ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್..!

Suvarna News   | Asianet News
Published : Jul 28, 2020, 02:46 PM ISTUpdated : Jul 28, 2020, 04:12 PM IST
ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್..!

ಸಾರಾಂಶ

ಅನಾಮಧೇಯ ಟ್ರೋಲ್‌ಗೆ ಉತ್ತರಿಸಿದ ಅಮಿತಾಬ್‌ ವಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬಹಿರಂಗ ಪತ್ರದ ಮೂಲಕ ಟ್ರೋಲಿಗರಿಗೆ ಚಾಟಿ ಬೀಸಿದ್ದಾರೆ. ನೀವು ಕೊರೋನಾದಿಂದಲೇ ಸಾಯುತ್ತೀರಿ ಎಂದು ಬರುತ್ತಿರುವ ಅನಾಮಧೇಯ ಮೆಸೇಜುಗಳಿಗೆ ಅವರು ಬರಹದ ಮೂಲಕ ಉತ್ತರಿಸಿದ್ದಾರೆ.

ಅನಾಮಧೇಯ ಟ್ರೋಲ್‌ಗೆ ಉತ್ತರಿಸಿದ ಅಮಿತಾಬ್‌ ವಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬಹಿರಂಗ ಪತ್ರದ ಮೂಲಕ ಟ್ರೋಲಿಗರಿಗೆ ಚಾಟಿ ಬೀಸಿದ್ದಾರೆ. ನೀವು ಕೊರೋನಾದಿಂದಲೇ ಸಾಯುತ್ತೀರಿ ಎಂದು ಬರುತ್ತಿರುವ ಅನಾಮಧೇಯ ಮೆಸೇಜುಗಳಿಗೆ ಅವರು ಬರಹದ ಮೂಲಕ ಉತ್ತರಿಸಿದ್ದಾರೆ.

ಹೇ ಅನಾಮಧೇಯನೇ, ನೀನು ಕನಿಷ್ಠ ನಿನ್ನ ತಂದೆ ಹೆಸರನ್ನೂ ಬರೆದಿಲ್ಲ. ನಿನ್ನ ತಂದೆ ಯಾರೆಂಬುದೇ ನಿನಗೆ ಗೊತ್ತಿಲ್ಲ. ಈಗಿರುವುದು ಎರಡೇ ಸಾಧ್ಯತೆ. ನಾನು ಸಾಯಬೇಕು, ಅಥವಾ ಬದುಕಬೇಕು. ನಾನು ಸತ್ತರೆ ನನ್ನ ಮೇಲೆ ವಾಗ್ದಾಳಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ನನಗೆ ಕೊರೋನಾ ನೆಗೆಟಿವ್‌ ಬಂದಿಲ್ಲ, ವರದಿ ಸುಳ್ಳು: ಅಮಿತಾಭ್‌ ಸ್ಪಷ್ಟನೆ

ಹಾಗೆಯೇ ತಮ್ಮ ಫ್ಯಾನ್ಸ್‌ಗಳನ್ನು, ಫಾಲೋವರ್ಸ್‌ಗಳನ್ನು ನೆನಪಿಸಿದಕೊಂಡ ಅಮಿತಾಬ್‌ ಅವರೆಲ್ಲರೂ ನನ್ನದೇ ಕುಟುಂಬ ಎಂದಿದ್ದಾರೆ. ನಿಮ್ಮ ಕಿಚ್ಚಿನಲ್ಲಿ ನೀವೇ ಸಾಯುತ್ತೀರಿ ಎಂದು ಟ್ರೋಲಿಗರಿಗೆ ಉತ್ತರಿಸಿದ್ದಾರೆ.

'ಅಳ್ಬೇಡಿ, ನೀವು ಬೇಗ ಮನೆಗೆ ಬರ್ತೀರಿ' ಮೊಮ್ಮಗಳ ಪ್ರೀತಿ ನೆನೆದು ಭಾವುಕರಾದ ಅಮಿತಾಭ್

ಐಶ್ವರ್ಯಾ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯ ಕೊರೋನಾ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭ ಮೊಮ್ಮಗಳ ಪ್ರೀತಿಯ ಮಾತು ನೆನೆಸಿ ಭಾವುಕರಾಗಿದ್ದಾರೆ ಅಮಿತಾಭ್ ಬಚ್ಚನ್.

ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಭ್ ಬಚ್ಚನ್ ಕವಿತೆ!

ಸೋಮವಾರ ರಾತ್ರಿ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡ ಬಿಗ್‌ ಬಿ, ಮೊಮ್ಮಗಳು, ಮತ್ತು ಸೊಸೆ ಮನೆಗೆ ಹೋದರು. ಪುಟ್ಟ ಮೊಮ್ಮಗಳು ಅಳಬೇಡಿ, ಬೇಗ ಹುಷಾರಾಗಿ ಬರುತ್ತೀರಿ ಎಂದಳು. ನಾನು ಖಂಡಿತ ಅವಳನ್ನು ನಂಬಬೇಕು ಎಂದು ಬರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?