
ಕನ್ನಡ ಸಿನಿಮಾ ಜಗತ್ತಿನ ಸೂಪರ್ ಹಿಟ್ ಚಿತ್ರ ಮುಂಗಾರು ಮಳೆಗೆ ಯೋಗರಾಜ್ ಭಟ್ಟರು ಇಟ್ಟ ಹೆಸರು ಬೇರೆಯಾಗಿತ್ತು. ಈ ವಿಚಾರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರೆ ಬಹಿರಂಗ ಮಾಡಿದರು.
ಮುಂಗಾರು ಮಳೆ ಚಿತ್ರಕ್ಕೆ ‘ಚುಮ್ಮಾ’ ಅಂಥ ಹೆಸರಿಟ್ಟಿದ್ದರಂತೆ. ಆದರೆ ಕಾರಣಾಂತರಗಳಿಂದ ಮುಂಗಾರುಮಳೆ ಎಂದು ಬದಲಾಯಿಸಲಾಯಿತಂತೆ. ಮುಂಗಾರು ಮಳೆ ಸಿನಿಮಾದ ವಿವರಗಳನ್ನು ಯೋಗರಾಜ್ ಭಟ್ಟರು ಸುದೀಪ್ ಅವರಿಗೆ ತಿಳಿಸಿದ್ದರಂತೆ. ಆಗ ಸುದೀಪ್ ಅವರಿಗೂ ಟೈಟಲ್ ಕೇಳಿ ಅಂಥ ಪ್ರಭಾವ ಏನೂ ಆಗಿತ್ತಿಲ್ಲವಂತೆ ಈ ವಿಚಾರವನ್ನು ಸುದೀಪ್ ಅವರೆ ಹೇಳಿದರು.
ಇದಾದ ಮೇಲೆ ಸಿನಿಮಾ ಬಿಡಗುಡೆ ನಂತರ ಸುದೀಪ್ ಗೆ ಚಿತ್ರ ತೋರಿಸಲು ಭಟ್ಟರು ವ್ಯವಸ್ಥೆ ಮಾಡಿದ್ದರಂತೆ. ಚಿತ್ರ ನೋಡಿದ ನಂತರ ಸುದೀಪ್ ಗಣೇಶ್ ಅವರ ನಂಬರ್ ಪಡೆದು ಅವರಿಗೆ ಕರೆ ಮಾಡಿದ್ದರಂತೆ. ಏನ್ ಮಾಡಿದ್ದಾನೆ ಬಡ್ಡಿ ಮಗ ಎಂದು ಮನಸ್ಸಿನಲ್ಲೇ ಹೇಳಿಕೊಂಡಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.