ಚಿತ್ರರಂಗಕ್ಕೆ ಕರೆ ತಂದ ನಿರ್ದೇಶಕನನ್ನು ಮತ್ತೆ ಕೈ ಹಿಡಿದ ಸಾಯಿ ಪಲ್ಲವಿ

By Web DeskFirst Published Jun 21, 2019, 12:42 PM IST
Highlights

ತೆಲುಗು ಸಿನಿ ಪ್ರೇಕ್ಷಕರಿಗೆ ಸಾಯಿ ಪಲ್ಲವಿ ಗುಡ್ ನ್ಯೂಸ್ | ನಾಗಚೈತನ್ಯ ಜೊತೆ ಮುಂದಿನ ಸಿನಿಮಾದಲ್ಲಿ ಸಾಯಿ ಪಲ್ಲವಿ | 

ಪ್ರೇಮಂ ಖ್ಯಾತಿಯ ‘ಸಾಯಿ ಪಲ್ಲವಿ’ ಹಾಗೂ ನಾಗಚೈತನ್ಯ ತೆರೆ ಮೇಲೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. 

ನಾಗಿಣಿ ಪಾತ್ರದಲ್ಲಿರುವ ಈ ನಟ ಯಾರೆಂದು ಥಟ್ ಅಂತ ಹೇಳಿ!

ಪ್ರೇಮಂ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ಸಾಯಿ ಪಲ್ಲವಿ ಈಗ ಬಹುಬೇಡಿಕೆ ನಟಿ. ನಟ ನಾಗಚೈತನ್ಯ ಜೊತೆ ಮುಂದಿನ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ನಿರ್ದೇಶಕ ಶೇಖರ್ ಕಮ್ಮುಲಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸೆಪ್ಟೆಂಬರ್ ನಿಂದ ಶೂಟಿಂಗ್ ಪ್ರಾರಂಭವಾಗಲಿದೆ. 

ಪ್ರೀತಿಸುತ್ತಿರುವ ಮುಸ್ಲಿಂ ಪತ್ರಕರ್ತ ಉಗ್ರನೆಂದು ತಂದೆಯಿಂದ ಹಲ್ಲೆ: ಹೃತಿಕ್ ತಂಗಿ ಆರೋಪ

ಸಾಯಿ ಪಲ್ಲವಿಯನ್ನು ತೆಲುಗು ಚಿತ್ರರಂಗಕ್ಕೆ ಮೊದಲು ಕರೆತಂದಿದ್ದೇ ಶೇಖರ್ ಖಮ್ಮುಲ. ಈಗ ಅವರ ಎರಡನೇ ಸಿನಿಮಾಗೆ ಸಾಯಿ ಪಲ್ಲವಿಯನ್ನು ನಟಿಯಾಗಿ ಕರೆ ತರುತ್ತಿದ್ದಾರೆ. 

ಸಾಯಿ ಪಲ್ಲವಿ ಸದ್ಯ ರಾಣಾ ದಗ್ಗುಬಾಟಿ ಜೊತೆ ಅಭಿನಯದ ‘ವಿರಾಟಪರ್ವಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

click me!