ಹುಚ್ಚ ವೆಂಕಟ್ ಈ ಸ್ಥಿತಿಗೆ ಬರಲು ಇದೇ ಕಾರಣವಾ?

Published : Sep 02, 2019, 01:37 PM ISTUpdated : Sep 02, 2019, 02:04 PM IST
ಹುಚ್ಚ ವೆಂಕಟ್ ಈ ಸ್ಥಿತಿಗೆ ಬರಲು ಇದೇ ಕಾರಣವಾ?

ಸಾರಾಂಶ

  ದಿನೇ ದಿನೇ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕ್ ಮಾಡುತ್ತಾ ಟಾಕ್ ಆಫ್ ದಿ ಟೌನ್ ಆಗಿರುವ ವೆಂಕಟ್ ಇಂತಹ ಪರಿಸ್ಥಿತಿಗೆ ಬರಲು ಹಲವಾರು ಕಾರಣಗಳಿವೆ.

 

2005 ರಲ್ಲಿ ‘ಮೆಂಟಲ್ ಮಂಜ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ವೆಂಕಟರಾಮ್ ಲಕ್ಷ್ಮಣ್ ಅಲಿಯಾಸ್ ಹುಚ್ಚ ವೆಂಕಟ್ ನಂತರ ಕಾಣಿಸಿಕೊಳ್ಳುವುದು ‘ಸ್ವತಂತ್ರ ಪಾಳ್ಯ’ ಚಿತ್ರದಲ್ಲಿ. ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಹೆಸರ ಮಾಡಬೇಕೆಂದು ‘ಹುಚ್ಚ ವೆಂಕಟ್’ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶನಕ್ಕೂ ಇಳಿಯುತ್ತಾರೆ.

ಮಡಿಕೇರಿ,ಮೈಸೂರು ಆಯ್ತು ಮಂಡ್ಯದಲ್ಲೂ ಹುಚ್ಚ ವೆಂಕಟ್ ಹುಚ್ಚಾಟ

ಸಿನಿಮಾ ತೆರೆಕಂಡು ಕೆಲ ದಿನಗಳಾದರೂ ಯಾರೊಬ್ಬನೂ ಸಿನಿಮಾ ವೀಕ್ಷಿಸಲು ಬರುವುದಿಲ್ಲ. ಇದರಿಂದ ಮನನೊಂದ ವೆಂಕಟ್ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಬೈಯುತ್ತಾರೆ. ಆ ಬೈಗುಳದ ಮಾತುಗಳು ವೈರಲ್ ಆಗಿದ್ದು ಅಲ್ಲಿಂದ ಅಭಿಮಾನಿಗಳಿಗೆ ‘ಹುಚ್ಚ ವೆಂಕಟ್’ ಚಿತ್ರದ ಹೀರೋ ಯಾರೆಂದು ಕುತೂಹಲ ಹುಟ್ಟಿಕೊಳ್ಳುತ್ತದೆ.

'ಹುಚ್ಚ' ವೆಂಕಟ್‌ಗೆ ನಾನು ಮಾಡಿದ ದೊಡ್ಡ ಉಪಕಾರವಿದು: ಪ್ರಥಮ್

ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ವೆಂಕಟ್ ಮಾತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತದೆ. ಮಾಧ್ಯಮಗಳು ವೆಂಕಟ್ ಬೆನ್ನಹಿಂದೆ ಬಿದ್ದವು. ಅಲ್ಲಿಗೆ ನಿಲ್ಲದೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟರು. ಆನಂತರ ಮತ್ತೊಂದು ಸೀಸನ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಗೆ ಒದೆಯುವ ವಿಡಿಯೋ ಅವರ ಹೆಸರಿಗೆ ಇನ್ನಷ್ಟು ಧಕ್ಕೆ ತಂದಿತ್ತು. ಹೀಗೆ ಒಂದಾದ ಮೇಲೊಂದು ಕಾರಣಗಳು ಸೇರುತ್ತಾ ಸೇರುತ್ತಾ ಮಾಧ್ಯಮಗಳು ಹಾಗೂ ಜನರ ಮಾತುಗಳು ಇವರ ಮನಸ್ಸಿನ ಮೇಲೆ ಪರಿಣಾಮ ಬಿದ್ದಿರುವ ಸಾಧ್ಯತೆ ಇದೆ. ಈ ಒತ್ತಡದಿಂದಲೇ ಇಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!