
ನಿಮಗೆ ಪಂಚತಾರಾ ಹೊಟೇಲ್ನ ಬಿರಿಯಾನಿ ಇಷ್ಟವೋ, ಬೀದಿ ಬದಿಯ ಚಿತ್ರಾನ್ನವೋ ಎಂದು ಸುದೀಪ್ ಗಣೇಶ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಗಣೇಶ್ ನನಗೆ ಬೀದಿ ಬದಿಯ ಚಿತ್ರಾನ್ನವೇ ಬೆಸ್ಟ್ ಎಂದರು. ಅಲ್ಲದೇ ಅದಕ್ಕೆ ಕಾರಣವನ್ನು ಹೇಳಿದರು.
ಕಿಸೆಯಲ್ಲಿ ಕೇವಲ 6 ರೂ. ಇದ್ದಾಗ ನಾನು ಮತ್ತು ನನ್ನ ಸ್ನೇಹಿತರು ಹಾಫ್ ಚಿತ್ರಾನ್ನ ತಿನ್ನುವ ತೀರ್ಮಾನ ಮಾಡಿ ಬೀದಿ ಬದಿ ಚಿತ್ರಾನ್ನ ಪಾರ್ಸಲ್ ತೆಗೆದುಕೊಂಡು ಬಂದಿದ್ದೇವು. ಅದನ್ನು ಓಪನ್ ಮಾಡಿ ಹಂಚಿಕೊಂಡು ತಿನ್ನಬೇಕಿದ್ದರೆ ಚಿತ್ರಾನ್ನದಲ್ಲಿ 5 ರೂ. ನಾಣ್ಯವೊಂದು ಸಿಕ್ಕಿತ್ತು. ಅದನ್ನು ಊಟದ ನಂತರದ ‘ಕೆಲಸಕ್ಕೆ’ ಬಳಸಿಕೊಂಡೆವು ಎಂದು ಗಣೇಶ್ ಉತ್ತರಿಸಿದರು.
‘ಮುಂಗಾರು ಮಳೆಗೆ’ ಭಟ್ಟರು ಮೊದಲು ಇಟ್ಟ ಹೆಸರೇನಾಗಿತ್ತು? ಗಣೇಶ್ ಬಿಚ್ಚಿಟ್ಟ ಸತ್ಯ
ಈಗಲೂ ಚಿತ್ರಾನ್ನ ನೋಡಿದರೆ ಮತ್ತೆ 5 ರೂ. ಕಾಯಿನ್ ಸಿಗಬಹುದೋ? ಎಂದು ಅನಿಸುತ್ತದೆ. ಹಾಗಾಗಿ ಅಂದಿನ ಕಷ್ಟದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ತಮ್ಮ ಸಿನಿಮಾ ಜಗತ್ತಿನ ನೆನಪುಗಳನ್ನು ಹಂಚಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.