ನೆರೆ ಸಂತ್ರಸ್ತರಿಗೆ ಚೆಕ್ ನೀಡಿದ ಉಪೇಂದ್ರ ಅಭಿಮಾನಿ

Published : Sep 19, 2019, 08:55 AM IST
ನೆರೆ ಸಂತ್ರಸ್ತರಿಗೆ ಚೆಕ್ ನೀಡಿದ ಉಪೇಂದ್ರ ಅಭಿಮಾನಿ

ಸಾರಾಂಶ

ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ದಬ್ಬ ಆಚರಿಸಿಕೊಂಡ ಉಪೇಂದ್ರ | ಗಿಡ ಕೊಟ್ಟು ವಿಶ್ ಮಾಡಿದ ಅಭಿಮಾನಿಗಳು | ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿದ ಉಪ್ಪಿ ಅಭಿಮಾನಿ 

ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ನಟ ಉಪೇಂದ್ರ ಅವರು ಹುಟ್ಟು ಹಬ್ಬವನ್ನು ಬುಧವಾರ ಆಚರಿಸಿಕೊಂಡರು. ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಅಭಿಮಾನಿಗಳು ಉಪೇಂದ್ರ ಅವರ ನಿವಾಸಕ್ಕೆ ತೆರಳಿ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದರು. ಉಪ್ಪಿ ಅವರ ಮನವಿಯಂತೆ ಸಾಕಷ್ಟುಮಂದಿ ಅಭಿಮಾನಿಗಳು ಗಿಡಗಳನ್ನು ತಂದು ಕೊಡುವ ಮೂಲಕ ಪರಿಸರ ಪ್ರೀತಿಯನ್ನು ತೋರಿದ್ದು, ಈ ಬಾರಿ ಉಪ್ಪಿ ಅವರ ಹುಟ್ಟು ಹಬ್ಬದ ವಿಶೇಷ ಎನ್ನಬಹುದು.

ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

ಬುಧವಾರ ಬೆಳಗ್ಗಿನಿಂದಲೇ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ಅವರ ನಿವಾಸದ ಮುಂದೆ ಅಭಿಮಾನಿಗಳ ಜಾತ್ರೆಯಂತೆ ಕಂಡಿತು. ನಿರ್ಮಾರ್‍ಪಕರ ಸಂಘದ ಅಧ್ಯಕ್ಷ ಮುನಿರತ್ನ, ಟಿ ಆರ್‌ ಚಂದ್ರಶೇಖರ್‌, ತರುಣ್‌ ಶಿವಪ್ಪ ಹಾಗೂ ಸೌಂದರ್ಯ ಜಗದೀಶ್‌ ಹಾಗೂ ಅವರ ಪುತ್ರ ಮಾ.ಸ್ನೇಹಿತ್‌, ನಿರ್ದೇಶಕರಾದ ನವನೀತ್‌, ಜಯರಾಂ, ಆರ್‌ ಚಂದ್ರು ಸೇರಿದಂತೆ ಹಲವರು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ನಟ ಸುದೀಪ್‌, ತರುಣ್‌ ಸುಧೀರ್‌, ಸಂತೋಷ್‌ ಆನಂದ್‌ ರಾಮ್‌ ಸೇರಿದಂತೆ ಹಲವರು ಟ್ವಿಟ್ಟರ್‌ ಮೂಲಕ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ವಿಶೇಷ ಅಂದರೆ ಉಪೇಂದ್ರ ಅಭಿಮಾನಿ ಭದ್ರಾವತಿ ನಾಗ ಎಂಬುವವರು ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ರುಪಾಯಿ ಚೆಕ್‌ ನೀಡುವ ಮೂಲಕ ವಿಶೇಷವಾಗಿ ಶುಭ ಕೋರಿದರು. ಕೆಲ ಅಭಿಮಾನಿಗಳು ಉಪೇಂದ್ರ ಅವರ ಹಳೆಯ ಚಿತ್ರಗಳ ಪೋಸ್ಟರ್‌, ಫೋಟೋಗಳನ್ನು ತಂದು ನೀಡುವ ಮೂಲಕ ಅಭಿಮಾನ ಮರೆದರು. ಅಭಿಮಾನಿಗಳು ತಂದಿದ್ದ ಗಿಡಗಳನ್ನು ತಾವೇ ಮುಂದೆ ನಿಂತು ಸ್ವೀಕರಿಸುವ ಮೂಲಕ ಉಪೇಂದ್ರ ಅವರು ಸಂಭ್ರಮಿಸಿದರು. ನಿರ್ದೇಶಕ ಲೋಕಿ, ನಟಿ ಪ್ರಿಯಾಂಕ ಉಪೇಂದ್ರ, ಉಪ್ಪಿ ಅಣ್ಣನ ಮಗ ನಟ ನಿರಂಜನ್‌ ಮುಂತಾದವರು ರಿಯಲ್‌ ಸ್ಟಾರ್‌ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?