
ಸಾಮಾನ್ಯ ಸ್ಪರ್ಧಿಯಾಗಿ ಬಿಗ್'ಬಾಸ್ ಮನೆ ಪ್ರವೇಶಿಸಿ ಫೈನಲ್'ನಲ್ಲಿ ಟ್ರೋಪಿ ಮುಡಿಗೇರಿಸಿಕೊಂಡು ಅಚ್ಚರಿ ಸೃಷ್ಟಿಸಿದ ಪ್ರಥಮ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಲು ಹೊರಟಿದ್ದಾರೆ. ಅದೇನು ಅಂತೀರಾ ಕನ್ನಡದ 4 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ 3 ಚಿತ್ರಗಳಲ್ಲಿ ಅವರೆ ನಾಯಕರಂತೆ. ನಾಗತಿಹಳ್ಳಿ ಚಂದ್ರಶೇಖರ್, ಎಸ್. ನಾರಾಯಣ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಚಿತ್ರಗಳು ಕೂಡ ಬುಕ್ ಆಗಿವೆಯಂತೆ.
ಈಗಾಗಲೆ ಆ್ಯಂಕರ್ ಅಕುಲ್ ಬಾಲಾಜಿ ಅಭಿನಯದ 'ದೇವ್ರವ್ನೆ ಬುಡ್ ಗುರು' ಎಂಬ ಚಿತ್ರವನ್ನು ನಿರ್ದೇಶಿಸಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲದೆ ಸಿನಿಮಾಗಳಲ್ಲಿ ಬಂದ ಹಣವನ್ನು ಸಮಾಜ ಸೇವೆಗೆ ನೀಡಲು ನಿರ್ಧರಿಸಿದ್ದು, ಅದಕ್ಕಾಗಿಯೇ ಟ್ರಸ್ಟ್ ಕೂಡ ನಿರ್ಮಿಸಲಿದ್ದಾರಂತೆ.
(ಗಾಂಧಿ ನಗರದ ಗಾಳಿಸುದ್ದಿ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.