Published : Jun 19, 2025, 07:05 AM ISTUpdated : Jun 19, 2025, 11:05 PM IST

Kannada Entertainment Live: ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿ ಅಟ್ಟಕ್ಕೇರಿಸಿದ ಬಾಲಿವುಡ್ ನಟಿ ಜೆನಿಲಿಯಾ!

ಸಾರಾಂಶ

'ಯೇ ಮಾಯೆ ಚೇಸಾವೆ ಸಿನಿಮಾ ಪ್ರೊಮೋಶನ್‌ನಲ್ಲಿ ನಾನು ಭಾಗಿಯಾಗುತ್ತಿಲ್ಲ. ಅಭಿಮಾನಿಗಳಿಗೆ ನಾವಿಬ್ಬರೂ ಜೊತೆಯಾಗಿ ಪ್ರೊಮೋಶನ್ ಮಾಡೋದು ಇಷ್ಟ ಇರಬಹುದು. ಆದರೆ ಯಾವಾಗಲೂ ಅವರ ನಿರೀಕ್ಷೆಯನ್ನು ಪೂರೈಸಲು ಸಾಧ್ಯವಾಗೋದಿಲ್ಲ, ನಾಗಚೈತನ್ಯ ಜೊತೆಯಾಗಿ ಕಾಣಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಂಥಾ ವದಂತಿಗಳನ್ನು ಯಾರು ಹಬ್ಬಿಸುತ್ತಾರೆ ಅಂತ ಗೊತ್ತಾಗಲ್ಲ." ಇವು ನಟಿ ಸಮಂತಾ ಮಾತುಗಳು

ಸಮಂತಾ ಹಾಗೂ ನಾಗಚೈತನ್ಯರ ನಿಜ ಜೀವನದ ಪ್ರೇಮಕಥೆಗೆ ಮುನ್ನುಡಿ ಬರೆದ 'ಯೇ ಮಾಯೆ ಚೇಸಾವೆ' ಸಿನಿಮಾ ಜು.18ಕ್ಕೆ ಮರು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಹಾಗೂ ನಾಗಚೈತನ್ಯ ಜೊತೆಯಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ವದಂತಿಗಳನ್ನು ನಟಿ ತಳ್ಳಿಹಾಕಿದ್ದಾರೆ.

ಇನ್ನೊಂದೆಡೆ ಸಮಂತಾ ಮುಂಬೈಯಲ್ಲಿ ಜಿಮ್‌ ನಿಂದ ಮರಳುವಾಗ ರಸ್ತೆ ಮಧ್ಯೆ ಸುತ್ತುವೆಂದು ಅವರ ವೀಡಿಯೋ ಚಿತ್ರೀಕರಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಈ ವರ್ತನೆಗೆ ನಟಿ ಸಿಡಿಮಿಡಿಗೊಂಡಿದ್ದು, ನೆಟ್ಟಿಗರು ಸಮಂತಾ ಪರ ನಿಂತಿದ್ದಾರೆ.

ಈ ವೀಡಿಯೋ ಟ್ರೆಂಡಿಂಗ್ ಆಗಿದೆ.

11:05 PM (IST) Jun 19

ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿ ಅಟ್ಟಕ್ಕೇರಿಸಿದ ಬಾಲಿವುಡ್ ನಟಿ ಜೆನಿಲಿಯಾ!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಾಲಿವುಡ್‌ಗೆ ಕಾಲಿಟ್ಟ ಅಪರೂಪದ ನಟಿಯರಲ್ಲಿ ನಟಿ ಜೆನಿಲಿಯಾ ಡಿಸೋಜಾ ಒಬ್ಬರು. ತಮ್ಮ ಖ್ಯಾತಿಗೆ ದಕ್ಷಿಣ ಚಿತ್ರಗಳೇ ಕಾರಣ ಎಂದು ಜೆನಿಲಿಯಾ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

Read Full Story

10:48 PM (IST) Jun 19

Jr NTR ಚಿತ್ರದಲ್ಲಿ ನಟಿಸುವ ಬಗ್ಗೆ ನಟಿ ಸುಳಿವು ನೀಡಿದ್ರಾ ಕನ್ನಡದ ಈ ನಟಿ..!?

ಯಂಗ್ ಟೈಗರ್ ಎನ್‌.ಟಿ.ಆರ್. ದೇವರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸನ್ನು ಗಳಿಸಿತು. ಪ್ರಸ್ತುತ ಎನ್‌.ಟಿ.ಆರ್. ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Read Full Story

10:34 PM (IST) Jun 19

Kuberaa Movie Review - ರಶ್ಮಿಕಾ ಮಂದಣ್ಣ, ಧನುಷ್‌, ನಾಗಾರ್ಜುನ ಸಿನಿಮಾ ಹೇಗಿದೆ? ಫಸ್ಟ್‌ ರಿವ್ಯೂ ವೈರಲ್!

ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರ ಶುಕ್ರವಾರ ರಂದು ಬಿಡುಗಡೆಯಾಗಿದೆ. ಚಿತ್ರದ ಸೆನ್ಸಾರ್ ರಿವ್ಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

Read Full Story

10:10 PM (IST) Jun 19

ಶಾರುಖ್ ಖಾನ್ 'ಫ್ಯಾನ್' ಚಿತ್ರವಲ್ಲ, 'ಮಿರ್ಜಾಪುರ್' ನನ್ನ ವೃತ್ತಿಬದುಕಿನ ನಿಜವಾದ ತಿರುವು - ಶ್ರಿಯಾ ಪಿಲ್ಗಾಂವ್ಕರ್

'ಮಿರ್ಜಾಪುರ್' ಸರಣಿಯ ಯಶಸ್ಸಿನ ನಂತರ ಶ್ರಿಯಾ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬಂತು. 'ಗಿಲ್ಟಿ ಮೈಂಡ್ಸ್', 'ದಿ ಬ್ರೋಕನ್ ನ್ಯೂಸ್', 'ತಾಜಾ ಖಬರ್' ನಂತಹ ವಿಭಿನ್ನ ಕಥಾಹಂದರದ ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಅವರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

Read Full Story

10:10 PM (IST) Jun 19

Kannada Serial TRP - ಮೊದಲ ಸ್ಥಾನಕ್ಕೆ ಭರ್ಜರಿ ಜಟಾಪಟಿ; ಈ ವಾರದ ಟಾಪ್‌ 10 ಸೀರಿಯಲ್‌ಗಳಿವು!

ಕನ್ನಡದಲ್ಲಿ ಈ ವಾರ ಯಾವ ಧಾರಾವಾಹಿಗೆ ನಂ 1 ಸ್ಥಾನ ಸಿಕ್ಕಿದೆ? ಟಾಪ್‌ 10 ಧಾರಾವಾಹಿಗಳು ಯಾವುವು? 

Read Full Story

08:49 PM (IST) Jun 19

Lakshmi Nivasa Serial - ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಬ್ರೇಕ್‌ ತಗೊಳ್ತಿದ್ದೀನಿ - ನಟಿ ಶ್ವೇತಾ ಸ್ಪಷ್ಟನೆ!

ಲಕ್ಷ್ಮೀ ನಿವಾಸ ಧಾರಾವಾಹಿ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಅಲಿಯಾಸ್ ವಿನೂದಿನಿ‌ ಅವರು ನಟಿಸುತ್ತಿದ್ದಾರೆ.

 

Read Full Story

07:48 PM (IST) Jun 19

ಅಮೆರಿಕ ಕನಸು ಹೊತ್ತಿದ್ದ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಗಾಳಿ, ಪತಿ ಧನಂಜಯ್‌ ಬಗ್ಗೆ ಇಲ್ಲಿದೆ ಮಾಹಿತಿ!

ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು ಮತ್ತು ಧನಂಜಯ್‌ ಶರ್ಮಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ಜೋಡಿ ಈಗ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
Read Full Story

07:14 PM (IST) Jun 19

Karna Serial - ಭವ್ಯಾ ಗೌಡ ವಿರುದ್ಧ ಕೇಸ್- ಧಾರಾವಾಹಿ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ನಟಿ ಹೇಳಿದ್ದೇನು?

ಭವ್ಯಾ ಗೌಡ ವಿರುದ್ಧ ಕೇಸ್​ ದಾಖಲಾಗಿರುವ ಹಿನ್ನೆಲೆಯಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿದ್ದ ಕರ್ಣ ಸೀರಿಯಲ್​ ಸದ್ಯ ಸ್ಥಗಿತಗೊಂಡಿದೆ. ಆದರೆ ಈ ಸೀರಿಯಲ್​ ಬಗ್ಗೆ ಭವ್ಯಾ ಹೇಳಿದ್ದೇನು? ಇಲ್ಲಿದೆ ವಿಡಿಯೋ

 

Read Full Story

05:41 PM (IST) Jun 19

ರಾಜಸ್ಥಾನದ 'ಜೈಸಲ್ಮೇರ್'ನಲ್ಲಿ ಕಾಣಿಸಿಕೊಂಡ ನಟಿ ಮಾಲಾಶ್ರೀ, ಮಗಳು ಆರಾಧನಾ!

'ನಂಜುಂಡಿ ಕಲ್ಯಾಣ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಲಾಶ್ರೀ ಅವರು ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸುತ್ತ ನಟಿ ಮಾಲಾಶ್ರೀ ಅವರು ಹಿಂದೆ ಯಾರೂ ಏರದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು.  

Read Full Story

04:33 PM (IST) Jun 19

ಸಿತಾರೆ ಜಮೀನ್ ಪರ್ - ಅಮೀರ್ ಖಾನ್ ಸಿನಿಮಾಗಳಲ್ಲೇ ಕಡಿಮೆ ಬುಕಿಂಗ್ ಆಗ್ತಿದ್ಯಾ?

ಜೂನ್ 20 ರಂದು ಬಿಡುಗಡೆಯಾಗಲಿರುವ ಆಮಿರ್ ಖಾನ್ ಅವರ ಹೊಸ ಚಿತ್ರ ಸೀತಾರೆ ಜಮೀನ್ ಪರ್ ನ ಅಡ್ವಾನ್ಸ್ ಬುಕಿಂಗ್ ಅಂಕಿಅಂಶಗಳು ಹೊರಬಿದ್ದಿವೆ.

Read Full Story

03:01 PM (IST) Jun 19

ರಾಗಿಣಿ, ಸಂಜನಾ ಅಲ್ಲ.. ಜೈಲಿಗೆ ಹೋಗಿ ಕೆರಿಯರ್ ಹಾಳು ಮಾಡ್ಕೊಂಡ ಖ್ಯಾತ ನಟಿ

ಚಿಕ್ಕ ವಯಸ್ಸಲ್ಲೇ ಸ್ಟಾರ್ ಆದ ಹಲವು ನಟಿಯರು ಜೀವನದಲ್ಲಿ ಕಷ್ಟ ಅನುಭವಿಸಿದ್ದಾರೆ. ಕೆಲವರು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ. ಕೆರಿಯರ್ ಚೆನ್ನಾಗಿರ್ಬೇಕಾದ್ರೆ ಜೈಲಿಗೆ ಹೋಗಿ ಅವಕಾಶಗಳನ್ನ ಕಳೆದುಕೊಂಡ ನಟಿ ಯಾರು ಗೊತ್ತಾ?

Read Full Story

02:34 PM (IST) Jun 19

ಹದಿಹರೆಯದವರಲ್ಲಿ ಪ್ರೀತಿಯ ಕಿಚ್ಚು ಹಚ್ಚಿ 30 ಕೋಟಿ ದೋಚಿದ 2007ರ ಕನ್ನಡ ಸಿನಿಮಾ

ಹದಿಹರೆಯದ ಪ್ರೀತಿ, ಚಂಚಲ ಮನಸ್ಸುಗಳು, ಮತ್ತು ದುರಂತ ಪ್ರೇಮಕಥೆಯೊಂದು 2007ರಲ್ಲಿ ತೆರೆಕಂಡ ಸಿನಿಮಾ ಮೂಲಕ ಬಿಚ್ಚಿಟ್ಟಿದೆ. ಚಿತ್ರದ ಕಥೆ ಕೇವಲ ಸಿನಿಮಾವಾಗಿ ಉಳಿಯದೆ, ಒಂದು ಅಲೆಯನ್ನೇ ಸೃಷ್ಟಿಸಿತು.

Read Full Story

02:31 PM (IST) Jun 19

ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ, ಇಬ್ಬರ ಸಾಂಗತ್ಯ ನೆನೆದು ರಾಧಿಕಾ ಪಂಡಿತ್ ಪೋಸ್ಟ್

18ನೇ ಕ್ರಾಸ್ ಚಿತ್ರದ ಮೂಲಕ ಸಿನಿಮಾಗೆ ಪ್ರವೇಶ ಪಡೆದ ರಾಧಿಕಾ ಪಂಡಿತ್‌ ಅವರ ಬಿಡುಗಡೆಯಾದ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು'. ಈ ಚಿತ್ರದಲ್ಲಿ ನಟ ಯಶ್ ಕೂಡ (ಈಗ ರಾಧಿಕಾ ಪಂಡಿತ್ ಪತಿ) ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

Read Full Story

01:22 PM (IST) Jun 19

ರಣವೀರ್ ಸಿಂಗ್ ಹುಟ್ಟುಹಬ್ಬದಂದು ಬಿಡುಗಡೆ ಆಗಲಿರೋದು ಏನಂತ ಗೊತ್ತಾ? ನಿಮ್ಮ ನಿರೀಕ್ಷೆ ಏನು..!?

ಇತ್ತೀಚೆಗೆ ರಣವೀರ್ ಸಿಂಗ್ ಅವರ 'ಸರ್ಕಸ್' ಮತ್ತು 'ಜಯೇಶ್‌ಭಾಯ್ ಜೋರ್ದಾರ್' ನಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ, 'ದುರಂಧರ್' ಚಿತ್ರವು ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ 

Read Full Story

01:09 PM (IST) Jun 19

ಮಗಳ ಬಗ್ಗೆ ಶೀಘ್ರದಲ್ಲೇ ಸರ್​ಪ್ರೈಸ್​ ಕೊಡ್ತೇನೆ ಎಂದ ರಾಧಿಕಾ ಕುಮಾರಸ್ವಾಮಿ! ಏನದು ಸೀಕ್ರೇಟ್?

ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಪುತ್ರಿ ಶಮಿಕಾ ಬಗ್ಗೆ ಮಾತನಾಡುತ್ತಾ ಶೀಘ್ರದಲ್ಲೇ ಸರ್​ಪ್ರೈಸ್​ ಕೊಡ್ತೇನೆ ಎಂದಿದ್ದಾರೆ. ಏನದು ಸೀಕ್ರೇಟ್​? ನಟಿ ಹೇಳಿದ್ದೇನು ಕೇಳಿ...

 

Read Full Story

01:05 PM (IST) Jun 19

ರಾಮೋಜಿ ಫಿಲಂ ಸಿಟಿ ಭೂತಗಳ ಕೋಟೆ - ಭಯಾನಕ ಅನುಭವ ಹಂಚಿಕೊಂಡ ನಟಿ ಕಾಜೋಲ್

`ಆರ್‌ಆರ್‌ಆರ್‌` ನಟ ಅಜಯ್ ದೇವಗನ್ ಅವರ ಪತ್ನಿ, ಸ್ಟಾರ್ ನಟಿ ಕಾಜೋಲ್, ರಾಮೋಜಿ ಫಿಲಂ ಸಿಟಿಯ ಬಗ್ಗೆ ಮಾಡಿದ ಹೇಳಿಕೆಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿವೆ.

 

Read Full Story

12:47 PM (IST) Jun 19

ಸಲ್ಮಾನ್ ಖಾನ್ ನಿರ್ಮಾಣದ 'ಗಲ್ವಾನ್ ಕಣಿವೆ' ಸಂಘರ್ಷದ ಕಥೆಗೆ ನಾಯಕಿ ಇವರೇ ನೋಡಿ..!

ಈ ಚಿತ್ರದಲ್ಲಿ ಹುತಾತ್ಮ ಯೋಧನೊಬ್ಬನ ಪತ್ನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು ಕೇವಲ ಸಾಂಪ್ರದಾಯಿಕ ನಾಯಕಿಯ ಪಾತ್ರವಲ್ಲ, ಬದಲಿಗೆ ಕಥೆಯ ಆತ್ಮವನ್ನು ಹಿಡಿದಿಡುವ ಅತ್ಯಂತ ಸವಾಲಿನ ಮತ್ತು ಭಾವನಾತ್ಮಕ ಪಾತ್ರವಾಗಿದೆ. 

Read Full Story

12:41 PM (IST) Jun 19

51 ವರ್ಷದ ಮಲೈಕಾ ಅರೋರಾ ತುಂಡುಡುಗೆ ಮಾದಕ ಡಾನ್ಸ್​ಗೆ ಕುಳಿತಲ್ಲೇ ಜಿಗಿದ ಯುವಕರು!

ವಯಸ್ಸೆನ್ನುವುದು ಕೇವಲ ಸಂಖ್ಯೆಯಷ್ಟೇ ಎನ್ನುತ್ತಿರುವ 51 ವರ್ಷದ ಬಾಲಿವುಡ್​ ಮಾದಕ ಬೆಡಗಿ ಮಲೈಕಾ ಅರೋರಾ ಈಗ 'ಆಜ್​ ಕೀ ರಾತ್​' ಹಾಡಿಗೆ ಸ್ಟೆಪ್​ ಹಾಕಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ!

 

Read Full Story

12:36 PM (IST) Jun 19

ಧನುಷ್ ನಟನೆಯ 'ಕುಬೇರ' ಚಿತ್ರದಲ್ಲಿ ಯಾರಿಗೆ ಎಷ್ಟು ಸಂಭಾವನೆ? ನಿಮ್ಮ ಊಹೆ ತಪ್ಪಾಗಬಹುದು!

ಶೇಖರ್ ಕಮ್ಮುಲ ನಿರ್ದೇಶನದ ಧನುಷ್ ನಟನೆಯ ಕುಬೇರ ಚಿತ್ರದಲ್ಲಿ ನಟಿಸಿದವರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Read Full Story

12:19 PM (IST) Jun 19

Boman Irani - ಯಶಸ್ಸು-ವೈಫಲ್ಯಕ್ಕೆ ಬಾಲಿವುಡ್ ಹೊಣೆಯಲ್ಲ, ನಟರ ಸಿದ್ಧತೆಯೇ ಮುಖ್ಯ ಎಂದಿದ್ಯಾಕೆ ಬೊಮನ್ ಇರಾನಿ..!

ನಾನು 40ರ ವಯಸ್ಸಿನಲ್ಲಿ ನಟನೆಗೆ ಬಂದೆ. ಹಾಗಂತ ಚಿತ್ರರಂಗ ನನ್ನನ್ನು ಗುರುತಿಸಲು ತಡ ಮಾಡಿತು ಎಂದು ನಾನು ದೂರುವುದಿಲ್ಲ. ಆ ಅವಕಾಶಕ್ಕಾಗಿ ನಾನು ಸಿದ್ಧನಾಗಲು ತೆಗೆದುಕೊಂಡ ಸಮಯವದು. ನೀವು ಸರಿಯಾದ ಸಮಯಕ್ಕೆ ಬಸ್ ನಿಲ್ದಾಣದಲ್ಲಿ ಇಲ್ಲದಿದ್ದರೆ, ಬಸ್ ತಡವಾಗಿ ಬಂತು ಎಂದು ದೂರುವಂತಿಲ್ಲ.

Read Full Story

12:06 PM (IST) Jun 19

ಮಿಂಚಿನಂತೆ ಮಾಯವಾದ ಮುದ್ದು ಮುಖದ ನಾಯಕಿ; ಎಲ್ಲಿ ಹೋದ್ರು ಈ ನಟಿ?

ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ, ಬೇಗನೆ ಕೆರಿಯರ್‌ಗೆ ಬ್ರೇಕ್ ಹಾಕಿಕೊಂಡ ನಟಿಯರ ಬಗ್ಗೆ ತಿಳಿಯೋಣ. ಒಬ್ಬ ನಟಿ ಈಗ ಏನು ಮಾಡ್ತಿದ್ದಾರೆ ಅಂತ ನೋಡೋಣ.

Read Full Story

12:02 PM (IST) Jun 19

ಮಗಳು ನೈಸಾಳನ್ನು ಟ್ರೋಲ್ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕಾಜೋಲ್ ಹೇಳಿದ್ದೇನು?

ನೈಸಾ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಚಿತ್ರಗಳು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆದಾಗಲೆಲ್ಲಾ, ಕೆಲವರು ಅವರ ಉಡುಗೆ, ಜೀವನಶೈಲಿ ಮತ್ತು ನೋಟದ ಬಗ್ಗೆ ಕಟುವಾಗಿ ಟೀಕಿಸುತ್ತಾರೆ. ಈ ಬಗ್ಗೆ ಮೌನ ಮುರಿದಿರುವ ಕಾಜೋಲ್…

Read Full Story

11:31 AM (IST) Jun 19

666 ಆಪರೇಷನ್‌ ಡ್ರೀಮ್‌ ಥಿಯೇಟರ್‌ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ ಧನಂಜಯ

ಶಿವರಾಜ್‌ ಕುಮಾರ್‌ ಹಾಗೂ ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್‌ ರಾವ್‌.

Read Full Story

11:21 AM (IST) Jun 19

ಖಳನಾಯಕನಾಗಿ ಮಿಂಚಿದ ಆಶಿಷ್ ವಿದ್ಯಾರ್ಥಿ ನೆನಪಾಗುವ 7 ಚಿತ್ರಗಳು; ಯಾವುದೆಲ್ಲಾ ನೆನಪಿದೆ..!?

೧೯೬೨ ಜೂನ್ ೧೯ ರಂದು ಕೇರಳದ ಕುನ್ನೂರಿನಲ್ಲಿ ಜನಿಸಿದ ಆಶೀಶ್ ವಿದ್ಯಾರ್ಥಿ, ಅಭಿನಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಂಡರು. ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡ ಅವರ 7 ಚಿತ್ರಗಳ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ತಿಳಿದುಕೊಳ್ಳೋಣ.

Read Full Story

10:28 AM (IST) Jun 19

ಉದ್ಯಮಿಗೆ ಹನಿಟ್ರ್ಯಾಪ್‌ ಮಾಡಿ 2 ಕೋಟಿಗೂ ಅಧಿಕ ವಸೂಲಿ - ಇನ್‌ಫ್ಲುಯೆನ್ಸರ್ ಕೀರ್ತಿ ಪಾಟೀಲ್ ಆರೆಸ್ಟ್

2 ಕೋಟಿ ರೂ.ಗೂ ಹೆಚ್ಚಿನ ಸುಲಿಗೆ ಪ್ರಕರಣದಲ್ಲಿ ಬೇಕಾಗಿದ್ದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೀರ್ತಿ ಪಾಟೀಲ್‌ಳನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.

Read Full Story

10:21 AM (IST) Jun 19

ಅಮೀರ್ ಖಾನ್‌ ಪರ್ಫೆಕ್ಷನಿಸ್ಟ್, ಮದುವೆಯಲ್ಲೂ ಅದನ್ನೇ ಹುಡುಕ್ತಿದ್ದಾರೆ - ಸಲ್ಮಾನ್ ಖಾನ್

‘ಅಮೀರ್‌ ಖಾನ್‌ ನೋಡಿದ್ರೆ ಅರವತ್ತನೆಯ ವಯಸ್ಸಿಗೆ ಗೌರಿ ಜೊತೆ ಮದುವೆ ಆಗಲು ಹೊರಟಿದ್ದಾರೆ. ನಿಮ್ಮ ಕಥೆ ಏನು?’ ಅಂತ ಬಾಲಿವುಡ್‌ನ ಮಿ ಬ್ಯಾಚುಲರ್‌ ಅಂತಲೇ ಫೇಮಸ್‌ ಆದ ಸಲ್ಲೂ ಬಾಯ್‌ಗೆ ಪ್ರಶ್ನೆ ಕೇಳಲಾಗಿದೆ.

Read Full Story

07:14 AM (IST) Jun 19

40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಕಾಜಲ್ ಅಗರ್ವಾಲ್ ಆಸ್ತಿ ಎಷ್ಟುಗೊತ್ತಾ?

Kajal Aggarwal Net Worth: ನಟಿ ಕಾಜಲ್ ಅಗರ್ವಾಲ್ ಇಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಅವರ ಸಂಪತ್ತಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.

Read Full Story

More Trending News