆಸರು ಹಾಗೂ ಅದರ ರೂಪುರೇಷೆಯ ಘೋಷಣೆ ಮಾಡಲಿದ್ದಾರೆ.

ಎರಡು ತಿಂಗಳ ಹಿಂದೆ ಹೊಸ ಕಲ್ಪನೆಯ ರಾಜಕೀಯ ಸಿದ್ಧಾಂತ ಪ್ರತಿಪಾದಿಸಿ ಸಂಚಲನ ಮೂಡಿ ಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಮಂಗಳವಾರ ಅಧಿಕೃತವಾಗಿ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. ಹೊಸ ಆಲೋಚನೆಯೊಂದಿಗೆ ಕಳೆದ ಆ.14ರಂದು ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷಕ್ಕೆ ಎರಡು ತಿಂಗಳ ಅವಧಿ ಯಲ್ಲಿ ಹಲವು ರೂಪರೇಷೆಗಳನ್ನು ಸಿದ್ಧಪಡಿಸ ಲಾಗಿದೆ. ಈ ಅವಧಿಯಲ್ಲಿ ಉಪೇಂದ್ರ ಅವರು ವಿವಿಧ ಕ್ಷೇತ್ರದ ಗಣ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಎಲ್ಲರ ಸಲಹೆಗಳನ್ನು ಸ್ವೀಕರಿಸಿ ತಮ್ಮದೇ ಆದ ಆಲೋಚನೆಯಲ್ಲಿ ತಂಡವೊಂದನ್ನು ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಎರಡು ತಿಂಗಳು ಅವಿರತವಾಗಿ ದುಡಿದ ಫಲವಾಗಿ ಪಕ್ಷವು ಸಾಕಷ್ಟು ಬೆಳವಣಿಗೆ ಕಂಡಿದೆ. ಸ್ಪಷ್ಟ ರೂಪರೇಷೆ ಸಿದ್ಧ ವಾಗಿವೆ ಎನ್ನಲಾಗಿದ್ದು, ಅವುಗಳನ್ನು ಜನತೆಯೊಂದಿಗೆ ಹಂಚಿಕೊಳ್ಳಲು ಉಪೇಂದ್ರ ಮಂಗಳವಾರ (ಅ.31) ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಪಕ್ಷದ ಹೆಸರು, ಮುಂಬರುವ ಚುನಾವಣೆ ಯಲ್ಲಿ ಪಕ್ಷದ ಪಾತ್ರ, ಪಕ್ಷದ ಅಧಿಕೃತ ಘೋಷಣೆ, ಕಾರ್ಯಕಾರಿ ಸಮಿತಿ, ಪ್ರಣಾಳಿಕೆ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಜನ ಸೇವಕರು ಅಥವಾ ನಾಯಕರಿಗಿಂತ ಹೆಚ್ಚಾಗಿ ನಮಗೆ ಕಾರ್ಮಿಕರು ಬೇಕು ಎಂದು ಖಾಕಿ ಬಟ್ಟೆಯನ್ನು ತಮ್ಮ ಪಕ್ಷದ ಗುರುತಾಗಿಸಿಕೊಂಡಿರುವ ಉಪೇಂದ್ರ ಅವರು ಜನರ ತೆರಿಗೆ ಹಣ ಪಾರದರ್ಶಕವಾಗಿ ಬಳಕೆಯಾಗಬೇಕು ಎಂದು ಉದ್ದೇಶದಿಂದ ಪಕ್ಷ ಕಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!