
ಯೋಗಿ ದ್ವಾರಕೀಶ್ ನಿರ್ಮಾಣದಲ್ಲಿ ತಯಾರಾದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ನಿಶ್ಚಿಕಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ತಾಯಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಕಥೆಯುಳ್ಳ ಈ ಸಿನಿಮಾ ತಮಿಳಿನ ಪಿಚ್ಚಾಕರನ್ ಚಿತ್ರದ ರಿಮೇಕ್. ಚೈತನ್ಯ ನಿರ್ದೇಶನದಲ್ಲಿ, ಯೋಗಿ ನಿರ್ಮಾಣ ಹಾಗೂ ಚಿರಂಜೀವಿ ನಟನೆಯ ಹ್ಯಾಟ್ರಿಕ್ ಚಿತ್ರವಿದು. ಇದೇ ತಂಡ ಈ ಹಿಂದೆ 'ಆಟಗಾರ' ಮತ್ತು 'ಆಕೆ'ಚಿತ್ರದಲ್ಲಿಯೂ ಒಟ್ಟಾಗಿ ಕಾರ್ಯನಿರ್ವಹಿಸಿತ್ತು.
ಮೇಘನಾ ರಾಜ್ ವರಿಸಿದ ನಂತರ ಬಿಡುಗಡೆಯಾಗುತ್ತಿರುವ ಚಿರಜೀವಿ ಅವರ ಮೊದಲ ಚಿತ್ರ ಇದಾಗಿದ್ದು, ಬಹಳ ಇಷ್ಟಪಟ್ಟು ನಟಿಸಿದ್ದಾರಂತೆ. ಹೇಗಿರುತ್ತೆ ಎನ್ನುವ ಕೂತಹಲ ಕನ್ನಡ ಚಿತ್ರ ರಸಿಕರಲ್ಲಿದೆ.
ಜೀರಂಜಿವಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪುಟಗಳಲ್ಲಿ ಈ ಚಿತ್ರದ ವೀಡಿಯೋ ಹಾಕಿ, ಹೇಗಿದೆ ಎಂದು ಪ್ರತಿಕ್ರಿಯೆ ನೀಡಲು ಆಗ್ರಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.