ಯಶ್ ಅಭಿಮಾನಿಗಳ ಕೋಪಕ್ಕೆ ಕ್ಷಮೆ ಕೇಳಿದ ತಮಿಳು ನಟ: ರಾಕಿಂಗ್ ಸ್ಟಾರ್‌ ಬಗ್ಗೆ ಜೈ ಆಕಾಶ್ ಹೇಳಿದ್ದೇನು?

Published : Aug 20, 2023, 11:41 PM ISTUpdated : Aug 22, 2023, 10:16 AM IST
ಯಶ್ ಅಭಿಮಾನಿಗಳ ಕೋಪಕ್ಕೆ ಕ್ಷಮೆ ಕೇಳಿದ ತಮಿಳು ನಟ: ರಾಕಿಂಗ್ ಸ್ಟಾರ್‌ ಬಗ್ಗೆ ಜೈ ಆಕಾಶ್ ಹೇಳಿದ್ದೇನು?

ಸಾರಾಂಶ

ಸ್ಯಾಂಡಲ್​ವುಡ್​ ಖ್ಯಾತ ನಟ ರಾಕಿಂಗ್ ಸ್ಟಾರ್​ ಯಶ್​ಗೆ ತಮಿಳು ನಟ ಕ್ಷಮೆ ಜೈ ಆಕಾಶ್ ಕೇಳಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನಟ ಯಶ್ ಸಿನಿಮಾ ಜರ್ನಿ ಬಗ್ಗೆ ತಮಿಳು ನಟ ಜೈ ಆಕಾಶ್ ಹಗುರವಾಗಿ ಮಾತನಾಡಿದ್ದರು. ಯಶ್ ತನಗೆ ಸಿನಿಮಾ ಅವಕಾಶ ಇಲ್ಲವೆಂದು ನನ್ನ ಬಳಿ ಕಣ್ಣೀರಿಟ್ಟಿದ್ದರು.

ಸ್ಯಾಂಡಲ್​ವುಡ್​ ಖ್ಯಾತ ನಟ ರಾಕಿಂಗ್ ಸ್ಟಾರ್​ ಯಶ್​ಗೆ ತಮಿಳು ನಟ ಕ್ಷಮೆ ಜೈ ಆಕಾಶ್ ಕೇಳಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನಟ ಯಶ್ ಸಿನಿಮಾ ಜರ್ನಿ ಬಗ್ಗೆ ತಮಿಳು ನಟ ಜೈ ಆಕಾಶ್ ಹಗುರವಾಗಿ ಮಾತನಾಡಿದ್ದರು. ಯಶ್ ತನಗೆ ಸಿನಿಮಾ ಅವಕಾಶ ಇಲ್ಲವೆಂದು ನನ್ನ ಬಳಿ ಕಣ್ಣೀರಿಟ್ಟಿದ್ದರು. ನಾನು ಯಶ್​ಗೆ ಊಟ ಹಾಕಿ ಕಳಿಸಿದ್ದೆ ಎಂದು ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

ನಟನ ಈ ಹೇಳಿಕೆಯ ಬೆನ್ನಲ್ಲೇ ಯಶ್​ ಅಭಿಮಾನಿಗಳು ಆಕ್ರೋಶ ಹೊರಹಾಕುವ ಮೂಲಕ ತಿರುಗಿ ಬಿದ್ದಿದ್ದರು. ಇದೀಗ ನಟ ಜೈ ಆಕಾಶ್ ವಿಡಿಯೋ ಮಾಡುವ ಮೂಲಕ ರಾಕಿಂಗ್​ ಸ್ಟಾರ್​ ಯಶ್ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ನಾನು ಯಶ್ ಜಂಬದ ಹುಡುಗಿ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವು. 

ಅವಕಾಶಕ್ಕಾಗಿ ಯಶ್​ ಕಣ್ಣೀರು ಹಾಕಿದ್ದ, ನಾನೇ ಊಟ ಕೊಟ್ಟಿದ್ದೆ: ತಮಿಳು ನಟನ ವಿಡಿಯೋ ವೈರಲ್​

ನನ್ನ ತಮ್ಮನಾಗಿ ಯಶ್ ಸಿನಿಮಾದಲ್ಲಿ ನಟಿಸಿದ್ದರು. ಪತ್ರಕರ್ತರ ಪ್ರಶ್ನೆಗಳಿಗೆ ಮಾತನಾಡಿದ ವಿಡಿಯೋವನ್ನು ಹೀಗೆ ಕಟ್ ಮಾಡಿ ವೈರಲ್ ಮಾಡಿದ್ದಾರೆ. ಯಶ್ ನನಗೆ ತಮ್ಮ ಇದ್ದಂತೆ. ನಾನು ಯಶ್ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಹೀಗಾಗಿ ನಾನು ಯಶ್ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Allu Arjun: ತಂದೆ-ತಾಯಿ ಕಳೆದುಕೊಂಡಿದ್ದ ಸಹಪಾಠಿ: ಅಲ್ಲು ಅರ್ಜುನ್ ಬದುಕು ಬದಲಿಸಿದ ತಾಯಿಯ ನಿರ್ಧಾರ
ಟ್ರೆಂಡ್ ಆದ ಕೆಡಿ ಸಿನಿಮಾದ ಸೆರಗು ಹಾಡು, ಬಾಲಿವುಡ್‌ನ ನೋರಾ ಹಾಗೂ ಸಂಜಯ್ ದತ್ ಮೋಡಿ