ಕೆಜಿಎಫ್ ‘ವಿಲನ್’ ಭೇಟಿಯಾದ ಜನಾರ್ದನ್ ರೆಡ್ಡಿ!

Published : Jan 10, 2019, 12:35 PM ISTUpdated : Jan 10, 2019, 02:42 PM IST
ಕೆಜಿಎಫ್ ‘ವಿಲನ್’ ಭೇಟಿಯಾದ ಜನಾರ್ದನ್ ರೆಡ್ಡಿ!

ಸಾರಾಂಶ

ಸಿನಿಮಾ ಬಿಡುಗಡೆಯಾದ ಮೇಲೆ ಅದನ್ನು ಸಿನಿ ತಾರೆಯರು ಹಾಗೂ ಶ್ರೀ ಸಾಮಾನ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದು ಸಹಜ. ಆದರೆ, ಕೆಜಿಎಫ್ ರಾಜಕಾರಣಿಗಳೂ ನೋಡುವಂತೆ ಮಾಡಿದ್ದು ಮಾತ್ರ ವಿಶೇಷ.

ಬಿಡುಗಡೆಯಾದ 20 ದಿನಗಳಲ್ಲಿಯೇ 200 ಕೋಟಿ ರೂ. ಕಲೆಕ್ಷನ್ ಮಾಡಿದೆ ದಾಖಲೆ ಸೃಷ್ಟಿಸಿದೆ KGF. ಅಪ್ಪಟ ಕನ್ನಡಿಗ ಯಶ್ ಅದ್ಭುತ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನ ಚಿತ್ರವನ್ನು ಯಶಸ್ವಿಯಾಗಿದೆ.. ಇನ್ನು ಸಿಂಪಲ್ ಆದರೂ ಎಫೆಕ್ಟಿವ್ ಪಾತ್ರವೆಂದೆನಿಸಿಕೊಂಡಿರುವುದು ಯಶ್ ತಾಯಿ ಪಾತ್ರ ಮಾಡಿರುವ ಅರ್ಚನಾ ಜೋಶಿ. ಅಲ್ಲದೇ ಚಿತ್ರದಲ್ಲಿ ನಟಿಸಿರುವ ಪುಟ್ಟ ಪುಟ್ಟ ಬಾಲಕರು ಚಿತ್ರಕ್ಕೆ ಜೀವ ತುಂಬಿದ್ದಾರೆ. ಅದರಲ್ಲಿಯೂ ಸಿಂಗಲ್ ಡೈಲಾಗ್‌ನಿಂದಲೇ ಮನೆ ಮಾತಾದ ರಿತ್ವಿಕ್ ಗೌಡ ಅಭಿನಯ ಎಲ್ಲರ ಹೃದಯ ಗೆದ್ದಿದೆ.

200 ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌

ಪ್ರೊಮೋಗಳಲ್ಲಿ ನೋಡಿದರೆ ಒಬ್ಬ ಹುಡುಗ ‘ಅಲ್ಲ ವಿಲನ್’ ಎಂದು ಹೇಳುವಂತಿದೆ ಋತ್ವಿಕ್ ನಟನೆ. ಚಿಕ್ಕಂದಿನಿಂದಲೂ ನಟನೆ ಹಾಗು ವಿಲನ್ ಪಾತ್ರಗಳನ್ನೇ ಹೆಚ್ಚು ಇಷ್ಟಪಟ್ಟ ಬೆಳೆದ ಹುಡುಗನಿಗೆ KGFನ ಈ ಪಾತ್ರ ಒಳ್ಳೆ ಬ್ರೇಕ್ ಕೊಟ್ಟಿದೆ.

ಇಂಥ ಅದ್ಭುತ ಪ್ರತಿಭೆಯನ್ನು ಮಾಜಿ ಸಚಿವ, ಗಣಿ ದಣಿ ಜನಾರ್ದನ ರೆಡ್ಡಿ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ ಶಿವರಾಜ್‌ಕುಮಾರ್ ಸೇರಿ ವಿವಿಧ ನಟರ ಖಡಕ್ ಡೈಲಾಗ್ ಹೇಳಿ, ನಟಿಸಿ ತೋರಿಸಿರುವ ಈ ಬಾಲಕನ ವೀಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೆಜಿಎಫ್-2 ರಿಲೀಸ್‌ ಯಾವಾಗ? ನಿರ್ಮಾಪಕ ಹೇಳುವುದೇನು?

‘KGF ಚಿತ್ರದಲ್ಲಿ ಬಾಲನಟನಾಗಿ ದೇಶದೆಲ್ಲೆಡೆ ಪ್ರೇಕ್ಷಕರ ಗಮನ ಸೆಳೆದ ರಿತ್ವಿಕ್ ಜೊತೆ ಕಳೆದ ಕ್ಷಣಗಳು...’ಎಂಬ ಒಕ್ಕಣಿಕೆಯೊಂದಿಗೆ ರೆಡ್ಡಿ ವೀಡಿಯೋ ಅಪ್‌ಲೋಡ್ ಮಾಡಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!