'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'

First Published Nov 20, 2018, 4:29 PM IST

ಬಾಲಿವುಡ್‌ನ ನೂತನ ದಂಪತಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಗ್ಗೊಳ್ಲುವ ಸಲುವಾಗಿ ಬೆಂಗಲೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬಂದ ಈ ತಾರಾ ಜೋಡಿ ಕ್ಯಾಮರಾ ಕಣ್ಣಿನಲ್ಲಿ ಕಂಡು ಬಂದಿದ್ದು ಹೀಗೆ

ಈಗಾಗಲೇ ಇಟಲಿಯಲ್ಲಿ ಮದುವೆಯಾಗಿರುವ ಬಾಲಿವುಡ್ ತಾರೆಯರಾದ ದೀಪಿಕಾ ಹಾಗೂ ರಣವೀರ್ ಸಿಂಗ್ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
undefined
ದೀಪಿಕಾ ಪಡುಕೋಣೆಯ ತವರು ನಾಡಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ದೀಪಿಕಾ ಕುಟುಂಬ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲಾಗಿದೆ. ಅಲ್ಲದೇ ಅನೇಕ ಗಣ್ಯರೂ ಆಗಮಿಸಿ ನವ ದಂಪತಿಗೆ ಶುಭ ಕೋರಲಿದ್ದಾರೆ.
undefined
ಆರತಕ್ಷತೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ಪ್ರಸಿದ್ಧ ಲೀಲಾ ಪ್ಯಾಲೇಸ್‌ನ್ನು ಬುಕ್ ಮಾಡಿದ್ದಾರೆ.
undefined
ಬೆಂಗಳೂರಿನ ಈ ಆರತಕ್ಷತೆ ಕಾರ್ಯಕ್ರಮದ ಬಳಿಕ ಈ ತಾರಾ ಜೋಡಿ ಮುಂಬೈಗೆ ತೆರಳಲಿದ್ದು, ಅಲ್ಲಿ ಆಯೋಜಿಸಿರುವ ಮತ್ತೊಂದು ರಿಸೆಪ್ಷನ್‌ನಲ್ಲಿ ಪಾಲ್ಗೊಳ್ಳಲಿದೆ.
undefined
ಎರಡನೇ ಆರತಕ್ಷತೆ ಕಾರ್ಯಕ್ರಮ ಮುಂಬೈನ ಗ್ರ್ಯಾಂಡ್ ಹಟ್‌ನಲ್ಲಿ ನವೆಂಬರ್ 28 ರಂದು ನಡೆಯಲಿದೆ. ಈ ರಿಸೆಪ್ಷನ್ ನಲ್ಲಿ ರಣವೀರ್ ಸಿಂಗ್‌ನ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.
undefined
ರಣವೀರ್ ಹಾಗೂ ದೀಪಿಕಾರ ಬಾಲಿವುಡ್ ಸ್ನೇಹಿತರಾದ ಶಾರುಖ್ ಖಾನ್, ಸಂಜಯ್ ಲೀಲಾ ಬನ್ಸಾಲಿ, ಫರಾ ಖಾನ್ ಹಾಗೂ ರೋಹಿತ್ ಶೆಟ್ಟಿ ಕೂಡಾ ಈ ಆರತಕ್ಷತೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
undefined
ಮುಂಬೈನಲ್ಲಿ ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಅತಿಥಿಗಳಿಗೆ ಯಾವುದೇ ಉಡುಗೊರೆ ತರದಂತೆ ಮನವಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
undefined
ಉಡುಗೊರೆಯ ಬದಲಾಗಿ ದೀಪಿಕಾ ನಡೆಸುತ್ತಿರುವ 'ಲೀವ್ ಲವ್ ಲಾಫ್' ಎಂಬ ಎನ್‌ಜಿಒಗೆ ಡೊನೇಷನ್ ನೀಡುವಂತೆ ಕೇಳಿಕೊಳ್ಳಲಾಗಿದೆ. ಎನ್‌ಜಿಒ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗಾಗಿ ಮಾಡಲಾಗಿದೆ.
undefined
ಆರು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿರುವ ರಣವೀರ್ ಹಾಗೂ ದೀಪಿಕಾ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ
undefined
click me!