
ಬಿಗ್ ಬಾಸ್ ಮನೆಯಿಂದ ಧನರಾಜ್ ಹೊರಬಿದ್ದಿದ್ದು ಫೈನಲ್ಗೆ 5 ಕಾಲಿರಿಸಿದ್ದಾರೆ. ರಶ್ಮಿ, ಕವಿತಾ, ಶಶಿ, ಆ್ಯಂಡಿ ಮತ್ತು ನವೀನ್ ಬಿಗ್ ಬಾಸ್ ಸೀಸನ್ 6 ರ ಫೖನಲ್ ಪ್ರವೇಶ ಮಾಡಿದ್ದಾರೆ.
ಬಿಗ್ಬಾಸ್ ಸೀಸನ್ 6ರ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಬಾಕಿ ಇದೆ. ಭಾನುವಾರ ರಾತ್ರಿ ನಡೆದ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಧನರಾಜ್ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ರಾಕೇಶ್ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು ನವೀನ್, ಶಶಿ, ಕವಿತಾ, ಆ್ಯಂಡಿ, ರಶ್ಮಿ ಮತ್ತು ಧನರಾಜ್ ಪೈಕಿ ನವೀನ್ ಮತ್ತು ಧನರಾಜ್ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು ಎಂದು ಮೊದಲು ಹೇಳಲಾಗಿತ್ತು. ಆದರೆ ಬೆಂಕಿ ಟ್ವಿಸ್ಟ್ ನಲ್ಲಿ ಎಲ್ಲವೂ ಅದಲು ಬದಲಾಗಿದೆ.
ಬಿಗ್ಬಾಸ್ಗೆ ತುಳಸಿ ಪ್ರಸಾದ್ ಬಾರದಿರಲು ಅಸಲಿ ಕಾರಣ!
ಮಧ್ಯರಾತ್ರಿ ಸ್ಪರ್ಧಿಗಳನ್ನು ಎಬ್ಬಿಸಿದ ಬಿಗ್ ಬಾಸ್ ಗಾರ್ಡನ್ ಏರಿಯಾಕ್ಕೆ ಬರುವಂತೆ ಹೇಳಿದರು. ಯಾವ ಅಭ್ಯರ್ಥಿಯ ಭಾವಚಿತ್ರಕ್ಕೆ ಬೆಂಕಿ ಹೊತ್ತುಕೊಳ್ಳುತ್ತದೆಯೋ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದು ಹೇಳಲಾಗಿತ್ತು. ಅಂತಿಮವಾಗಿ ಧನರಾಜ್ ಅವರ ಚಿತ್ರಕ್ಕೆ ಬೆಂಕಿ ಹೊತ್ತಿಕೊಂಡಿತು.
3 ವಾರ ಬಾಕಿಇರುವಾಗಲೇ ಬಿಗ್ಬಾಸ್-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.