ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

Published : Dec 12, 2018, 02:22 PM IST
ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

ಸಾರಾಂಶ

ಮೀ ಟೂ ಆರೋಪದ ನಂತರ ಶೃತಿ ಹರಿಹರನ್‌ಗೆ ಆಫರ್ ಬರ್ತಾ ಇಲ್ಲ | ಇತ್ತೀಚೆಗೆ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ನಂತರ ಶ್ರುತಿ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಅಪರೂಪ. 

ಬೆಂಗಳೂರು (ಡಿ. 12): ಕೆಲವು ತಿಂಗಳುಗಳ ಹಿಂದೆ ವಾರಕ್ಕೆ ಮೂರು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. - ಹೀಗೆ ಹೇಳಿರುವುದು ಶ್ರುತಿ ಹರಿಹರನ್. ಮಾಧ್ಯಮಗಳ ಜತೆ ಈ ಕುರಿತು ಮಾತನಾಡಿರುವ ಅವರು ತಮಗೆ ಆಫರ್ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ.

’ನಾತಿ ಚರಾಮಿ’ ಚಿತ್ರದ ಟ್ರೇಲರ್ ರಿಲೀಸ್

ಇತ್ತೀಚೆಗೆ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ನಂತರ ಶ್ರುತಿ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿ ಕೊಂಡಿದ್ದು ಅಪರೂಪ. ಕಳೆದ ವಾರ ನಡೆದ ಅವರು ಅಭಿನಯಿಸಿರುವ ‘ನಾತಿಚರಾಮಿ’ ಚಿತ್ರದ ಆಡಿಯೋ ಬಿಡುಗಡೆಗೂ ಆಗಮಿಸಿರಲಿಲ್ಲ. ಸಂದರ್ಭ ಹೀಗಿರುವಾಗ ಶ್ರುತಿ ಅವರಿಗೆ ಯಾರೂ ಸಿನಿಮಾ ಆಫರ್ ಮಾಡುತ್ತಿಲ್ಲ ಎಂಬ ಮಾತು ಚರ್ಚೆಗೆ ಬಂದಿತ್ತು. ಇದೀಗ ಅವರೇ ತಮಗೆ ಆಫರ್ ಇಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದಾರೆ. ಈ ಮಾತುಕತೆಯಲ್ಲಿ ಅವರು ಹೇಳಿಕೊಂಡ ಮಾತುಗಳು ಇಲ್ಲಿವೆ. 

- ಸಿನಿಮಾ ಆಫರ್‌ಗಳು ಬರುವುದು ಕಡಿಮೆಯಾಗಿದೆ. ಬಹುಶಃ ಅನೇಕರು ಇನ್ನು ನನ್ನ ಜೊತೆ ಯಾವತ್ತೂ ಕೆಲಸ ಮಾಡುವುದಿಲ್ಲ ಅನ್ನಿಸುತ್ತಿದೆ. ನನ್ನ ಜೊತೆ ಕೆಲಸ ಮಾಡಲು ಇಚ್ಛೆ ಇರುವ ನಿರ್ದೇಶಕರು ಇನ್ನೂ ಬರವಣಿಗೆ ಹಂತದಲ್ಲಿದ್ದಾರೆ. ನಾನು ಕೆಲವರ ದ್ವೇಷ ಕಟ್ಟಿಕೊಳ್ಳುತ್ತೇನೆ ಅನ್ನುವುದು ಗೊತ್ತಿತ್ತು. ಇದರಲ್ಲಿ ಸರ್ಪೈಸ್ ಏನೂ ಇಲ್ಲ. ನಾನು ಇದನ್ನೆಲ್ಲಾ ಒಪ್ಪಿಕೊಂಡೇ ನನ್ನ ಹೋರಾಟ ಮುಂದುವರಿಸುತ್ತೇನೆ.

- ನಾನು ಆಶಾವಾದಿ. ನನ್ನ ಮೇಲೆ ನನಗೆ ನಂಬಿಕೆ ಇದೆ. ಬಹುಶಃ ನಟಿಯಾಗಿಯೇ ಇರುವುದರ ಹೊರತಾಗಿ ನನ್ನ ಬೇರೆಲ್ಲಾ ಕನಸುಗಳನ್ನು ನನಸು ಮಾಡುವ ಸಮಯ ಇದು. ಹಾಗಂತ ನಟನೆ ಬಿಟ್ಟುಬಿಡುವುದಿಲ್ಲ. ನನಗೆ ಖುಷಿಕೊಡುವ ಪಾತ್ರಗಳು ಸಿಕ್ಕರೆ ಖಂಡಿತಾ ನಾನು ನಟಿಸುತ್ತೇನೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?